ಆ್ಯಪ್ನಗರ

ಖಾತೆಯಲ್ಲಿದ್ದ 250ರೂ ಕೊಡಲಿಲ್ಲವೆಂದು ಬ್ಯಾಂಕ್‌ ಸಿಬ್ಬಂದಿ ಮೇಲೆ ಮಚ್ಚು ಎತ್ತಿದ ಗ್ರಾಹಕ!

ಅಕೌಂಟ್‌ನಲ್ಲಿದ್ದ 250ರೂ ನೀಡದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಬ್ಯಾಂಕ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ.

Vijaya Karnataka Web 3 Dec 2019, 8:31 am
ದೊಡ್ಡಬಳ್ಳಾಪುರ: ಅಕೌಂಟ್‌ನಲ್ಲಿದ್ದ 250ರೂ ನೀಡದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಬ್ಯಾಂಕ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಸೋಮವಾರ ನಡೆದಿದೆ.
Vijaya Karnataka Web knife


ದುರ್ಗೇನಹಳ್ಳಿ ನಿವಾಸಿ ಕುಮಾರ್‌ ಮಚ್ಚಿನಲ್ಲಿ ಹಲ್ಲೆಗೆ ಮುಂದಾದ ವ್ಯಕ್ತಿ. ಅದೃಷ್ಟವಶಾತ್‌ ಬ್ಯಾಂಕ್‌ ಸಿಬ್ಬಂದಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ದುರ್ಗೇನಹಳ್ಳಿ ನಿವಾಸಿ ಕುಮಾರ್‌ ತನ್ನ ಖಾತೆಯಲ್ಲಿದ್ದ 250 ಪಡೆಯಲು ಸೋಮವಾರ ಬೆಳಗ್ಗೆ ತೂಬಗೆರೆಯ ಕಾರ್ಪೊರೇಷನ್‌ ಬ್ಯಾಂಕ್‌ಗೆ ಬಂದಿದ್ದ. 2 ವರ್ಷ ಹಣದ ವಹಿವಾಟು ನಡೆಯದ ಕಾರಣ ಎಟಿಎಂ ಕಾರ್ಡ್‌ ಲಾಕ್‌ ಆಗಿದೆ.

ಈ ಕಾರಣದಿಂದ ಆರಂಭದಲ್ಲಿ ಬ್ಯಾಂಕ್‌ ಸಿಬ್ಬಂದಿಗಳನ್ನು ಕೇಳಿದ್ದಾನೆ. ಆದರೆ, ಹಣ ಕೊಡಲೊಪ್ಪದ ಸಿಬ್ಬಂದಿ ಮೇಲೆ ಆಕ್ರೋಶಗೊಂಡ ಕುಮಾರ್‌, ಮಚ್ಚು ತಂದು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ದೃಶ್ಯಗಳನ್ನಾಧರಿಸಿ ಬ್ಯಾಂಕ್‌ ಮ್ಯಾನೇಜರ್‌ ಸುರೇಶ್‌ ದೊಡ್ಡ ಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ