ಆ್ಯಪ್ನಗರ

ಅನೈತಿಕ ಸಂಬಂಧಕ್ಕಾಗಿ ಪತಿ ಕೊಲೆ: ಪತ್ನಿ, ಪ್ರಿಯಕರ ಬಂಧನ

ಅಸ್ಸಾಂ ಮೂಲದ ಕಹಿಮುದ್ದೀನ್‌ (18) ಹಾಗೂ ಶಾಂತಿ (29) ಬಂಧಿತ ಆರೋಪಿಗಳು.ತಮ್ಮ ನಡುವಿದ್ದ ಅನೈತಿಕ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಈ ಇಬ್ಬರೂ ಜೂ.22 ರಂದು ಕಣ್ಣಪ್ಪ (27)ನನ್ನು ಕೊಲೆ ಮಾಡಿದ್ದರು.

Vijaya Karnataka 25 Jun 2019, 5:00 am
ವಿಕ ಸುದ್ದಿಲೋಕ ಬೆಂಗಳೂರು : ಅನೈತಿಕ ಸಂಬಂಧಕ್ಕಾಗಿ ಪತಿಯನ್ನೇ ಕೊಲೆ ಮಾಡಿಸಿದ ಆರೋಪದ ಮೇಲೆ ಬೇಗೂರು ಠಾಣೆ ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
Vijaya Karnataka Web husband murder wife and lover arrested
ಅನೈತಿಕ ಸಂಬಂಧಕ್ಕಾಗಿ ಪತಿ ಕೊಲೆ: ಪತ್ನಿ, ಪ್ರಿಯಕರ ಬಂಧನ


ಅಸ್ಸಾಂ ಮೂಲದ ಕಹಿಮುದ್ದೀನ್‌ (18) ಹಾಗೂ ಶಾಂತಿ (29) ಬಂಧಿತ ಆರೋಪಿಗಳು.ತಮ್ಮ ನಡುವಿದ್ದ ಅನೈತಿಕ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಈ ಇಬ್ಬರೂ ಜೂ.22 ರಂದು ಕಣ್ಣಪ್ಪ (27)ನನ್ನು ಕೊಲೆ ಮಾಡಿದ್ದರು. ಪತಿ ಕಣ್ಣಪ್ಪನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಬಳಿಕ ಪತ್ನಿ ಶಾಂತಿ ತನಗೇನೂ ಗೊತ್ತಿಲ್ಲ ಎನ್ನುವಂತೆ ನಾಟಕ ಆಡಿಕೊಂಡು ಮನೆಯಲ್ಲೇ ಸುಮ್ಮನಿದ್ದರು. ಆದರೆ ತನಿಖೆ ನಡೆಸಿದ ಅಧಿಕಾರಿಗಳು ಸ್ಥಳದಲ್ಲಿ ಸಿಕ್ಕ ಸುಳಿವುಗಳನ್ನು ಆಧರಿಸಿ ಕಹಿಮುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ಕೊಲೆಯ ಹಿಂದಿನ ನಿಗೂಢವನ್ನು ಬಹಿರಂಗಗೊಳಿಸಿದ್ದಾನೆ.

ಕಣ್ಣಪ್ಪ ಮತ್ತು ಶಾಂತಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಣ್ಣಪ್ಪ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಆಗಿದ್ದ. ಶಾಂತಿ ಮನೆ ಕೆಲಸ ಮಾಡಿಕೊಂಡಿದ್ದಳು. ಅಸ್ಸಾಂ ಮೂಲದ ಕಹಿಮುದ್ದೀನ್‌ ಪ್ಲೈವುಡ್‌ ಕೆಲಸ ಮಾಡಿಕೊಂಡಿದ್ದ. ಶಾಂತಿ ಮನೆ ಕೆಲಸಕ್ಕೆಂದು ಹೋಗುವಾಗ ಕಹಿಮುದ್ದೀನ್‌ ಆಕೆಯನ್ನು ಹಿಂಬಾಲಿಸುತ್ತಿದ್ದ. ಕೆಲ ದಿನಗಳ ಬಳಿಕ ಇಬ್ಬರಿಗೂ ಪರಿಚಯವಾಗಿ, ಅದು ಸ್ನೇಹಕ್ಕೂ ತಿರುಗಿತ್ತು. ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧವೂ ಬೆಳೆದು ಗುಟ್ಟಾಗಿ ಒಬ್ಬರನ್ನೊಬ್ಬರು ಭೇಟಿ ಆಗುತ್ತಿದ್ದರು. ಈ ವಿಷಯ ಅಕ್ಕ ಪಕ್ಕದವರ ಮೂಲಕ ಪತಿ ಕಣ್ಣಪ್ಪನಿಗೂ ಗೊತ್ತಾಗಿತ್ತು. ಕಣ್ಣಪ್ಪ ಪತ್ನಿಯನ್ನು ಹಿಂಬಾಲಿಸಿದಾಗ ಇಬ್ಬರೂ ಸಿಕ್ಕಿ ಬಿದ್ದಿದ್ದರು. ಇದೇ ವಿಚಾರಕ್ಕೆ ಪತ್ನಿಗೆ ಬುದ್ಧಿ ಹೇಳಿದ್ದ ಪತಿ ಆತನ ಸಹವಾಸದಿಂದ ದೂರ ಇರುವಂತೆ ಎಚ್ಚರಿಸಿದ್ದರು. ಆದರೂ ಪತ್ನಿಗೆ ಕಹಿಮುದ್ದೀನ್‌ನನ್ನು ಬಿಟ್ಟಿರಲು ಮನಸ್ಸಾಗದೆ ಆತನ ಜತೆ ಸೇರಿ ಪತಿಯ ಕೊಲೆಗೇ ಪ್ರೇರಣೆ ನೀಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು.

ಜೂ.22 ರಂದು ಕೂಡ್ಲುಗೇಟ್‌ ಬಳಿಯ ನಿರ್ಜನ ಪ್ರದೇಶದಲ್ಲಿ ಕಹಿಮುದ್ದೀನ್‌ ತನ್ನ ಮತ್ತೊಬ್ಬ ಸ್ನೇಹಿತನ ಜತೆ ಸೇರಿ ಕಣ್ಣಪ್ಪನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಬಳಿಕ ಪತ್ನಿ ಪೊಲೀಸರಿಗೆ ಮಾಹಿತಿ ನೀಡದೆ ಪತಿಯನ್ನು ಯಾರೋ ಕೊಲೆ ಮಾಡಿ ಬಿಟ್ಟಿದ್ದಾರೆ ಎಂದು ಅಕ್ಕ ಪಕ್ಕದವರ ಎದುರು ಕಣ್ಣೀರು ಸುರಿಸಿದ್ದಳು. ತನಿಖೆಗೆ ಇಳಿದ ಪೊಲೀಸರು ಕಹಿಮುದ್ದೀನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಾಂತಿ ಮತ್ತು ತಾನು ಸೇರಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಆಕೆಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ