ಬೆಂಗಳೂರು: ಜೆಜೆ ನಗರದಲ್ಲಿ ಗಾಂಜಾ ಸೇವಿಸಿ ಪುಂಡಾಟ ಮಾಡುತ್ತಿದ್ದ ಗುಂಪನ್ನು ಹಿಡಿಯಲು ಬಂದ ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ರೌಡಿಶೀಟರ್ ಮಹಮ್ಮದ್ ಆಸೀಮ್ ಮತ್ತು ಗ್ಯಾಂಗ್ ಮಂಗಳವಾರ ರಾತ್ರಿ ಗಾಂಜಾ ಹೊಡೆದು ನಡುರಸ್ತೆಯಲ್ಲಿ ದಾಂಧಲೇ ಮಾಡುತ್ತಿದ್ದರು, ಈ ವೇಳೆ ಈ ವೇಳೆ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ. ದೂರು ಅಧರಿಸಿ ಸ್ಥಳಕ್ಕೆ ದೌಡಾಯಿಸಿದ್ದ ಹೊಯ್ಸಳ ಸಿಬ್ಬಂದಿ ಜೆಜೆ ನಗರ ಪೇದೆ ರಾಜೇಂದ್ರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ರಾಜೇಂದ್ರ ಗಂಭೀರ ಗಾಯಗೊಂಡಿದ್ದು, ಇವರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿದೆ.
2016 ಇದೇ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆಸೀಮ್ ಹಾಗೂ ಇತ್ತೀಚೆಗೆ ಹೊರಬಂದಿದ್ದ. ಪುಂಡರ ಗ್ಯಾಂಗ್ ಕಟ್ಟಿಕೊಂಡು ಆಸೀಮ್ ಹಾಗೂ ಗುಂಪು ಅಮಾಯಾಕರ ಮೇಲೆ ಹಲ್ಲೆ, ವಸೂಲಿ ಮಾಡುತ್ತಿದ್ದರು.
ರೌಡಿಶೀಟರ್ ಮಹಮ್ಮದ್ ಆಸೀಮ್ ಮತ್ತು ಗ್ಯಾಂಗ್ ಮಂಗಳವಾರ ರಾತ್ರಿ ಗಾಂಜಾ ಹೊಡೆದು ನಡುರಸ್ತೆಯಲ್ಲಿ ದಾಂಧಲೇ ಮಾಡುತ್ತಿದ್ದರು, ಈ ವೇಳೆ ಈ ವೇಳೆ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ. ದೂರು ಅಧರಿಸಿ ಸ್ಥಳಕ್ಕೆ ದೌಡಾಯಿಸಿದ್ದ ಹೊಯ್ಸಳ ಸಿಬ್ಬಂದಿ ಜೆಜೆ ನಗರ ಪೇದೆ ರಾಜೇಂದ್ರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ರಾಜೇಂದ್ರ ಗಂಭೀರ ಗಾಯಗೊಂಡಿದ್ದು, ಇವರನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿದೆ.
2016 ಇದೇ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆಸೀಮ್ ಹಾಗೂ ಇತ್ತೀಚೆಗೆ ಹೊರಬಂದಿದ್ದ. ಪುಂಡರ ಗ್ಯಾಂಗ್ ಕಟ್ಟಿಕೊಂಡು ಆಸೀಮ್ ಹಾಗೂ ಗುಂಪು ಅಮಾಯಾಕರ ಮೇಲೆ ಹಲ್ಲೆ, ವಸೂಲಿ ಮಾಡುತ್ತಿದ್ದರು.