ಆ್ಯಪ್ನಗರ

‘ಕ್ಯಾನ್ಸರ್‌ ಇದ್ದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ’

ಸದಾಶಿವನಗರದಲ್ಲಿ ನಡೆದಿದ್ದ ದಂಪತಿ ಸಾವಿನ ಪ್ರಕರಣದ ನಿಗೂಢ ಇನ್ನೂ ಪತ್ತೆಯಾಗಿಲ್ಲ. ಪತ್ನಿಯನ್ನು ಹತ್ಯೆಗೈದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ಯಾನ್ಸರ್‌ ಕಾರಣಕ್ಕೆ ಈ ವಿಪರೀತದ ತೀರ್ಮಾನ ತೆಗೆದುಕೊಳ್ಳುತ್ತಿರುವುದಾಗಿ ಪತಿ ಡೆತ್‌ನೋಟ್‌ನಲ್ಲಿ ದಾಖಲಿಸಿದ್ದರು. ಆದರೆ ದಂಪತಿಯಲ್ಲಿ ಕ್ಯಾನ್ಸರ್‌ ಇದ್ದದ್ದು ಯಾರಿಗೆ ಎನ್ನುವ ಗುಟ್ಟು ಮಾತ್ರ ಇನ್ನೂ ಗೊತ್ತಾಗಿಲ್ಲ ಎನ್ನುತ್ತಾರೆ ಪೊಲೀಸರು.

Vijaya Karnataka 11 Apr 2019, 5:00 am
ಬೆಂಗಳೂರು : ಸದಾಶಿವನಗರದಲ್ಲಿ ನಡೆದಿದ್ದ ದಂಪತಿ ಸಾವಿನ ಪ್ರಕರಣದ ನಿಗೂಢ ಇನ್ನೂ ಪತ್ತೆಯಾಗಿಲ್ಲ. ಪತ್ನಿಯನ್ನು ಹತ್ಯೆಗೈದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ಯಾನ್ಸರ್‌ ಕಾರಣಕ್ಕೆ ಈ ವಿಪರೀತದ ತೀರ್ಮಾನ ತೆಗೆದುಕೊಳ್ಳುತ್ತಿರುವುದಾಗಿ ಪತಿ ಡೆತ್‌ನೋಟ್‌ನಲ್ಲಿ ದಾಖಲಿಸಿದ್ದರು. ಆದರೆ ದಂಪತಿಯಲ್ಲಿ ಕ್ಯಾನ್ಸರ್‌ ಇದ್ದದ್ದು ಯಾರಿಗೆ ಎನ್ನುವ ಗುಟ್ಟು ಮಾತ್ರ ಇನ್ನೂ ಗೊತ್ತಾಗಿಲ್ಲ ಎನ್ನುತ್ತಾರೆ ಪೊಲೀಸರು.
Vijaya Karnataka Web couple death nobody had information about cancer
‘ಕ್ಯಾನ್ಸರ್‌ ಇದ್ದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ’


ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿ ಡಿ ಅನೆಕ್ಸ್‌ ಸೈಕೂನ್‌ ಪೊಲಾರೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ಮಾ. 2ರಂದು ದಾರುಣ ಘಟನೆ ನಡೆದಿತ್ತು. ಪತಿ ಅತುಲ್‌ ಪತ್ನಿ ಮಮತಾರನ್ನು ಡಂಬಲ್ಸ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಬಳಿಕ ತಾವೂ ತಮ್ಮ ಸಾಕು ನಾಯಿ ಜತೆಗೆ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಸ್ಥಳದಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ 'ಕ್ಯಾನ್ಸರ್‌ನಿಂದ ಬಳಲುವುದಕ್ಕಿಂತ ಸಾವೇ ಮೇಲು' ಎಂದು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮೃತರಲ್ಲಿ ಕ್ಯಾನ್ಸರ್‌ ಯಾರಿಗೆ ಇತ್ತು ಎನ್ನುವದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದರು.

ಮೃತ ದಂಪತಿ ತಮ್ಮ ಸಂಬಂಧಿಕರ ಜತೆಗೆ ಆತ್ಮೀಯ ಒಡನಾಟ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಕ್ಯಾನ್ಸರ್‌ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಮೃತರ ಹತ್ತಿರದ ಸಂಬಂಧಿಕರು ಮತ್ತು ಅತುಲ್‌ ಮನೆಯಲ್ಲೇ ಓದುತ್ತಿದ್ದ ಅವರ ಅಣ್ಣನ ಮಗನನ್ನೂ ಈ ಬಗ್ಗೆ ವಿಚಾರಿಸಲಾಯಿತು. ಯಾರಿಗೂ ಕೂಡ ಕ್ಯಾನ್ಸರ್‌ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಶವ ಪರೀಕ್ಷೆ ವರದಿಯಲ್ಲಿ ಸಾವಿಗೆ ಕಾರಣ ಏನು ಎನ್ನುವುದು ಮಾತ್ರ ದಾಖಲಾಗಿದೆ. ಕ್ಯಾನ್ಸರ್‌ ಇತ್ತೇ ಇಲ್ಲವೇ ಎನ್ನುವುದು ಶವ ಪರೀಕ್ಷೆಯಿಂದ ಗೊತ್ತಾಗುವುದಿಲ್ಲ. ಇಬ್ಬರೂ ಮೃತಪಟ್ಟಿರುವುದರಿಂದ ಆ ಬಗ್ಗೆ ಯಾವುದೇ ಪರೀಕ್ಷೆಗಳನ್ನು ನಡೆಸುವ ಅಗತ್ಯ ಬಿದ್ದಿಲ್ಲ. ಆದರೆ ಮರಣ ಪತ್ರ ಬರೆದಿರುವುದು ಮಾತ್ರ ಪತಿ ಅತುಲ್‌ ಅವರೇ ಎನ್ನುವುದು ಅವರ ಕೈ ಬರವಣಿಗೆಯಿಂದ ಗೊತ್ತಾಗಿದೆ. ಆದರೆ ಮರಣ ಪತ್ರದಲ್ಲಿ ಅವರು ಕ್ಯಾನ್ಸರ್‌ ಬಗ್ಗೆ ಬರೆದಿರುವುದರ ನಿಗೂಢ ಮಾತ್ರ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ