ಆ್ಯಪ್ನಗರ

ವಿವಾಹ ಪ್ರಸ್ತಾಪಕ್ಕೆ ಬೇಸತ್ತು ಅಪ್ರಾಪ್ತ ಯುವತಿ ಮಾಡಿದ್ದೇನು?

ನಾಗಮಣಿ ಹಾಗೂ ಚಂದ್ರಶೇಖರ್ ದಂಪತಿ ತಮ್ಮ ಪುತ್ರಿ ಎದುರು ವಿವಾಹ ಪ್ರಸ್ತಾಪವನ್ನಿಟ್ಟಿದ್ದರು. ಒಂದು ವೇಳೆ ತಾವು ನೋಡಿದ ವರ ಪುತ್ರಿಗೆ ಇಷ್ಟವಾದರೆ, ಆಕೆಗೆ 18 ವರ್ಷ ತುಂಬಿದ ಬಳಿಕ ವಿವಾಹ ಕಾರ್ಯ ನೆರವೇರಿಸುವ ಬಗ್ಗೆ ಚಿಂತನೆ ನಡೆಸಿದ್ದರು.

TIMESOFINDIA.COM 25 Dec 2018, 12:08 pm
ಬೆಂಗಳೂರು: ಪೋಷಕರು ಮದುವಿ ವಿಷಯ ಪ್ರಸ್ತಾಪಿಸಿದ್ದಕ್ಕೆ ನೊಂದ ಅಪ್ರಾಪ್ತ ಯುವತಿ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ರಾತ್ರಿ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ.
Vijaya Karnataka Web suicide


ಶ್ರಾವಣಿ (17) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ನಾಗಮಣಿ ಹಾಗೂ ಚಂದ್ರಶೇಖರ್ ದಂಪತಿ ತಮ್ಮ ಪುತ್ರಿ ಎದುರು ವಿವಾಹ ಪ್ರಸ್ತಾಪವನ್ನಿಟ್ಟಿದ್ದರು. ಒಂದು ವೇಳೆ ತಾವು ನೋಡಿದ ವರ ಅವಳಿಗೆ ಇಷ್ಟವಾದರೆ, 18 ವರ್ಷ ತುಂಬಿದ ಬಳಿಕ ವಿವಾಹ ನೆರವೇರಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ, ಇಷ್ಟು ಬೇಗ ವಿವಾಹವಾಗುವುದಿಲ್ಲ ಹಠ ಹಿಡಿದ ಯುವತಿ, ಆತುರದ ನಿರ್ಧಾರ ಕೈಗೊಂಡ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಯುವತಿಯ ಪೋಷಕರು ಚಿಕ್ಕಬಳ್ಳಾಪುರದ ಚಿಂತಾಮಣಿಗೆ ಹೋಗಿದ್ದು, ಸಂಜೆ 7 ಗಂಟೆ ಸುಮಾರಿಗೆ ವಾಪಸ್ಸಾಗಿದ್ದರು. ಈ ವೇಳೆ ಸಂಬಂಧಿಕರೊಬ್ಬರು ವಿವಾಹ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆಂದು ಪುತ್ರಿ ಬಳಿ ಹೇಳಿಕೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಯುವತಿ ತಮ್ಮ ಮನೆಯ ಎರಡನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ