ಆ್ಯಪ್ನಗರ

ವರದಕ್ಷಿಣೆ ಕಿರುಕುಳದಿಂದ ಪತ್ನಿ ಆತ್ಮಹತ್ಯೆ : ಪತಿಗೆ 7 ವರ್ಷ ಜೈಲು!

ಮುಳಬಾಗಿಲು ತಾಲೂಕಿನ ಕಗ್ಗಿನಹಳ್ಳಿ ನಿವಾಸಿ ರಾಮಕೃಷ್ಣರೆಡ್ಡಿ ಅವರ ಮಗಳಾದ ಮಮತ ಅವರನ್ನು 2013ರಲ್ಲಿ ಮಧು ಮದುವೆಯಾಗಿದ್ದರು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಮತ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮಮತ ಅವರ ತಂದೆ ರಾಮಕೃಷ್ಣ ರೆಡ್ಡಿ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ದೂರು ನೀಡಿದರು.

Agencies 29 Sep 2020, 7:43 am
ಮಹದೇವಪುರ: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಅಕೆಯ ಆತ್ಮಹತ್ಯೆಗೆ ಕಾರಣವಾದ ಪತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾಸತ್ರ ನ್ಯಾಯಾಲಯದ ನ್ಯಾಯಧೀಶರು ಆದೇಶಿಸಿದ್ದಾರೆ. ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಮಧುರ ನಗರ ನಿವಾಸಿ ಮಧು ಬಿನ್‌ ಶೇಷಚಾಲಂ ರೆಡ್ಡಿ ಶಿಕ್ಷೆಗೆ ಗುರಿಯಾದವರು.
Vijaya Karnataka Web dowry
Representative Image


ಮುಳಬಾಗಿಲು ತಾಲೂಕಿನ ಕಗ್ಗಿನಹಳ್ಳಿ ನಿವಾಸಿ ರಾಮಕೃಷ್ಣರೆಡ್ಡಿ ಅವರ ಮಗಳಾದ ಮಮತ ಅವರನ್ನು 2013ರಲ್ಲಿ ಮಧು ಮದುವೆಯಾಗಿದ್ದರು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಮತ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮಮತ ಅವರ ತಂದೆ ರಾಮಕೃಷ್ಣ ರೆಡ್ಡಿ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ದೂರು ನೀಡಿದರು.

ತನಿಖೆ ನಡೆಸಿದ ಪೊಲೀಸರು ಆರೋಪ ಪಟ್ಟಿಯನ್ನು ಬೆಂಗಳೂರು ಗ್ರಾಮಾಂತರ 8ನೇ ಅಪಾರ ಜಿಲ್ಲಾಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದರು. 3 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಧೀಶರಾದ ಯಾದವ್‌.ಕೆ ಅವರು ಆರೋಪಿಗೆ 7 ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಅಶ್ಲೀಲ ವೆಬ್‌ಸೈಟ್‌ಗೆ ಶಿಕ್ಷಕಿ, ಸಹಪಾಠಿಗಳ ಫೋಟೋ ಅಪ್‌ಲೋಡ್‌ ಮಾಡಿದ ಕಾನೂನು ವಿದ್ಯಾರ್ಥಿ; ಮತ್ತೇನಾಯ್ತು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ