ಆ್ಯಪ್ನಗರ

ಗಾಂಜಾ ಮಾರಾಟ: ಒಡಿಶಾದ ಏಳು ಮಂದಿ ಬಂಧನ

ಚೀನಾ ಗಡಿ ಭಾಗದಲ್ಲಿ ಬೆಳೆದಿದ್ದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಒಡಿಶಾದ ಏಳು ಮಂದಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 11 Feb 2019, 5:00 am
ಬೆಂಗಳೂರು: ಚೀನಾ ಗಡಿ ಭಾಗದಲ್ಲಿ ಬೆಳೆದಿದ್ದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಒಡಿಶಾದ ಏಳು ಮಂದಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ganja leaf


ಒಡಿಶಾದ ಬಿಕ್ರಂ ಕೊಹರ್‌ (22), ಬೇದಭ್ಯಾಸ್‌ ಕೊಹರ್‌ (20), ಅಜಿತ್‌ ಕೊಹರ್‌ (20)ಸುಜಿತ್‌ ಕುಮಾರ್‌ (32), ಅರ್ಜುನ್‌ ಕೋರ್‌ (20), ಅಜಿತ್‌ (28), ರಾಘವ್‌ ಶಾಮಲ್‌ (21) ಬಂಧಿತ ಆರೋಪಿಗಳು. ಇವರಿಂದ 19.50 ಲಕ್ಷ ರೂ. ಮೌಲ್ಯದ 39 ಕೆಜಿ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಿಗೆ ನಾನಾ ರಾಜ್ಯಗಳ ಗಾಂಜಾ ಡೀಲರ್‌ಗಳು, ಕಿಂಗ್‌ಪಿನ್‌ಗಳ ಜತೆ ಸಂಪರ್ಕ ಇದೆ. ರಾಜಸ್ತಾನದ ನಕ್ಸಲ್‌ ಪ್ರಭಾವಿತ ಪ್ರದೇಶದಲ್ಲಿ ಬೆಳೆದ ಗಾಂಜಾವನ್ನು ಬೆಂಗಳೂರಿಗೆ ತರಿಸಿಕೊಂಡು ಮಾರಾಟ ಮಾಡುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿರುವ ವ್ಯಸನಿಗಳಿಗೆ ಮಾದಕ ವಸ್ತುಗಳೇನಾದರೂ ಬೇಕಿದ್ದರೆ, ಅವರು ರಾಜಸ್ತಾನಕ್ಕೆ ಕರೆ ಮಾಡಿದರೆ ಸಾಕು. ಆರೋಪಿಗಳು ರೈಲಿನಲ್ಲಿ ಬಂದು ತಲುಪಿಸಿ ಹೋಗುತ್ತಾರೆ. ರಾಜಸ್ಥಾನದಿಂದ ಪೆಡ್ಲರ್‌ವೊಬ್ಬ ಗಾಂಜಾ ತರುತ್ತಿದ್ದಾನೆ ಎನ್ನುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣೆ ಪೊಲೀಸರು ಈ ಬಗ್ಗೆ ನಿಗಾ ಇಟ್ಟಿದ್ದರು. ಶನಿವಾರ ಬೆಳಗ್ಗೆ 8.30 ರ ಸುಮಾರಿಗೆ ರಾಮಸ್ವಾಮಿಪಾಳ್ಯದ ಐಒಸಿ ವೃತ್ತದ ಮೇಲು ಸೇತುವೆ ಕೆಳಗೆ ನಿಂತು ಇವರು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ