ಬೆಂಗಳೂರು: ಟಿವಿಯ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಮಹಿಳೆಯ ಮೇಲೆ ಸಹ ಕಾರ್ಮಿಕನೊಬ್ಬ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಬುಧವಾರ ಘಟನೆ ನಡೆದಿದ್ದು ತಡವಗಿ ಬೆಳಕಿಗೆ ಬಂದಿದೆ. ತಮಿಳುನಾಡಿನ ವೆಲ್ಲೂರು ಮೂಲದ ಎಸ್.ಭಾರತಿ ಚಾಕು ಇರಿತಕ್ಕೆ ಒಳಗಾದವರು. ಚಾಕು ಇರಿದ ಪುಲ್ಲಕ್ ದಾಸ್ನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ 'ಹೋಮ್ಲಿ ಕಿಚನ್ ರೆಸ್ಟೋರೆಂಟ್'ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ರೆಸ್ಟೋರೆಂಟ್ ಮಾಲೀಕರೇ ಸಿಬ್ಬಂದಿಗೆ ಉಳಿದುಕೊಳ್ಳಲು ಕಗ್ಗದಾಸಪುರದಲ್ಲಿ ರೂಮುಗಳನ್ನು ನೀಡಿದ್ದಾರೆ. ಬುಧವಾರ ರಾತ್ರಿ ಕೆಲಸ ಮುಗಿಸಿ ದಣಿದಿದ್ದ ಭಾರತಿ ತಮ್ಮ ಕೊಠಡಿಗೆ ಹೋಗಿ ಮಲಗಿದ್ದರು. ಪಕ್ಕದ ಕೊಠಡಿಯಲ್ಲಿದ್ದ ಪುಲ್ಲಕ್ ದಾಸ್ ಟಿವಿಯ ಸೌಂಡ್ ಜೋರಾಗಿ ಕೊಟ್ಟಿದ್ದ. ಇದರಿಂದ ನಿದ್ದೆಗೆ ತೊಂದರೆ ಆಗಿದ್ದು ವಾಲ್ಯೂಮ್ ಕಡಿಮೆ ಕೊಡುವಂತೆ ಪುಲ್ಲಕ್ದಾಸ್ ಕೊಠಡಿಗೆ ತೆರಳಿ ವಿನಂತಿಸಿದ್ದರು. ಇದೇ ಕಾರಣಕ್ಕೆ ಜಗಳ ನಡೆದಿತ್ತು. ಮಾತಿನ ಜಗಳದ ನಡುವೆಯೇ ಆತ ಚಾಕುವಿನಿಂದ ಭಾರತಿ ಅವರ ಕುತ್ತಿಗೆಗೆ ಇರಿದಿದ್ದ. ಪರಿಣಾಮ ಆಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಇತರೆ ಕಾರ್ಮಿಕರು ಭಾರತಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಭಾರತಿ ಕುತ್ತಿಗೆಗೆ 26 ಹೊಲಿಗೆಗಳನ್ನು ಹಾಕಲಾಗಿದೆ. ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೇಳಿಕೆ ಆಧರಿಸಿ ಪುಲ್ಲಕ್ದಾಸ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬುಧವಾರ ಘಟನೆ ನಡೆದಿದ್ದು ತಡವಗಿ ಬೆಳಕಿಗೆ ಬಂದಿದೆ. ತಮಿಳುನಾಡಿನ ವೆಲ್ಲೂರು ಮೂಲದ ಎಸ್.ಭಾರತಿ ಚಾಕು ಇರಿತಕ್ಕೆ ಒಳಗಾದವರು. ಚಾಕು ಇರಿದ ಪುಲ್ಲಕ್ ದಾಸ್ನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ 'ಹೋಮ್ಲಿ ಕಿಚನ್ ರೆಸ್ಟೋರೆಂಟ್'ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ರೆಸ್ಟೋರೆಂಟ್ ಮಾಲೀಕರೇ ಸಿಬ್ಬಂದಿಗೆ ಉಳಿದುಕೊಳ್ಳಲು ಕಗ್ಗದಾಸಪುರದಲ್ಲಿ ರೂಮುಗಳನ್ನು ನೀಡಿದ್ದಾರೆ. ಬುಧವಾರ ರಾತ್ರಿ ಕೆಲಸ ಮುಗಿಸಿ ದಣಿದಿದ್ದ ಭಾರತಿ ತಮ್ಮ ಕೊಠಡಿಗೆ ಹೋಗಿ ಮಲಗಿದ್ದರು. ಪಕ್ಕದ ಕೊಠಡಿಯಲ್ಲಿದ್ದ ಪುಲ್ಲಕ್ ದಾಸ್ ಟಿವಿಯ ಸೌಂಡ್ ಜೋರಾಗಿ ಕೊಟ್ಟಿದ್ದ. ಇದರಿಂದ ನಿದ್ದೆಗೆ ತೊಂದರೆ ಆಗಿದ್ದು ವಾಲ್ಯೂಮ್ ಕಡಿಮೆ ಕೊಡುವಂತೆ ಪುಲ್ಲಕ್ದಾಸ್ ಕೊಠಡಿಗೆ ತೆರಳಿ ವಿನಂತಿಸಿದ್ದರು. ಇದೇ ಕಾರಣಕ್ಕೆ ಜಗಳ ನಡೆದಿತ್ತು. ಮಾತಿನ ಜಗಳದ ನಡುವೆಯೇ ಆತ ಚಾಕುವಿನಿಂದ ಭಾರತಿ ಅವರ ಕುತ್ತಿಗೆಗೆ ಇರಿದಿದ್ದ. ಪರಿಣಾಮ ಆಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಇತರೆ ಕಾರ್ಮಿಕರು ಭಾರತಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಭಾರತಿ ಕುತ್ತಿಗೆಗೆ 26 ಹೊಲಿಗೆಗಳನ್ನು ಹಾಕಲಾಗಿದೆ. ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೇಳಿಕೆ ಆಧರಿಸಿ ಪುಲ್ಲಕ್ದಾಸ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.