ಆ್ಯಪ್ನಗರ

OLXನಲ್ಲಿ ಆಫರ್‌ ನೋಡಿ ಮರುಳಾಗಬೇಡಿ!: ಆನ್‌ಲೈನ್ ವಂಚಕರಿದ್ದಾರೆ ಹುಷಾರ್

ನಮ್ಮ ಬದುಕೇ ಈಗ ಆನ್‌ಲೈನ್. ಊಟ ತರಿಸಿಕೊಳ್ಳುವುದರಿಂದ ಹಿಡಿದು, ಕೆಲಸ ಗಿಟ್ಟಿಸಿಕೊಳ್ಳುವವರೆಗೆ ಎಲ್ಲದಕ್ಕೂ ಇಂಟರ್‌ನೆಟ್ ಜಗತ್ತನ್ನೇ ಅವಲಂಬಿಸಿದ್ದೇವೆ ನಾವು. ಈ ಇಂಟರ್‌ನೆಟ್‌ ಜಗತ್ತಿನಲ್ಲಿ ವಂಚಕರ ಸಾಮ್ರಾಜ್ಯವೂ ದೊಡ್ಡದಾಗೇ ಇದೆ. ಇಂಥದ್ದೇ ಒಂದು ದುಷ್ಕೃತ್ಯ ಈಗ ಬಯಲಾಗಿದೆ.

Bangalore Mirror Bureau 10 Sep 2019, 2:42 pm
ಬೆಂಗಳೂರು: ಆತ ದಿವ್ಯಾಂಗ. ಸಾಮಾನ್ಯರಂತೆ ನಡೆದಾಡುವ ಶಕ್ತಿ ಇಲ್ಲ. ಆದರೆ ಎಲ್ಲರಂತೆ ತಲೆಎತ್ತಿ ಬದುಕಬೇಕೆಂಬ ಛಲವೇನೂ ಕಡಿಮೆ ಇಲ್ಲ. ಕೆಲಸ ಹುಡುಕುತ್ತಿದ್ದ ಆತನಿಗೆ OLXನಲ್ಲಿ ಹಾಕಿದ್ದ ಒಂದು ಜಾಹೀರಾತು ಕಣ್ಣಿಗೆ ಬಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಇದೆ ಎಂದು ಏಜೆಂಟ್ ವೊಬ್ಬ ಜಾಹೀರಾತು ಹಾಕಿದ್ದ. ಇದೀಗ ಈ ಜಾಹೀರಾತು ದಿವ್ಯಾಂಗನನ್ನು ಬೀದಿಗೆ ತಂದು ನಿಲ್ಲಿಸಿದೆ. ಮಡಿವಾಳ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಆಡುಗೋಡಿ ನಿವಾಸಿ ಅರುಣ್ ಕುಮಾರ್ ಜೆ, ತಾವು ಮೋಸ ಹೋದ ವೃತ್ತಾಂತವನ್ನು ವಿವರಿಸಿದ್ದಾರೆ.
Vijaya Karnataka Web internet fraud


ಅರುಣ್ ಮೋಸ ಹೋಗಿದ್ದು ಹೇಗೆ?

ನನ್ನ ಪತ್ನಿ ಆನ್‌ಲೈನ್‌ನಲ್ಲಿ ಉದ್ಯೊಗ ಹುಡುಕುತ್ತಿದ್ದ ಸಂದರ್ಭದಲ್ಲಿ OLXನಲ್ಲಿ ಹಾಕಿದ್ದ ಜಾಹೀರಾತು ಕಣ್ಣಿಗೆ ಬಿತ್ತು. ಎಸ್‌ಬಿಐನಲ್ಲಿ ಟೆಲಿಕಾಲರ್‌ ಹುದ್ದೆ ಖಾಲಿ ಇದೆ ಎಂದು ಜಾಹೀರಾತು ನೀಡಲಾಗಿತ್ತು. ಸುಲ್ತಾನ್ ಖಾನ್ ಎಂಬಾತನ ನಂಬರ್ ಇತ್ತು. ಆತನೊಂದಿಗೆ ನನ್ನ ಪತ್ನಿ ಒಂದೆರಡು ಬಾರಿ ಚರ್ಚಿಸಿದ್ದಳು. ಆಗ ಆರೋಪಿ ಸುಲ್ತಾನ್ ಖಾನ್ ಇನ್ನೂ ಒಂದಷ್ಟು ಜನಕ್ಕೆ ಉದ್ಯೋಗ ಖಾಲಿ ಇರುವ ಬಗ್ಗೆ ಹೇಳಿ ಎಂದು ಮನವಿ ಮಾಡಿದ್ದ. ನಾನೂ ಕೂಡಾ ಆತನ ಜೊತೆ ಫೋನ್‌ನಲ್ಲಿ ಮಾತನಾಡಿದ್ದೆ. ಆತ ನನಗೂ ಎಸ್‌ಬಿಐನಲ್ಲಿ ಕೆಲಸ ಕೊಡಿಸೋದಾಗಿ ಭರವಸೆ ಕೊಟ್ಟಿದ್ದ. ನಾನು ಪೋಲಿಯೋ ಪೀಡಿತ ಎಂದು ಹೇಳಿದ್ರೂ ಕೂಡಾ ಕೆಲಸ ಸಿಕ್ಕೇ ಸಿಗುತ್ತೆ ಎಂದು ನಂಬಿಸಿದ್ದ. ನನಗೆ ಅಪಘಾತ ಕೂಡಾ ಆಗಿದೆ, ಎರಡೂ ಕಾಲುಗಳಲ್ಲಿ ಸ್ಟೀಲ್ ರಾಡ್‌ಗಳಿವೆ ಎಂದು ವಿವರಿಸಿದೆ. ಎಲ್ಲಾ ಕೇಳಿದ ಬಳಿಕ ಗೋಪಾಲನ್‌ ಮಾಲ್‌ ಬಳಿ ಬಂದುಬಿಡು ಎಂದು ಸುಲ್ತಾನ್ ಖಾನ್ ಹೇಳಿದ. ನಾನು ಅಲ್ಲಿಗೆ ಹೋದೆ. ಕೆಲ ಹೊತ್ತು ಮಾತನಾಡಿದ ಬಳಿಕ ಆತ ತಾನು ಬ್ಯಾಂಕ್‌ಗೆ ಹೋಗಬೇಕು, ಮಡಿವಾಳದ ಸಿಲ್ಕ್‌ ಬೋರ್ಡ್ ಬಳಿ ಕಚೇರಿ ಇದೆ, ನೀವೂ ಅಲ್ಲಿಗೇ ಬನ್ನಿ ಎಂದ.

ನಾನು ಸಿಲ್ಕ್‌ಬೋರ್ಡ್‌ ತಲುಪಿದ ಮೇಲೆ ಅರುಣ್ ಬಳಿಯಿದ್ದ ಕಾಗದ ಪತ್ರಗಳನ್ನು ವಂಚಕ ಖಾನ್ ಪಡೆದುಕೊಂಡ. ಬಳಿಕ ಎಲ್ಲವನ್ನೂ ಝೆರಾಕ್ಸ್‌ ಮಾಡಿಸಬೇಕು, ನಿಮ್ಮ ಹೋಂಡಾ ಆಕ್ಟಿವಾ ಗಾಡಿ ಕೊಡಿ ಎಂದು ಕೇಳಿದ. ಆಗ ನಾನು ಗಾಡಿ ಕೊಡೋದಿಲ್ಲ ಎಂದೆ. ಕೂಡಲೇ ವಂಚಕ ಸುಲ್ತಾನ್ ಖಾನ್, ನನ್ನನ್ನು ತಳ್ಳಿ ಗಾಡಿ ತೆಗೆದುಕೊಂಡು ಹೋಗಿಬಿಟ್ಟ. ಅಕ್ಕಪಕ್ಕದಲ್ಲಿದ್ದ ಜನರನ್ನು ಸಹಾಯಕ್ಕೆ ಕೂಗಿ ಕರೆದೆ ಯಾರೂ ಬರಲೇ ಇಲ್ಲ. ಝೆರಾಕ್ಸ್‌ ಮಾಡಿಸಿಕೊಂಡು ಬರ್ತೇನೆ ಎಂದು ಸುಲ್ತಾನ್ ಹೇಳಿದ್ದ ಕಾರಣ ನಾನು ನಿರಂತರವಾಗಿ 6 ಗಂಟೆಗಳ ಕಾಲ ಅದೇ ಸ್ಥಳದಲ್ಲಿ ನಿಂತು ಕಾದೆ, ಆಗ ನಾನು ಮೋಸ ಹೋಗಿದ್ದು ಗೊತ್ತಾಯ್ತು ಅಂತಾರೆ ಅರುಣ್.

ಅಮಿತಾಬ್ ಬಚ್ಚನ್ ಟಿವಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಹೆಸರಲ್ಲಿ ಭಾರೀ ವಂಚನೆ!

ಇಷ್ಟೆಲ್ಲಾ ಆದ ಬಳಿಕವೂ ಅರುಣ್‌ಗೆ ವಂಚಕ ಸುಲ್ತಾನ್ ಖಾನ್ ಎಸ್‌ಎಂಎಸ್ ಕಳಿಸಿದ್ದಾನೆ. ನೀನು 20 ಸಾವಿರ ರೂಪಾಯಿ ಕೊಟ್ಟರೆ ನಿನ್ನ ವಾಹನವನ್ನು ವಾಪಸ್ ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನಂತರ ಬೆದರಿಕೆ ಮೊತ್ತ 30 ಸಾವಿರ ರೂಪಾಯಿಗೆ ಏರಿಕೆ ಮಾಡಿದ್ದಾನೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಆರೋಪಿ ಸುಲ್ತಾನ್ ಖಾನ್ ಜಾಡು ಹಿಡಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

OLX ಸಂಸ್ಥೆ ಕೂಡಾ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದೆ. ನಮ್ಮ ಗ್ರಾಹಕರ ಸುರಕ್ಷತೆಯೇ ನಮ್ಮ ಪ್ರಧಾನ ಆದ್ಯತೆ ಎಂದಿರುವ OLX, ಕಳೆದ 6 ತಿಂಗಳ ಅವಧಿಯಲ್ಲಿ ನೂರಾರು ವಂಚನೆ ಕರೆಗಳು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದೆ. ವಂಚಕರ ಅಕೌಂಟ್‌ಗಳನ್ನು ಪತ್ತೆ ಹಚ್ಚುವುದು ಹಾಗೂ ಗ್ರಾಹಕರಿಗೆ ವಂಚಕರ ವಿಚಾರದಲ್ಲಿ ಜಾಗೃತಿ ನೀಡುವ ಕೆಲಸವನ್ನೂ OLX ಮಾಡುತ್ತಿದೆ.

ಜಾಹೀರಾತು, ಕಿರುತೆರೆಯಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ವಂಚನೆ: ಬಂಧನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ