ಆ್ಯಪ್ನಗರ

ಕೆಲಸ ಮಾಡುತ್ತಿದ್ದ ವಿಮಾ ಕಂಪನಿಗೆ ವಂಚನೆ

ಕೆಲಸ ಮಾಡುತ್ತಿದ್ದ ಕಂಪನಿಗೆ ವಂಚಿಸಿದ ಆರೋಪದಲ್ಲಿ ನಗರದ ಗಾಂಧಿನಗರದ ದಿ ಒರಿಯಂಟಲ್‌ ಇನ್ಶೂರೆನ್ಸ್‌ ಸಂಸ್ಥೆಯ ಹಿರಿಯ ವಿಭಾಗೀಯ ವ್ಯವಸ್ಥಾಪಕಿ ನಳಿನಿ ರಾವ್‌ ಎಂಬುವರ ವಿರುದ್ಧ ಸಿಬಿಐನಲ್ಲಿ ಎಫ್‌ಐಆರ್‌ ದಾಖಲಾಗಿದೆ.

Vijaya Karnataka 10 Jun 2018, 5:00 am
ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ವಂಚಿಸಿದ ಆರೋಪದಲ್ಲಿ ನಗರದ ಗಾಂಧಿನಗರದ ದಿ ಒರಿಯಂಟಲ್‌ ಇನ್ಶೂರೆನ್ಸ್‌ ಸಂಸ್ಥೆಯ ಹಿರಿಯ ವಿಭಾಗೀಯ ವ್ಯವಸ್ಥಾಪಕಿ ನಳಿನಿ ರಾವ್‌ ಎಂಬುವರ ವಿರುದ್ಧ ಸಿಬಿಐನಲ್ಲಿ ಎಫ್‌ಐಆರ್‌ ದಾಖಲಾಗಿದೆ.
Vijaya Karnataka Web cheating for a working insurance company
ಕೆಲಸ ಮಾಡುತ್ತಿದ್ದ ವಿಮಾ ಕಂಪನಿಗೆ ವಂಚನೆ


ನಳಿನಿ ರಾವ್‌ ಅವರು ನಕಲಿ ಏಜೆಂಟರ ಹೆಸರಿನಲ್ಲಿ ವಿಮಾ ವ್ಯವಹಾರ ನಡೆಸಿ, ಕಮಿಷನ್‌ ಅನ್ನು ತನ್ನ ಬ್ಯಾಂಕ್‌ ಖಾತೆಗೆ ಜಮಾ ಮಾಡಿಸಿ, ತಂದೆಯ ಮೂಲಕ ಹಣ ವಿತ್‌ಡ್ರಾ ಮಾಡುತ್ತಿದ್ದರು. ಈ ಬಗ್ಗೆ ಸಿಬಿಐನಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಒರಿಯಂಟಲ್‌ ವಿಮಾ ಕಂಪನಿ ನಿಯದ ಪ್ರಕಾರ, ಕಂಪನಿಯ ಉದ್ಯೋಗಿ ಅಥವಾ ಅವರ ಕುಟುಂಬ ಸದಸ್ಯರು ವಿಮಾ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸುವಂತಿಲ್ಲ. ಆದರೆ, ನಳಿನಿ ಅವರು ಗಾಂಧಿನಗರ ಶಾಖೆಯಲ್ಲಿ ಕೆಲಸ ಮಾಡುವ ವೇಳೆ ಎನ್‌ ಆರ್‌ ಆಶಾ ಹಾಗೂ ಗೀತಾ ಸುವರ್ಣ ಎಂಬುವರ ಹೆಸರಿನಲ್ಲಿ ನಕಲಿ ಏಜೆಂಟರನ್ನು ಸೃಷ್ಟಿಸಿ ಕಮಿಷನ್‌ ಪಡೆದುಕೊಳ್ಳುತ್ತಿದ್ದರು. ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ನಡೆಸಿದಾಗ ಆರೋಪ ಸಾಬೀತಾಗಿತ್ತು. ಹೀಗಾಗಿ ಮೇ 31ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮತ್ತು ಐಪಿಸಿ ಕಲಂ 420 ಅಡಿ ಪ್ರಕರಣ ದಾಖಲಾಗಿದೆ.

2008ರಲ್ಲಿ ನಳಿನಿ ರಾವ್‌ ಅವರು ಗೋವಿಂದರಾಜ ನಗರದಲ್ಲಿ ವಿಭಾಗೀಯ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ್ದರು. ಅಲ್ಲಿಂದ ಮೈಸೂರಿಗೆ ವರ್ಗಾವಣೆಗೊಂಡ ಅವರು ಬಳಿಕ ಗಾಂಧಿನಗರ ಶಾಖೆಗೆ ಬಂದಿದ್ದರು. ಈ ವೇಳೆ ಅಕ್ರಮ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ