ಹಸುಗೂಸನ್ನು ಕೊಂದಿದ್ದು ಅಜ್ಜಿ
ಮಗನ ಒಂದೂವರೆ ತಿಂಗಳ ಗಂಡು ಮಗುವನ್ನು ಕತ್ತು ಹಿಸುಕಿ ಕೊಂದ ಮಹಿಳೆಯನ್ನು ಅಶೋಕ್ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka 26 Dec 2018, 5:00 am
ಬೆಂಗಳೂರು: ಮಗನ ಒಂದೂವರೆ ತಿಂಗಳ ಗಂಡು ಮಗುವನ್ನು ಕತ್ತು ಹಿಸುಕಿ ಕೊಂದ ಮಹಿಳೆಯನ್ನು ಅಶೋಕ್ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೀಲಸಂದ್ರದ ನಿವಾಸಿ ವಿಜಯಲಕ್ಷ್ಮಿ (53) ಬಂಧಿತ ಮಹಿಳೆ. ತನ್ನ ಮಗನ ಅವಳಿ ಮಕ್ಕಳಲ್ಲಿ ಒಂದನ್ನು ಮಹಿಳೆ ಕೊಲೆ ಮಾಡಿ, ಮಂಚದ ಕೆಳಗೆ ಇಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕ್ನಗರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
''ಮೊಮ್ಮಗುವಿಗೆ ಕಾಯಿಲೆಗಳು ಇದ್ದು, ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗಬಹುದು ಎಂದು ಕೊಲೆ ಮಾಡಿದೆ,'' ಎಂದು ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆದರೆ, ಪೊಲೀಸರು ಇನ್ನೂ ಹಲವು ಕೋನಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮದುವೆಗೆ ಇರಲಿಲ್ಲ ಒಪ್ಪಿಗೆ: ವಿಜಯಲಕ್ಷ್ಮೇ ಅವರ ಪುತ್ರ ಕಾರ್ತಿಕ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲೇ ಕೆಲಸ ಮಾಡುತ್ತಿದ್ದ ಸ್ಟೆಲ್ಲಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿವಾಹಕ್ಕೆ ಕಾರ್ತಿಕ್ನ ಪೋಷಕರಿಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಅವರು ಮದುವೆಯಾದ ಕೆಲವೇ ದಿನಗಳಲ್ಲಿ ಪ್ರತ್ಯೇಕ ಮನೆ ಮಾಡಿ ವಾಸವಿದ್ದರು. ನವೆಂಬರ್ನಲ್ಲಿ ದಂಪತಿಗೆ ಅವಳಿ ಗಂಡು ಮಕ್ಕಳು ಜನಿಸಿದ್ದವು. ಡಿ.21ರಂದು ಎರಡನೇ ಮಗುವಿಗೆ ಜ್ವರ ಬಂದಿತ್ತು. ಹೀಗಾಗಿ ಮೊದಲ ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟ ಸ್ಟೆಲ್ಲಾ ಹಾಗೂ ಕಾರ್ತಿಕ್ ಆಸ್ಪತ್ರೆಗೆ ಹೋಗಿದ್ದರು. ಸ್ಟೆಲ್ಲಾ ಅವರು ನೇರವಾಗಿ ಮನೆಗೆ ಬಂದರೆ, ಕಾರ್ತಿಕ್ ಮೆಡಿಕಲ್ ಶಾಪ್ಗೆ ಹೋಗಿದ್ದರು. ಮನೆಗೆ ಬಂದ ಸ್ಟೆಲ್ಲಾ ಅವರು ಮಗುವನ್ನು ಹಾಸಿಗೆಯಲ್ಲಿ ಮಲಗಿಸಿ, ಮೊದಲ ಮಗುವಿಗೆ ಹಾಲು ಕುಡಿಸಲು ರೂಮಿಗೆ ಹೋಗಿದ್ದರು. ಈ ವೇಳೆ ಆರೋಪಿ ವಿಜಯಲಕ್ಷ್ಮಿ ಎರಡನೇ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿ, ಮಂಚದ ಕೆಳಗೆ ಬಿಸಾಡಿದ್ದರು.
ಎದೆ ಬಡಿದುಕೊಂಡು ಅತ್ತಿದ್ದ ಅಜ್ಜಿ:
ಕೊಲೆ ಮಾಡಿದರೂ ಸಿಕ್ಕಿ ಬೀಳಬಾರದು ಎನ್ನುವ ಕಾರಣಕ್ಕೆ ವಿಜಯಲಕ್ಷ್ಮಿ ಎದೆ ಬಡಿದುಕೊಂಡು ಗೋಳಾಡಿ ನಾಟಕ ಮಾಡಿದ್ದಳು. ಹೀಗಾಗಿ ಆರಂಭದಲ್ಲಿ ವಿಜಯಲಕ್ಷ್ಮಿ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ. ಕಾರ್ತಿಕ್ನ ಸಹೋದರ ಮತ್ತು ತಂದೆಯನ್ನೇ ಪೊಲೀಸರು ನಿರಂತರ ವಿಚಾರಣೆ ಮಾಡಿದ್ದರು. ಕೊನೆಯ ಯತ್ನವಾಗಿ ವಿಜಯಲಕ್ಷ್ಮಿಯನ್ನು ವಿಚಾರಣೆ ಮಾಡಿದಾಗ ಅನುಮಾನಾಸ್ಪದ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಳು. ಹೀಗಾಗಿ ವಿಚಾರಣೆ ತೀವ್ರಗೊಳಿಸಿದ್ದು, ಈ ವೇಳೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.
ನೀಲಸಂದ್ರದ ನಿವಾಸಿ ವಿಜಯಲಕ್ಷ್ಮಿ (53) ಬಂಧಿತ ಮಹಿಳೆ. ತನ್ನ ಮಗನ ಅವಳಿ ಮಕ್ಕಳಲ್ಲಿ ಒಂದನ್ನು ಮಹಿಳೆ ಕೊಲೆ ಮಾಡಿ, ಮಂಚದ ಕೆಳಗೆ ಇಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕ್ನಗರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
''ಮೊಮ್ಮಗುವಿಗೆ ಕಾಯಿಲೆಗಳು ಇದ್ದು, ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗಬಹುದು ಎಂದು ಕೊಲೆ ಮಾಡಿದೆ,'' ಎಂದು ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆದರೆ, ಪೊಲೀಸರು ಇನ್ನೂ ಹಲವು ಕೋನಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮದುವೆಗೆ ಇರಲಿಲ್ಲ ಒಪ್ಪಿಗೆ: ವಿಜಯಲಕ್ಷ್ಮೇ ಅವರ ಪುತ್ರ ಕಾರ್ತಿಕ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲೇ ಕೆಲಸ ಮಾಡುತ್ತಿದ್ದ ಸ್ಟೆಲ್ಲಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿವಾಹಕ್ಕೆ ಕಾರ್ತಿಕ್ನ ಪೋಷಕರಿಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಅವರು ಮದುವೆಯಾದ ಕೆಲವೇ ದಿನಗಳಲ್ಲಿ ಪ್ರತ್ಯೇಕ ಮನೆ ಮಾಡಿ ವಾಸವಿದ್ದರು. ನವೆಂಬರ್ನಲ್ಲಿ ದಂಪತಿಗೆ ಅವಳಿ ಗಂಡು ಮಕ್ಕಳು ಜನಿಸಿದ್ದವು. ಡಿ.21ರಂದು ಎರಡನೇ ಮಗುವಿಗೆ ಜ್ವರ ಬಂದಿತ್ತು. ಹೀಗಾಗಿ ಮೊದಲ ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟ ಸ್ಟೆಲ್ಲಾ ಹಾಗೂ ಕಾರ್ತಿಕ್ ಆಸ್ಪತ್ರೆಗೆ ಹೋಗಿದ್ದರು. ಸ್ಟೆಲ್ಲಾ ಅವರು ನೇರವಾಗಿ ಮನೆಗೆ ಬಂದರೆ, ಕಾರ್ತಿಕ್ ಮೆಡಿಕಲ್ ಶಾಪ್ಗೆ ಹೋಗಿದ್ದರು. ಮನೆಗೆ ಬಂದ ಸ್ಟೆಲ್ಲಾ ಅವರು ಮಗುವನ್ನು ಹಾಸಿಗೆಯಲ್ಲಿ ಮಲಗಿಸಿ, ಮೊದಲ ಮಗುವಿಗೆ ಹಾಲು ಕುಡಿಸಲು ರೂಮಿಗೆ ಹೋಗಿದ್ದರು. ಈ ವೇಳೆ ಆರೋಪಿ ವಿಜಯಲಕ್ಷ್ಮಿ ಎರಡನೇ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿ, ಮಂಚದ ಕೆಳಗೆ ಬಿಸಾಡಿದ್ದರು.
ಎದೆ ಬಡಿದುಕೊಂಡು ಅತ್ತಿದ್ದ ಅಜ್ಜಿ:
ಕೊಲೆ ಮಾಡಿದರೂ ಸಿಕ್ಕಿ ಬೀಳಬಾರದು ಎನ್ನುವ ಕಾರಣಕ್ಕೆ ವಿಜಯಲಕ್ಷ್ಮಿ ಎದೆ ಬಡಿದುಕೊಂಡು ಗೋಳಾಡಿ ನಾಟಕ ಮಾಡಿದ್ದಳು. ಹೀಗಾಗಿ ಆರಂಭದಲ್ಲಿ ವಿಜಯಲಕ್ಷ್ಮಿ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ. ಕಾರ್ತಿಕ್ನ ಸಹೋದರ ಮತ್ತು ತಂದೆಯನ್ನೇ ಪೊಲೀಸರು ನಿರಂತರ ವಿಚಾರಣೆ ಮಾಡಿದ್ದರು. ಕೊನೆಯ ಯತ್ನವಾಗಿ ವಿಜಯಲಕ್ಷ್ಮಿಯನ್ನು ವಿಚಾರಣೆ ಮಾಡಿದಾಗ ಅನುಮಾನಾಸ್ಪದ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಳು. ಹೀಗಾಗಿ ವಿಚಾರಣೆ ತೀವ್ರಗೊಳಿಸಿದ್ದು, ಈ ವೇಳೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.