ಆ್ಯಪ್ನಗರ

ಡ್ಯಾಶ್‌ ಬೋರ್ಡ್‌ನಲ್ಲಿಟ್ಟ 10ಲಕ್ಷ ದೋಚಿದರು

ಗಮನ ಬೇರೆಡೆಗೆ ಸೆಳೆದು ಸಿವಿಲ್‌ ಎಂಜಿನಿಯರ್‌ ಒಬ್ಬರ ಕಾರಿನಲ್ಲಿದ್ದ 10 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ.

ವಿಕ ಸುದ್ದಿಲೋಕ 2 Apr 2017, 12:15 pm
ಬೆಂಗಳೂರು: ಗಮನ ಬೇರೆಡೆಗೆ ಸೆಳೆದು ಸಿವಿಲ್‌ ಎಂಜಿನಿಯರ್‌ ಒಬ್ಬರ ಕಾರಿನಲ್ಲಿದ್ದ 10 ಲಕ್ಷ ರೂ. ದೋಚಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
Vijaya Karnataka Web dacoit snatch 10 lakhs
ಡ್ಯಾಶ್‌ ಬೋರ್ಡ್‌ನಲ್ಲಿಟ್ಟ 10ಲಕ್ಷ ದೋಚಿದರು


ಬಿಟಿಎಂ ಲೇಔಟ್‌ ನಿವಾಸಿಯಾಗಿರುವ ಜಮೀರ್‌ ಹಣ ಕಳೆದುಕೊಂಡವರು. ಅವರು, ಶುಕ್ರವಾರ ಮಧ್ಯಾಹ್ನ ಬ್ಯಾಂಕ್‌ ಆಫ್‌ ಇಂಡಿಯಾ ಮಡಿವಾಳ ಶಾಖೆಯಿಂದ 10 ಲಕ್ಷ ರೂ. ಡ್ರಾ ಮಾಡಿಕೊಂಡು ಡ್ಯಾಶ್‌ ಬೋರ್ಡ್‌ನಲ್ಲಿಟ್ಟು ಹೊರಟಿದ್ದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅವರು ಕಾರಿನ ಟಯರ್‌ ಪಂಕ್ಚರ್‌ ಆಗಿರುವುದಾಗಿ ಹೇಳಿದ್ದರು. ಜಮೀರ್‌ ಅವರು ಕಾರಿನಿಂದಿಳಿದು ಪರೀಕ್ಷೆ ಮಾಡಿದಾಗ ಪಂಕ್ಚರ್‌ ಆಗಿರುವುದು ಗೊತ್ತಾಗಿದೆ. ಬಳಿಕ ಅವರು ಸಂಬಂಧಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಟಯರ್‌ ಹಾಕಿಸಿಕೊಂಡು ಹೋಗಿದ್ದರು. ಆದರೆ, ಈ ವೇಳೆಯಲ್ಲಿ ಕೈ ಚಳಕ ತೋರಿದ್ದ ದುಷ್ಕರ್ಮಿಗಳು ಡ್ಯಾಶ್‌ಬೋರ್ಡ್‌ನಲ್ಲಿಟ್ಟಿದ್ದ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದರು.

ರಾತ್ರಿ 7.30ರ ಸುಮಾರಿಗೆ ಕೆಲಸದ ಮೇಲೆ ಬೊಮ್ಮನಹಳ್ಳಿಯಲ್ಲಿರುವ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಕಚೇರಿಯೊಂದರ ಬಳಿ ಹೋಗಿದ್ದ ಜಮೀರ್‌ ಅವರು ಹಣ ಎತ್ತಿಕೊಳ್ಳಲು ಹೋದಾಗ ಅದು ಅಲ್ಲಿರಲಿಲ್ಲ. ಈ ವೇಳೆ ಅವರಿಗೆ ತಾವು ಮೋಸ ಹೋಗಿರುವ ಸಂಗತಿ ಗೊತ್ತಾಗಿದೆ. ಬಳಿಕ ಅವರು ಬಂಡೇಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘‘ಪಂಕ್ಚರ್‌ ಆಗಿದೆ ಎಂದು ಹೇಳಿದ ವ್ಯಕ್ತಿಗಳೇ ಗಮನ ಬೇರೆಡೆ ಸೆಳೆದು ಹಣ ದೋಚಿರಬಹುದು. ಬಿಟಿಎಂ ಲೇಔಟ್‌ನಲ್ಲಿ ಮನೆ ಖರೀದಿಸುವ ಉದ್ದೇಶದಿಂದ ಮನೆ ಮಾಲೀಕರಿಗೆ ಹಣ ನೀಡಲು 10 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾಗಿ,’’ ಜಮೀರ್‌ ಪೊಲೀಸರಿಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ