ವರದಕ್ಷಿಣೆ ಕಿರುಕುಳ: ಇಂಡಿಗೋ ಪೈಲಟ್ ಬಂಧನ
ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ ಇಂಡಿಗೋ ಏರ್ಲೈನ್ಸ್ನ ಪೈಲಟ್ ಯುಧಿಷ್ಠರ್ ಪೂನಿಯಾ (32) ಎಂಬುವರನ್ನು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
Vijaya Karnataka 17 Jan 2019, 5:00 am
ಬೆಂಗಳೂರು : ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ ಇಂಡಿಗೋ ಏರ್ಲೈನ್ಸ್ನ ಪೈಲಟ್ ಯುಧಿಷ್ಠರ್ ಪೂನಿಯಾ (32) ಎಂಬುವರನ್ನು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ಯುಧಿಷ್ಠರ್ ವಿರುದ್ಧ ಅವರ ಪತ್ನಿ ಪೀನು ಸಿಂಗ್ ಅವರು 2018ರ ಸೆ.5ರಂದು ಎಚ್ಎಎಲ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಓಡಾಡುತ್ತಿದ್ದ ಯುಧಿಷ್ಠರ್ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ತಿಳಿಸಿದರು.
ಜೈಪುರದ ಹನುಮಾನ್ನಗರ ನಿವಾಸಿಯಾದ ಯುಧಿಷ್ಠರ್ ಮತ್ತು ಪೀನು ನಡುವೆ 2014ರ ಮೇ 2ರಂದು ವಿವಾಹವಾಗಿದೆ. ಪ್ರಾರಂಭದಲ್ಲಿ ಗುಡ್ಗಾಂವ್ ಹಾಗೂ ದಿಲ್ಲಿಯಲ್ಲಿ ವಾಸವಿದ್ದು, 2016ರಲ್ಲಿ ದಂಪತಿ ಬೆಂಗಳೂರಿಗೆ ವಾಸ್ತವ್ಯ ಬದಲಿಸಿ ಮಾರತ್ತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು.
ಯುಧಿಷ್ಠರ್ ಹಾಗೂ ಅವರ ತಾಯಿ ಬಿಮ್ಲಾ ಪೂನಿಯಾ ಮದುವೆ ಸಮಯದಲ್ಲಿ ಹಣ, ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಆರಂಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಅವರು, ಹೆಣ್ಣು ಮಗು ಜನಿಸಿದ ಬಳಿಕ ಕಿರುಕುಳ ನೀಡಲು ಶುರು ಆರಂಭಿಸಿದರು. ತವರಿನಿಂದ ಮತ್ತಷ್ಟು ಹಣ, ಆಭರಣ ತರುವಂತೆ ಪೀಡಿಸುತ್ತಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದರು. ಪತಿ ಮತ್ತು ಅತ್ತೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೀನು ದೂರು ನೀಡಿದ್ದರು.
ಯುಧಿಷ್ಠರ್ ವಿರುದ್ಧ ಅವರ ಪತ್ನಿ ಪೀನು ಸಿಂಗ್ ಅವರು 2018ರ ಸೆ.5ರಂದು ಎಚ್ಎಎಲ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಓಡಾಡುತ್ತಿದ್ದ ಯುಧಿಷ್ಠರ್ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ತಿಳಿಸಿದರು.
ಜೈಪುರದ ಹನುಮಾನ್ನಗರ ನಿವಾಸಿಯಾದ ಯುಧಿಷ್ಠರ್ ಮತ್ತು ಪೀನು ನಡುವೆ 2014ರ ಮೇ 2ರಂದು ವಿವಾಹವಾಗಿದೆ. ಪ್ರಾರಂಭದಲ್ಲಿ ಗುಡ್ಗಾಂವ್ ಹಾಗೂ ದಿಲ್ಲಿಯಲ್ಲಿ ವಾಸವಿದ್ದು, 2016ರಲ್ಲಿ ದಂಪತಿ ಬೆಂಗಳೂರಿಗೆ ವಾಸ್ತವ್ಯ ಬದಲಿಸಿ ಮಾರತ್ತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು.
ಯುಧಿಷ್ಠರ್ ಹಾಗೂ ಅವರ ತಾಯಿ ಬಿಮ್ಲಾ ಪೂನಿಯಾ ಮದುವೆ ಸಮಯದಲ್ಲಿ ಹಣ, ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಆರಂಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಅವರು, ಹೆಣ್ಣು ಮಗು ಜನಿಸಿದ ಬಳಿಕ ಕಿರುಕುಳ ನೀಡಲು ಶುರು ಆರಂಭಿಸಿದರು. ತವರಿನಿಂದ ಮತ್ತಷ್ಟು ಹಣ, ಆಭರಣ ತರುವಂತೆ ಪೀಡಿಸುತ್ತಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದರು. ಪತಿ ಮತ್ತು ಅತ್ತೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೀನು ದೂರು ನೀಡಿದ್ದರು.