ಆ್ಯಪ್ನಗರ

ಚಾಕು ತೋರಿಸಿ ಸರಗಳ್ಳತನ: ಮೂವರ ಬಂಧನ

ಮಹಿಳೆಯೊಬ್ಬರಿಗೆ ಚಾಕು ಇರಿದು ಚಿನ್ನದ ಸರ ಅಪಹರಿಸಿದ್ದ ಮೂವರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 12 Feb 2019, 5:00 am
ಬೆಂಗಳೂರು: ಮಹಿಳೆಯೊಬ್ಬರಿಗೆ ಚಾಕು ಇರಿದು ಚಿನ್ನದ ಸರ ಅಪಹರಿಸಿದ್ದ ಮೂವರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web chain snatch1


ನಾಗವಾರದ ನಿವಾಸಿ ಸೈಫ್‌ಖಾನ್‌ ಅಲಿಯಾಸ್‌ ಸಮ್ಮು (28), ಹೆಗ್ಗಡೆ ನಗರದ ನಿವಾಸಿ ಸಬ್ದರ್‌ ಅಹಮ್ಮದ್‌ ಅಲಿಯಾಸ್‌ ನೀಗ್ರೋ (29) ಮತ್ತು ಗೋವಿಂದಪುರದ ರಸೂಲ್‌ (29) ಬಂಧಿತರು. ಇವರಿಂದ 9.5 ಲಕ್ಷ ರೂ ಮೌಲ್ಯದ 175 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಂಕರಿ ಎಂಬುವವರು ಇಬ್ಬರು ಸಂಬಂಧಿಕರ ಜತೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅತ್ತೆಯನ್ನು ನೋಡಲು ಹೊರಟಿದ್ದು, ಮೆಜೆಸ್ಟಿಕ್‌ಗೆ ಹೋಗಲು ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಚಾಕು ತೋರಿಸಿ ಬೆದರಿಸಿ ಸರ ಕಸಿದುಕೊಂಡು ಪರಾರಿ ಆಗಿದ್ದರು. ತಕ್ಷಣ ರಸ್ತೆ ಬಳಿ ಇದ್ದ ವ್ಯಪಾರಿಗಳ ಬಳಿ ಘಟನೆ ವಿವರಿಸಿದ ಮಹಿಳೆ, ಅವರ ನೆರವಿನಿಂದ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವು ಸುಳಿವಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ನಯಾಬ್‌ ರಸೂಲ್‌ ಮತ್ತು ಸಬ್ದರ್‌ ಅಹಮ್ಮದ್‌ ಇಬ್ಬರೂ ಎಂಟು ವರ್ಷಗಳ ಹಿಂದೆ ಹೆಬ್ಬಾಳ ಪೊಲೀಸರಿಂದಲೇ ಬಂಧಿತರಾಗಿ ಜೈಲಿಗೆ ಹೋಗಿದ್ದರು. ಸೈಫ್‌ಖಾನ್‌ನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದರು. ಬೈಕ್‌ ಮತ್ತು ಸರಗಳ್ಳತನದಲ್ಲಿ ಆರೋಪಿಗಳು ಪಳಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ