ಆ್ಯಪ್ನಗರ

ಕಾರಿನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ನಾಲ್ವರ ಸೆರೆ

ಕಾರಿನಲ್ಲಿ ಬಂದು ಮಹಿಳೆಯರ ಸರಗಳ್ಳತನ, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 2 Jun 2019, 5:00 am
ಬೆಂಗಳೂರು : ಕಾರಿನಲ್ಲಿ ಬಂದು ಮಹಿಳೆಯರ ಸರಗಳ್ಳತನ, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web four arrested in theft case
ಕಾರಿನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ನಾಲ್ವರ ಸೆರೆ


ಲಗ್ಗೆರೆ ನಿವಾಸಿ ಪ್ರಕಾಶ್‌ ಅಲಿಯಾಸ್‌ ಕುಳ್ಳ (27), ಕೆ.ಪಿ.ಅಗ್ರಹಾರದ ಶಶಿ (23), ಪ್ರಶಾಂತ್‌ ಅಲಿಯಾಸ್‌ ಮಂಡೆ (20), ಮೋಹನ್‌ ಕುಮಾರ್‌ ಅಲಿಯಾಸ್‌ ಅಚ್ಚು (21) ಬಂಧಿತರು. ಇವರಿಂದ 55 ಗ್ರಾಂ ತೂಕದ ಚಿನ್ನಾಭರಣ, 1 ಕಾರು, ಟಾಟಾ ಸುಮೋ, ಆಟೋ ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ವಿನೋದ್‌ ಕುಮಾರ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ವಿನೋದ್‌ ಕುಮಾರ್‌ ಮತ್ತು ಬಂಧಿತ ಪ್ರಕಾಶ್‌ ವಿರುದ್ಧ ತಲಘಟ್ಟಪುರ, ಮಾಗಡಿರಸ್ತೆ, ಕೆಪಿ ಅಗ್ರಹಾರ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದರೋಡೆ, ಸುಲಿಗೆ ಕಳವು ಪ್ರಕರಣಗಳಿವೆ. ಈ ಇಬ್ಬರು, ಕಳೆದ ಮೂರ್ನಾಲ್ಕು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಜೈಲಿಗೂ ಹೋಗಿ ಬಂದಿದ್ದರು.

ಒಂದು ತಿಂಗಳ ಹಿಂದೆ ಅನ್ನಪೂರ್ಣೇಶ್ವರಿ ನಗರದಲ್ಲಿ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕಸಿದು ಪರಾರಿಯಾಗಿದ್ದರು. ಅಲ್ಲದೇ, ತಲಘಟ್ಟಪುರದಲ್ಲಿ ಆಟೋ ಮತ್ತು ನಂದಿನಿ ಲೇಔಟ್‌ನಲ್ಲಿ ಟಾಟಾ ಸುಮೋ ಕದ್ದಿದ್ದರು.

ಸರಗಳ್ಳತನ

ಕಳವು ಮಾಡಿದ ಕಾರುಗಳಲ್ಲಿ ಓಡಾಡಿಕೊಂಡು ತಲಘಟ್ಟಪುರ ಮತ್ತು ಜೆ.ಪಿ.ನಗರದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಸರ ಅಪಹರಿಸಿದ್ದರು. ಈ ಎರಡು ಪ್ರಕರಣಗಳು ನಗರದ ಜನತೆಯನ್ನು ಆತಂಕಗೊಳಿಸಿದ್ದವು.

ಸರಗಳ್ಳರ ಮೇಲೆ ನಿಗಾ ಇರಿಸಿದ್ದ ಕೆ.ಪಿ ಅಗ್ರಹಾರ ಪೊಲೀಸರ ತಂಡ ಮಾಹಿತಿ ಕಲೆ ಹಾಕಿ ನಾಲ್ವರನ್ನು ಬಂಧಿಸಿದೆ. ವಿಚಾರಣೆ ವೇಳೆ ಕಾರಿನಲ್ಲಿ ಬಂದು ಮಹಿಳೆಯರ ಸರ ದೋಚಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ