ಆ್ಯಪ್ನಗರ

ಆಹಾರ ಡೆಲಿವರಿ ವೇಳೆ ಜಗಳ: ಮಾಲೀಕನ ತಲೆಗೆ 18 ಹೊಲಿಗೆ

ಆ್ಯಪ್‌ ಮೂಲಕ ಆರ್ಡರ್‌ ಪಡೆದು ಬಿರಿಯಾನಿ ಡೆಲಿವರಿಗೆಂದು ತೆರಳಿದ್ದ ಹೋಟೆಲ್‌ ಮಾಲೀಕ ಗ್ರಾಹಕನಿಂದ ಹಲ್ಲೆಗೊಳಗಾಗಿ ತಲೆಗೆ 18 ಹೊಲಿಗೆ ಹಾಕಿಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 26 Dec 2018, 5:00 am
ಬೆಂಗಳೂರು: ಆ್ಯಪ್‌ ಮೂಲಕ ಆರ್ಡರ್‌ ಪಡೆದು ಬಿರಿಯಾನಿ ಡೆಲಿವರಿಗೆಂದು ತೆರಳಿದ್ದ ಹೋಟೆಲ್‌ ಮಾಲೀಕ ಗ್ರಾಹಕನಿಂದ ಹಲ್ಲೆಗೊಳಗಾಗಿ ತಲೆಗೆ 18 ಹೊಲಿಗೆ ಹಾಕಿಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web food delivery fight thrashed
ಆಹಾರ ಡೆಲಿವರಿ ವೇಳೆ ಜಗಳ: ಮಾಲೀಕನ ತಲೆಗೆ 18 ಹೊಲಿಗೆ


ಬಿಇಎಲ್‌ ರಸ್ತೆಯಲ್ಲಿರುವ 'ಬಿರಿಯಾನಿ ನೈಟ್ಸ್‌' ಹೋಟೆಲ್‌ನ ಮಾಲೀಕ ನರೇಶ್‌ ಕುಮಾರ್‌ ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರೋಪಿ ಶರಣ್‌ನನ್ನು ಬಂಧಿಸಿದ್ದಾರೆ.

ಆರೋಪಿ ಶರಣ್‌ ಡಿ.15 ರಂದು ಜೊಮೋಟೋ ಆ್ಯಪ್‌ ಮೂಲಕ ಬಿರಿಯಾನಿ ಮತ್ತು ಇತರೆ ಪದಾರ್ಥಗಳಿಗೆ ಆರ್ಡರ್‌ ಮಾಡಿದ್ದ. ಈತ ಆರ್ಡರ್‌ ಮಾಡಿದ್ದು ರಾತ್ರಿ 1.45ರ ಸುಮಾರಿಗೆ. ಈತನ ಆರ್ಡರನ್ನು ನಂದನ್‌ ಎನ್ನುವ ಸಿಬ್ಬಂದಿ ಹೋಟೆಲ್‌ನಿಂದ ಪಡೆದುಕೊಂಡು ಹೊರಟಿದ್ದ. ಅದೇ ವೇಳೆಗೆ ಹೋಟೆಲ್‌ ಬಂದ್‌ ಮಾಡಿದ ನರೇಶ್‌ ಕೂಡ ನಂದನ್‌ ಬೈಕಿನಲ್ಲೇ ತೆರಳಿದ್ದರು. ಆರೋಪಿ ಶರಣ್‌ ತಿಳಿಸಿದ್ದ ಜಾಗಕ್ಕೆ ಬರುವಷ್ಟರಲ್ಲಿ 2.30 ಆಗಿತ್ತು.

ಆಹಾರ ಪದಾರ್ಥ ಕೊಟ್ಟರೂ ಶರಣ್‌ ಹಣ ಪಾವತಿಸದೆ ವಾಪಸಾಗುತ್ತಿದ್ದ. ಈ ವೇಳೆ ಶರಣ್‌ನನ್ನು ತಡೆದು ನಿಲ್ಲಿಸಿದ ನಂದನ್‌ ಮತ್ತು ನರೇಶ್‌ ಹಣ ನೀಡುವಂತೆ ಕೇಳಿದ್ದರು. ನೀವು ಲೇಟಾಗಿ ಪಾರ್ಸೆಲ್‌ ತಂದಿದ್ದರಿಂದ ನಾನು ಹಣ ಕೊಡುವುದಿಲ್ಲ ಎಂದು ಶರಣ್‌ ಉತ್ತರ ಕೊಟ್ಟಿದ್ದ. ಹಾಗಾದರೆ ಪಾರ್ಸಲ್‌ ವಾಪಾಸ್‌ ಕೊಡಿ ಎಂದು ನಂದನ್‌ ಕೇಳಿದ್ದ. ವಾಪಾಸ್‌ ಕೊಡುವುದಕ್ಕೂ ನಿರಾಕರಿಸಿದ ಶರಣ್‌, ಇದೇ ವಿಚಾರಕ್ಕೆ ಜಗಳಕ್ಕೆ ಇಳಿದಿದ್ದ. ಜಗಳ ವಿಕೋಪಕ್ಕೆ ಹೋದಾಗ ನಂದನ್‌ ಮೇಲೆ ಹಲ್ಲೆಗೆ ಮುಂದಾದ ಶರಣ್‌ನನ್ನು ತಡೆಯಲು ನರೇಶ್‌ ಮುಂದಾದರು. ಈ ವೇಳೆ ಶರಣ್‌ ರಸ್ತೆಯಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ನರೇಶ್‌ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿ, ಪರಾರಿ ಆಗಿದ್ದಾನೆ. ನರೇಶ್‌ ಅವರು ತಲೆಗೆ 18 ಹೊಲಿಗೆ ಹಾಕಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ