ಆ್ಯಪ್ನಗರ

ಬೆಂಗಳೂರಲ್ಲಿ ಡಾರ್ಕ್‌ನೆಟ್‌ ಮೂಲಕ ಡ್ರಗ್‌ ಡೀಲ್‌ ಮಾಡುತ್ತಿದ್ದ ಗ್ಯಾಂಗ್‌ ಸೆರೆ

ಡಾರ್ಕ್‌ನೆಟ್ ಜಾಲದ ಮೂಲಕ ಕಾಳಸಂತೆಯಲ್ಲಿ ದುಬಾರಿ ಮಾದಕ ದ್ರವ್ಯ ತರಿಸಿ ಮಾರಾಟ ಮಾಡುತ್ತಿದ್ದ ಮತ್ತೊಂದು ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿ, ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಡ್ರಗ್‌ ವಶಪಡಿಸಿಕೊಂಡಿದ್ದಾರೆ .

Vijaya Karnataka Web 29 Jul 2020, 10:32 pm
ಬೆಂಗಳೂರು: ಡಾರ್ಕ್‌ನೆಟ್ ಜಾಲದ ಮೂಲಕ ಕಾಳಸಂತೆಯಲ್ಲಿ ದುಬಾರಿ ಮಾದಕ ದ್ರವ್ಯ ತರಿಸಿ ಮಾರಾಟ ಮಾಡುತ್ತಿದ್ದ ಮತ್ತೊಂದು ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿ, ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಡ್ರಗ್‌ ವಶಪಡಿಸಿಕೊಂಡಿದ್ದಾರೆ .
Vijaya Karnataka Web arrest


ಧೀರಜ್‌ ಮತ್ತು ನಿತಿನ್‌ ಮೋಹನ್‌ ಗ್ಯಾಂಗ್‌ನ ಸದಸ್ಯರು ಬಂಧಿತರು. ಈ ಗ್ಯಾಂಗ್‌ ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ಗಳ ಜತೆ ಸಂಪರ್ಕದಲ್ಲಿದ್ದು, ಕೊರಿಯರ್‌ ಮೂಲಕ ಎಲ್‌ಎಸ್‌ಡಿ ಮತ್ತು ಎಂಡಿಎಂಎ ಹಾಗೂ ಸ್ಟಾಂಪ್‌ಗಳನ್ನು ತರಿಸಿ ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ ಮೂಲದವರಾದ ನಿತಿನ್‌ ಮೋಹನ್‌ (22) ಶಹದ್‌ ಮೊಹಮ್ಮದ್‌ (24), ಅಜ್ಮಲ್‌ (22), ಅಜಿತ್‌, ಕೆ.ಜಿ. ವರ್ಗೀಸ್‌(21) ಬಂಧಿತರು. ಇವರೆಲ್ಲರಿಗೂ ಕಿಂಗ್‌ಪಿನ್‌ ಆಗಿರುವ ಧೀರಜ್‌ ತಲೆಮರೆಸಿಕೊಂಡಿದ್ದಾನೆ. ಆತ ಗೋವಾದಲ್ಲಿಇರುವ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಬಂಧಿಸಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ ಸಿಬ್ಬಂದಿಯಿಂದಲೇ ಗ್ರಾಹಕರ ಖಾತೆಗೆ ಕನ್ನ: ₹22 ಲಕ್ಷ ವರ್ಗಾಯಿಸಿದ್ದ ಆರೋಪಿ ಸೆರೆ!

ಏನೇನು ವಶ?

ಬಂಧಿತರಿಂದ 2000 ಎಲ್‌ಎಸ್‌ಡಿ ಸ್ಟಾಂಪ್‌ಗಳು, 110 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 10 ಎಕ್ಸ್‌ಟೆಸಿ ಮಾತ್ರೆ, 5 ಕೆಜಿ ಸಿಂಥೆಟಿಕ್‌ ಗಾಂಜಾ ಸೇರಿ ನಾನಾ ಮಾದರಿಯ ದುಬಾರಿ ಬೆಲೆಯ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಿಂಗ್‌ಪಿನ್‌ ಧೀರಜ್‌ಗೆ ಡಾರ್ಕ್ ನೆಟ್‌ ಮೂಲಕ ವ್ಯವಹರಿಸುವ ಡ್ರಗ್‌ ಜಾಲದ ಸಂಪರ್ಕ ಸಿಕ್ಕಿತ್ತು. ಚಿಕ್ಕಬಾಣಾವರದಲ್ಲಿನೆಲೆಸಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಇತರೆ ಆರೋಪಿಗಳ ಒಡನಾಟ ಬೆಳೆಸಿದ ಧೀರಜ್‌, ನಿಧಾನವಾಗಿ ಅವರನ್ನೂ ಡ್ರಗ್‌ ಜಾಲದ ಕೊಂಡಿಗಳನ್ನಾಗಿ ಮಾರ್ಪಡಿಸಿ ಸುಲಭವಾಗಿ ಹಣ ಮಾಡುವುದನ್ನು ಕಲಿಸಿದ್ದ.

ಡಾರ್ಕ್ನೆಟ್‌ ವೆಬ್‌ ಮುಖಾಂತರ ಲ್ಯಾಟಿನ್‌ ಅಮೆರಿಕ, ನೆದರ್‌ಲ್ಯಾಂಡ್‌, ಜರ್ಮನಿ ಸೇರಿ ನಾನಾ ದೇಶಗಳಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸುಳಿವು ಸಿಗದಂತೆ ಸ್ಟಾಂಪ್‌ ಗಳನ್ನು ಸ್ಮಗ್ಲಿಂಗ್‌ ಮಾಡುವುದರಲ್ಲಿ ಧೀರಜ್‌ ಪಳಗಿದ್ದಾನೆ.

ರಾಜ್ಯದಲ್ಲಿ ಪ್ರತಿದಿನ 5 ಸಾವಿರ ಪ್ರಕರಣ: ಬೆಂಗಳೂರಲ್ಲಿ 50 ಸಾವಿರ ದಾಟಿದ ಸೋಂಕು!

ನಾನಾ ಕಲಾಕೃತಿಗಳು ಹಾಗೂ ಪೇಂಟಿಂಗ್‌ಗಳ ಮೂಲಕ ಸ್ಟ್ಯಾಂಪ್‌ ತರಿಸುತ್ತಿದ್ದ. ಪಬ್‌ಗಳು, ಡಿಸ್ಕೋಥೆಕ್‌ಗಳು ಹಾಗೂ ದೊಡ್ಡಮಟ್ಟದ ಪಾರ್ಟಿಗಳಲ್ಲಿ ಲಕ್ಷಗಟ್ಟಲೆ ಬೆಲೆಯ ಸ್ಟಾಂಪ್‌ ಮಾರಾಟ ಆಗುತ್ತಿತ್ತು. ಧೀರಜ್‌ ವ್ಯವಸ್ಥಿತವಾಗಿ ಕರ್ನಾಟಕ, ಗೋವಾ, ಚೆನ್ನೈ, ಪೂನಾ, ಮುಂಬೈನಲ್ಲಿ ಪೆಡ್ಲರ್‌ಗಳ ಜಾಲ ಕಟ್ಟಿದ್ದಾನೆ ಎನ್ನುವುದು ಇತರೆ ಆರೋಪಿಗಳ ವಿಚಾರಣೆಯಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ