ಆ್ಯಪ್ನಗರ

ಗೇಲ್‌ ಗ್ಯಾಸ್‌ ಲೀಕ್‌: ಬೆಸ್ಕಾಂ ಅಧಿಕಾರಿ ವಿರುದ್ಧ ಕೇಸ್‌ ದಾಖಲು

ಗೇಲ್‌ ಗ್ಯಾಸ್‌ ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ವಿದ್ಯುತ್‌ ಕೇಬಲ್‌ ಅಳವಡಿಸಲು ಮುಂದಾದಾಗ ಅಗ್ನಿ ಅನಾಹುತ ನಡೆದ ಹಿನ್ನೆಲೆಯಲ್ಲಿ ಬೆಸ್ಕಾಂ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Vijaya Karnataka 25 Jan 2019, 5:00 am
ಬೆಂಗಳೂರು: ಗೇಲ್‌ ಗ್ಯಾಸ್‌ ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ವಿದ್ಯುತ್‌ ಕೇಬಲ್‌ ಅಳವಡಿಸಲು ಮುಂದಾದಾಗ ಅಗ್ನಿ ಅನಾಹುತ ನಡೆದ ಹಿನ್ನೆಲೆಯಲ್ಲಿ ಬೆಸ್ಕಾಂ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಾಗಿದೆ.
Vijaya Karnataka Web fir against b besocm officer
ಗೇಲ್‌ ಗ್ಯಾಸ್‌ ಲೀಕ್‌: ಬೆಸ್ಕಾಂ ಅಧಿಕಾರಿ ವಿರುದ್ಧ ಕೇಸ್‌ ದಾಖಲು


ಪ್ರಕರಣದ ಕುರಿತು ಗೇಲ್‌ ಗ್ಯಾಸ್‌ ಕಂಪನಿಯ ಮುಖ್ಯ ವ್ಯವಸ್ಥಾಪಕ ರವಿಕುಮಾರ್‌ ಎಂಬುವರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಿಂಗಸಂದ್ರ ಎಇಸಿಎಸ್‌ ಲೇಔಟ್‌ನಲ್ಲಿ ಗೇಲ್‌ ಕಂಪನಿಯಿಂದ 63ಎಂಎಂ ಗ್ಯಾಸ್‌ಪೈಪ್‌ಲೈನ್‌ ಅಳವಡಿಸಲಾಗಿದೆ. ಗ್ಯಾಸ್‌ ಕಂಪನಿಗೆ ಲಿಖಿತ ಮಾಹಿತಿ ನೀಡದೆ, ಜ.19ರಂದು 7 ಗಂಟೆ ಸುಮಾರಿಗೆ ಬೆಸ್ಕಾಂನ ಸಹಾಯಕ ಎಂಜಿನಿಯರ್‌ ಮೋಹನ್‌ ಎಂಬುವರು ತಮ್ಮ ಗುತ್ತಿಗೆದಾರರನ್ನು ಕರೆತಂದು ಎಚ್‌.ಟಿ ಕೇಬಲ್‌ ಅಳವಡಿಸುವ ಕೆಲಸ ಆರಂಭಿಸಿದ್ದರು. ಸ್ಥಳದಲ್ಲಿ ಗುಂಡಿ ತೋಡಿದ ಕಾರಣ ಗ್ಯಾಸ್‌ ಪೈಪ್‌ಲೈನ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೇಲ್‌ ಕಂಪನಿಯ ನಿರ್ವಹಣೆ ತಂಡದವರು ಬೆಂಕಿ ನಂದಿಸಿದ್ದಾರೆ. ತುಂಡಾಗಿದ್ದ ಗ್ಯಾಸ್‌ಪೈಪ್‌ ಲೈನ್‌ ಅನ್ನು ರಾತ್ರಿ 11 ಗಂಟೆಗೆ ದುರಸ್ತಿ ಮಾಡಲಾಗಿದೆ. 11.30ಕ್ಕೆ ಗ್ಯಾಸ್‌ ಸರಬರಾಜು ಯಥಾಸ್ಥಿತಿಗೆ ತರಲಾಗಿದೆ.

ಗ್ಯಾಸ್‌ಪೈಪ್‌ಲೈನ್‌ ತುಂಡಾದ ಕುರಿತು ಕಂಪನಿಗೆ ಮಾಹಿತಿ ನೀಡದೆ ಕಾಮಗಾರಿ ನಡೆಸಿ ಅನಾಹುತಕ್ಕೆ ಕಾರಣವಾಗಿರುವ ಬೆಸ್ಕಾಂ ಎ.ಇ ಮೋಹನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ