ಆ್ಯಪ್ನಗರ

ಕೊತ್ತಂಬರಿ ವ್ಯಾಪಾರಿಗೆ ಜೈಲಿನಿಂದ ಬೆದರಿಕೆ

ಜೈಲಿನಲ್ಲಿರುವ ಇಬ್ಬರು ಕೈದಿಗಳು ಮೊಬೈಲ್ ಫೋನ್ ಸಹಿತ ಎಲ್ಲ ಸವಲತ್ತುಗಳನ್ನು ಆನಂದಿಸುತ್ತಿರುವುದು ಕಂಡುಬಂದಿದೆ.

Bangalore Mirror Bureau 3 May 2018, 9:04 pm
ಬೆಂಗಳೂರು: ಕೊತ್ತಂಬರಿ ಸೊಪ್ಪು ವ್ಯಾಪಾರಿಯೋರ್ವನನ್ನು ಹತ್ಯೆಗೈದು ಪರಪ್ಪನ ಅಗ್ರಹಾರ ಸೇರಿರುವ ಇಬ್ಬರು ಆರೋಪಿಗಳು ಜೈಲಿನಿಂದಲೇ ಮತ್ತಿಬ್ಬರು ಕೊತ್ತಂಬರಿ ಸೊಪ್ಪು ವ್ಯಾಪಾರಿಗಳಿಗೆ ಕರೆ ಮಾಡಿ ಜಾಮೀನಿಗೆ ಹಣ ಹೊಂದಿಸಿ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ.
Vijaya Karnataka Web central prison


ಕೋಲಾರ ಮೂಲದ ವಸೀಮುಲ್ಲ ಬೇಗ್ ಎಂಬ ವ್ಯಾಪಾರಿಗೆ ಕಳೆದ ಸುಮಾರು 20 ದಿನಗಳಿಂದ ಎರಡು ಸಂಖ್ಯೆಗಳಿಂದ ಬೆದರಿಕೆ ಕರೆ ಬರುತ್ತಿತ್ತು. ಜಾಮೀನು ಪಡೆದುಕೊಳ್ಳಲು 20,000 ರೂ. ಬೇಗನೆ ಹೊಂದಿಸಿಕೊಡುವಂತೆ ಇಲ್ಲದಿದ್ದರೆ ಅವರನ್ನು ಹತ್ಯೆ ಮಾಡುವುದಾಗಿ ಈ ಹಿಂದೆ ಪರಿಚಯದವರಾಗಿದ್ದ ಅಜಯ್ ಮತ್ತು ಮುನ್ನಾ ಒತ್ತಡ ತರುತ್ತಿದ್ದರು ಎಂದು ಅವರು ಪೊಲೀಸರಲ್ಲಿ ದೂರು ನೀಡಿದ್ದರು.

ಆದರೆ ಅಜಯ್ ಮತ್ತು ಮುನ್ನಾ ಕಳೆದ ಡಿಸೆಂಬರ್‌ನಲ್ಲಿ ಕೊತ್ತಂಬರಿ ಸೀನ ಅಲಿಯಾಸ್ ಶ್ರೀನಿವಾಸ ಎಂಬವರನ್ನು ಕೊಲೆ ಮಾಡಿ ಜೈಲು ಸೇರಿದ್ದಾರೆ. ವಸೀಮುಲ್ಲ ಅವರಿಗೆ ಬೆದರಿಕೆ ಬಂದಿದ್ದರೂ, ಹಣ ನೀಡಲು ಒಪ್ಪಿರಲಿಲ್ಲ. ಹೀಗಾಗಿ ಪೊಲೀಸರಿಗೆ ಬೆದರಿಕೆ ಕರೆ ಬಂದ ಸಂಖ್ಯೆಯನ್ನು ನೀಡಿದ್ದರು. ಎರಡೂ ಸಂಖ್ಯೆಗಳು ಚಾಲನೆಯಲ್ಲಿದ್ದುದು ಕಂಡುಬಂದಿದೆ.

ಅಲ್ಲದೆ ಅಜಯ್ ಮತ್ತು ಮುನ್ನಾ ಸಿಟಿ ಮಾರ್ಕೆಟ್‌ನ ಮತ್ತೋರ್ವ ಕೊತ್ತಂಬರಿ ಸೊಪ್ಪು ವ್ಯಾಪಾರಿ ಮುನಿಸ್ವಾಮಿ ಎಂಬವರಿಗೂ ಅದೇ ಸಂಖ್ಯೆಯಿಂದ ಕರೆಮಾಡಿ 20,000 ರೂ. ನೀಡಿ ಜಾಮೀನು ಕೊಡಿಸುವಂತೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ಹಣ ನೀಡದೆ ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮುನಿಸ್ವಾಮಿ ಪೊಲೀಸರಿಗೆ ತಿಳಿಸಿದ್ದಾರೆ.

ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳು ಮೊಬೈಲ್ ಬಳಸುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಜೈಲಿನಲ್ಲಿರುವ ಇಬ್ಬರು ಕೈದಿಗಳು ಮೊಬೈಲ್ ಫೋನ್ ಸಹಿತ ಎಲ್ಲ ಸವಲತ್ತುಗಳನ್ನು ಆನಂದಿಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಬೆಂಗಳೂರು ಮಿರರ್‌ ಸಿಟಿ ಮಾರ್ಕೆಟ್ ಪೊಲೀಸರನ್ನು ಸಂಪರ್ಕಿಸಿದಾಗ, ಬೆದರಿಕೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಲ್ಲದೆ ಜೈಲಿನಿಂದ ಕರೆ ಮಾಡಲಾಗಿದ್ದರೆ, ಆ ಬಗ್ಗೆ ಜೈಲಿನ ಅಧಿಕಾರಿಗಳನ್ನು ಎಚ್ಚರಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ