ಆ್ಯಪ್ನಗರ

ಆಭರಣ ಮಳಿಗೆಯಲ್ಲಿ 30 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್‌ ಕಳವು

ಆಭರಣ ಮಳಿಗೆಗೆ ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಕೆಲಸಗಾರರಿಬ್ಬರು 30 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.

Vijaya Karnataka 26 Jan 2019, 11:09 pm
ಬೆಂಗಳೂರು: ಆಭರಣ ಮಳಿಗೆಗೆ ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಕೆಲಸಗಾರರಿಬ್ಬರು 30 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.
Vijaya Karnataka Web gold biscuits stolen
ಆಭರಣ ಮಳಿಗೆಯಲ್ಲಿ 30 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್‌ ಕಳವು


ಈ ಸಂಬಂಧ ಗಾಂಧಿನಗರದ ವಿಜಯ್‌ ಜೆಮ್ಸ್‌ ಆ್ಯಂಡ್‌ ಜ್ಯುವೆಲರಿ ಮಳಿಗೆ ಮಾಲೀಕ ಸುನೀಲ್‌ ಕುಮಾರ್‌ ಎಂಬುವರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮೊಂಟು ದಾಸ್‌ ಮತ್ತು ಶಬ್ಬೀರ್‌ ಚಿನ್ನದ ಬಿಸ್ಕತ್‌ ದೋಚಿರುವ ಆರೋಪಿಗಳು. ಕಳೆದ ವರ್ಷ ನವೆಂಬರ್‌ 28ರಂದು ಆರೋಪಿಗಳು ಕೆಲಸಕ್ಕೆ ಸೇರಿದ್ದರು. ಕಳೆದ ಭಾನುವಾರ ಮತ್ತು ಸೋಮವಾರದ ನಡುವೆ ಕೆಲಸ ಮಾಡುವ ವೇಳೆ ಮೊಂಟು ದಾಸ್‌ 400 ಗ್ರಾಂ ಮತ್ತು ಶಬ್ಬೀರ್‌ 412 ಗ್ರಾಂ ತೂಕದ ತೂಕದ ಚಿನ್ನದ ಬಿಸ್ಕತ್‌ಗಳನ್ನು ದೋಚಿ ನಾಪತ್ತೆಯಾಗಿದ್ದಾರೆ. ಮರುದಿನ ಕೆಲಸಕ್ಕೆ ಮರಳದ ಕಾರಣ ಅನುಮಾನಗೊಂಡ ಮಾಲೀಕ ಸುನೀಲ್‌, ಸ್ಟಾಕ್‌ ಚೆಕ್‌ ಮಾಡಿದಾಗ ಕಳ್ಳತನ ಬೆಳಕಿಗೆ ಬಂದಿದೆ.

''ಆ ಇಬ್ಬರು ಕೆಲಸ ಕೇಳಿಕೊಂಡು ನೇರವಾಗಿ ನನ್ನಲ್ಲಿಗೆ ಬಂದಿದ್ದರು. ತಿಂಗಳ ಮಟ್ಟಿಗೆ ಕೆಲಸ ಹೇಗೆ ಮಾಡುತ್ತಾರೆ ಎಂದು ತಿಳಿದುಕೊಂಡು ಬಳಿಕ ಕೆಲಸದಲ್ಲಿ ಮುಂದುವರಿಸಲು ನಿರ್ಧರಿಸಿದ್ದೆ. ಅಷ್ಟರಲ್ಲೇ ಚಿನ್ನದ ಬಿಸ್ಕತ್‌ ದೋಚಿದ್ದಾರೆ'' ಎಂದು ದೂರುದಾರ ಸುನೀಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ