ಆ್ಯಪ್ನಗರ

ಸರಕಾರಿ ನೌಕರಿ ಕೊಡಿಸುವ ನೆಪದಲ್ಲಿ ವಂಚನೆ

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದಿಂದ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಎನ್‌.ಆರ್‌ ಶ್ರೀನಿವಾಸಗೌಡ ಎಂಬುವರು 29.20 ಲಕ್ಷ ರೂ. ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಕೃಷ್ಣರಾಜೇ ಅರಸು ಎಂಬುವರು ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Vijaya Karnataka 28 Apr 2018, 5:00 am
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದಿಂದ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಎನ್‌.ಆರ್‌ ಶ್ರೀನಿವಾಸಗೌಡ ಎಂಬುವರು 29.20 ಲಕ್ಷ ರೂ. ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಕೃಷ್ಣರಾಜೇ ಅರಸು ಎಂಬುವರು ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Vijaya Karnataka Web fraud on government jobs
ಸರಕಾರಿ ನೌಕರಿ ಕೊಡಿಸುವ ನೆಪದಲ್ಲಿ ವಂಚನೆ


ಕನಕಪುರ ಮೂಲದ ಕೃಷ್ಣರಾಜೇ ಅರಸು ಅವರಿಗೆ ಸ್ನೇಹಿತ ಪ್ರಕಾಶ್‌ ಎಂಬಾತನ ಮೂಲಕ 2 ವರ್ಷಗಳ ಹಿಂದೆ ಶ್ರೀನಿವಾಸಗೌಡ ಎಂಬಾತ ಪರಿಚಯವಾಗಿದ್ದ. ಈ ವೇಳೆ ಆತ, ಸರಕಾರಿ ಕೆಲಸ ಬೇಕಾದರೆ ಕರೆ ಮಾಡಿ ಎಂದು ಹೇಳಿ ಫೋನ್‌ ನಂಬರ್‌ ಕೊಟ್ಟಿದ್ದ. ನಂತರ ಆತನೇ ಕರೆ ಮಾಡಿ ನಿಮ್ಮ ಮಕ್ಕಳಿಗೆ ಮತ್ತು ನಿಮಗೆ ಗೊತ್ತಿರುವ ಸ್ನೇಹಿತರ ಮಕ್ಕಳಿಗೆ ಸರಕಾರಿ ಇಲಾಖೆಗಳಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ಕೊಡಿಸುತ್ತೇನೆ. ಅದಕ್ಕಾಗಿ ಹುದ್ದೆಗೆ ತಕ್ಕಂತೆ ಹಣ ಮತ್ತು ಮಕ್ಕಳ ವಿದ್ಯಾರ್ಹತೆಯ ದಾಖಲಾತಿಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದ.

''ಸ್ನೇಹಿತ ರಾಮಕೃಷ್ಣ ಎಂಬುವರ ಜತೆ ಮಕ್ಕಳ ವಿದ್ಯಾರ್ಹತೆಯ ದಾಖಲಾತಿಗಳನ್ನು ತೆಗೆದುಕೊಂಡು 2017ರ ಮೇ ತಿಂಗಳಲ್ಲಿ ಬೆಂಗಳೂರಿನ ಎಸ್‌.ಸಿ ರಸ್ತೆಯಲ್ಲಿರುವ ಜನತಾ ಹೊಟೇಲ್‌ನ 1ನೇ ಮಹಡಿಗೆ ತೆರಳಿದ್ದೆ. ಅಲ್ಲಿಗೆ ಬಂದಿದ್ದ ಶ್ರೀನಿವಾಸಗೌಡ, ಇಬ್ಬರು ಮಕ್ಕಳಿಗೆ ಕೆಪಿಎಸ್‌ಸಿ ಮತ್ತು ಇತರ ಸರಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 12 ಲಕ್ಷ ರೂ.ಯನ್ನು ಪಡೆದುಕೊಂಡಿದ್ದಾರೆ. ನಂತರ ಸೆಪ್ಟಂಬರ್‌ ತಿಂಗಳಲ್ಲಿ ಅದೇ ಜನತಾ ಹೊಟೇಲ್‌ನಲ್ಲಿ ಸ್ನೇಹಿತ ರಾಮಕೃಷ್ಣ ಅವರ ಮಗನಿಗೆ ಕೆಪಿಎಸ್‌ಸಿ ನೇಮಕಾತಿ ನಡೆಸಿರುವ ಅಬಕಾರಿ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ 17.20 ಲಕ್ಷ ರೂ.ಯನ್ನು ತೆಗೆದುಕೊಂಡರು. ಈ ಹಣವನ್ನು ಇಬ್ಬರು ಸಂಬಂಧಿಕರ ಎದುರಿನಲ್ಲಿ ಆರೋಪಿತರು ಹಣ ಪಡೆದಿದ್ದಾರೆ. ನಂತರ ಕೆಲಸದ ಕುರಿತು ವಿಚಾರಿಸಲು ಫೋನ್‌ ಮಾಡಿದಾಗ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲಸ ಕೊಡಿಸುವುದಾಗಿ ನಂಬಿಸಿ 29.20 ಲಕ್ಷ ರೂ. ಪಡೆದು ವಂಚಿಸಿರುವ ಶ್ರೀನಿವಾಸಗೌಡರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು' ಎಂದು ದೂರಿನಲ್ಲಿ ನಂಜರಾಜೇ ಅರಸು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ