ಆ್ಯಪ್ನಗರ

ಜೀವ ಬೆದರಿಕೆ: ಪೊಲೀಸರಿಗೆ ನೋಟಿಸ್‌ ಜಾರಿ

ತನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ಸೂಕ್ತ ರಕ್ಷ ಣೆ ಒದಗಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿದೆ.

Vijaya Karnataka 6 Dec 2018, 5:00 am
ಬೆಂಗಳೂರು : ತನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ಸೂಕ್ತ ರಕ್ಷ ಣೆ ಒದಗಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿದೆ.
Vijaya Karnataka Web hicourt issues notice to police
ಜೀವ ಬೆದರಿಕೆ: ಪೊಲೀಸರಿಗೆ ನೋಟಿಸ್‌ ಜಾರಿ


ವಿದ್ಯಾರ್ಥಿನಿ ಎಸ್‌.ರಾಜಿ ಸಲ್ಲಿಸಿರುವ ಅರ್ಜಿ ಆಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯಪೀಠ ಬೆಥೆಲ್‌ ಹೋಲಿ ಫೈರ್‌ ಮಿನಿಸ್ಟ್ರೀಸ್‌ ಬೆಥೆಲ್‌ ಮೆಡಿಕಲ್‌ ಸವೀರ್‍ಸಸ್‌ ಅಧ್ಯಕ್ಷ ಡಾ.ಡಿ.ಸನ್ನಿ ಸೇರಿ 8 ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆಕ್ಷೇಪಣೆ ಸಲ್ಲಿಸಲು ಆದೇಶಿಸಿತು. ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಲಾಗಿದೆ.

ಅರ್ಜಿದಾರ ಪರ ವಕೀಲರು ''ವಿದ್ಯಾರ್ಥಿನಿ ಪಾನ್‌ ಏಷಿಯಾ ನರ್ಸಿಂಗ್‌ ಕಾಲೇಜಿನಲ್ಲಿ 2017ರಲ್ಲೇ ಬಿ.ಎಸ್ಸಿ ನರ್ಸಿಂಗ್‌ ಪದವಿ ಮುಗಿಸಿದ್ದಾರೆ.ಆದರೆ, ಅವರಿಗೆ ಲೈಂಗಿಕ, ದೈಹಿಕ ಹಾಗೂ ಮಾನಸಿಕವಾಗಿ ಕಿರಕುಳ ನೀಡಲಾಗುತ್ತಿದೆ'' ಎಂದು ಆರೋಪಿಸಿದರು.

''ರಾಜಿ ವಿರುದ್ಧ ಸನ್ನಿ ಸುಳ್ಳು ದೂರು ನೀಡಿದ್ದು ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಸನ್ನಿ ಜೊತೆ ಷಾಮೀಲಾಗಿರುವುದರಿಂದ ಅರ್ಜಿದಾರರಿಗೆ ಜೀವ ಬೆದರಿಕೆ ಇದ್ದು, ಅವರಿಗೆ ರಕ್ಷ ಣೆ ನೀಡಬೇಕು''ಎಂದು ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ