ಆ್ಯಪ್ನಗರ

ಹಾಸನ ಸುದ್ದಿ - ಆನ್ ಲೈನ್ ಜೂಜಿನಲ್ಲಿ ಸೋತವನಿಂದ ಸರಣಿ ಕಳವು; 6.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಪ್ರಕರಣ ಗಂಭೀರವಾಗಿ ಪರಿಗಣಿಸಿ ಎಎಸ್ ಪಿ ತಮ್ಮಯ್ಯ ಹಾಗೂ ಡಿವೈಎಸ್ ಪಿ ಉದಯಭಾಸ್ಕರ್, ಸಿಪಿಐ ಸುರೇಶ್ ,ಎಸ್ ಐ ಅಜಯ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಅ.2 ರಂದು ಖಚಿತ ಮಾಹಿತಿ ಆರೋಪಿ ಬಂಧಿಸಿ ಹೊಳೆನರಸೀಪುರ, ಅರಕಲಗೂಡು, ಕೊಣನೂರು,ದು ದ್ದ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಏಳು ಸರಕಳವು ಪ್ರಕರಣದಲ್ಲಿ ಕಳವು ಮಾಡಿದ್ದ 135 ಗ್ರಾಂ ತೂಕದ 6.50 ಲಕ್ಷ ಬೆಲೆಯ ಚಿನ್ನದ ಸರಗಳನ್ಮು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಆರೋಪಿಗಳ ಪತ್ತೆ ಹಚ್ಚಿದ ತಂಡಕ್ಕೆ ಐದು ಸಾವಿರ ರೂ.ಬಹುಮಾನ ಘೋಷಿಸಿದರು.

Edited byಚೇತನ್ ಓ.ಆರ್. | Vijaya Karnataka Web 3 Oct 2022, 4:33 pm
ಹಾಸನ: ಆನ್ ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡು ಜಿಲ್ಲೆಯ ವಿವಿಧೆಡೆ ನಡೆದಿದ್ದ ಏಳು ಪ್ರತ್ಯೇಕ ಕಳವು ಪ್ರಕರಣದಲ್ಲಿ 6.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಯನ್ನು ಡಿವೈಎಸ್ ಪಿ ನೇತೃತ್ವದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಾಸನ ಜಿಲ್ಲಾ ಹರಿರಾಂ ಶಂಕರ್ ತಿಳಿಸಿದರು. ಅಭಿಷೇಕ್ (26) ಬಂಧಿತ ಆರೋಪಿ.
Vijaya Karnataka Web online gambler loots jewellery
Representative image


ಹೊಳೆನರಸೀಪುರದ ವಾಸಿಯಾದ ಈತ ಸೆ.11 ರಂದು ಸಂಜೆ 4.15 ರಲ್ಲಿ ಗೊರೂರಿನ ಚೇತನ ಕಾನ್ವೆಂಟ್ ಬಳಿ ಅಂಗಡಿಗೆ ತೆರಳುತ್ತಿದ್ದ ಮಹಿಳೆ ಹಿಂದಿನಿಂದ ಬಂದ ಅಪರಿಚಿತ ಬೈಕ್ ಸವಾರ 21 ಗ್ರಾಂ ತೂಕದ 80 ಸಾವಿರ ಬೆಲೆಯ ಚಿನ್ನದ ಸರ ಕಳವು ಅಪಹರಿಸಿ ಪರಾರಿಯಾಗಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಗಂಭೀರವಾಗಿ ಪರಿಗಣಿಸಿ ಎಎಸ್ ಪಿ ತಮ್ಮಯ್ಯ ಹಾಗೂ ಡಿವೈಎಸ್ ಪಿ ಉದಯಭಾಸ್ಕರ್, ಸಿಪಿಐ ಸುರೇಶ್ ,ಎಸ್ ಐ ಅಜಯ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಅ.2 ರಂದು ಖಚಿತ ಮಾಹಿತಿ ಆರೋಪಿ ಬಂಧಿಸಿ ಹೊಳೆನರಸೀಪುರ, ಅರಕಲಗೂಡು, ಕೊಣನೂರು, ದುದ್ದ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಏಳು ಸರಕಳವು ಪ್ರಕರಣದಲ್ಲಿ ಕಳವು ಮಾಡಿದ್ದ 135 ಗ್ರಾಂ ತೂಕದ 6.50 ಲಕ್ಷ ಬೆಲೆಯ ಚಿನ್ನದ ಸರಗಳನ್ಮು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಐದು ಸಾವಿರ ರೂ.ಬಹುಮಾನ ಘೋಷಿಸಿದರು. ಸಿಪಿಐ ಸುರೇಶ್ ಹಾಜರಿದ್ದರು.

ಆರೋಪಿ ಹೊಳೆನರಸೀಪುರದ ಖಾಸಗಿ ಫೈನಾನ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ ರಜೆ ದಿನವಾದ ಶನಿವಾರ ಇಲ್ಲವೇ ಭಾನುವಾರ ತನ್ನ ಬೈಕ್ ನಲ್ಲಿ ಬಂದು ಸರ ಅಪಹರಣ ಮಾಡುತ್ತಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿ ಬಂಧಿಸಿ ಏಳು ಪ್ರಕರಣ ಭೇದಿಸಲಾಗಿದೆ ಇನ್ನು ಐದು ಪ್ರಕರಣ ಬಾಕಿ ಇದೆ.
ಹರಿರಾಂ ಶಂಕರ್, ಪೊಲೀಸ್ ವರಿಷ್ಠಾಧಿಕಾರಿ, ಹಾಸನ
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ