ಆ್ಯಪ್ನಗರ

ತುರಿಕೆ ಪುಡಿ ಎರಚಿ ದರೋಡೆ ಮಾಡುವ ಗುಂಪು ಮತ್ತೆ ಸಕ್ರಿಯ

ಬಲಿ ಪಶು ವ್ಯಕ್ತಿಯನ್ನು ಗುರುತಿಸಿ ಮೈ ಮೇಲೆ ತುರಿಕೆ ಪುಡಿ ಎಸೆಯುತ್ತಾರೆ. ಸಂತ್ರಸ್ತ ತುರಿಕೆ ತಡೆಯದೆ ಅದನ್ನು ತೊಳೆಯುವುದರಲ್ಲಿ ಮಗ್ನವಾಗುತ್ತಾನೆ. ಆಗ ಇವರು ತಮಗೆ ಬೇಕಾದುದನ್ನು ಲೂಟಿ ಹೊಡೆದು ಜಾಗ ಖಾಲಿ ಮಾಡುತ್ತಾರೆ. ಇದು ಇವರ ದರೋಡೆ ಶೈಲಿ.

Vijaya Karnataka Web 22 Jul 2018, 12:34 pm
ಬೆಂಗಳೂರು: ಬಲಿ ಪಶು ವ್ಯಕ್ತಿಯನ್ನು ಗುರುತಿಸಿ ಮೈ ಮೇಲೆ ತುರಿಕೆ ಪುಡಿ ಎಸೆಯುತ್ತಾರೆ. ಸಂತ್ರಸ್ತ ತುರಿಕೆ ತಡೆಯದೆ ಅದನ್ನು ತೊಳೆಯುವುದರಲ್ಲಿ ಮಗ್ನವಾಗುತ್ತಾನೆ. ಆಗ ಇವರು ತಮಗೆ ಬೇಕಾದುದನ್ನು ಲೂಟಿ ಹೊಡೆದು ಜಾಗ ಖಾಲಿ ಮಾಡುತ್ತಾರೆ. ಇದು ಇವರ ದರೋಡೆ ಶೈಲಿ.
Vijaya Karnataka Web theft


ಇವರು ತಮ್ಮ ಕೃತ್ಯಕ್ಕೆ ಬ್ಯಾಂಕ್‌ಗಳು, ಚಿನ್ನಾಭರಣ ಮಳಿಗೆಗಳಿರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಂಗೇರಿಯಲ್ಲಿ ಈ ಕಳ್ಳರ ಗುಂಪು ಮತ್ತೆ ಸಕ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಎರಡನೇ ಬಾರಿ ಈ ರೀತಿಯ ಲೂಟಿ ನಡೆದಿದೆ.

ಕೆಂಗೇರಿಯಲ್ಲಿ ಇದೇ ಮಾದರಿಯಲ್ಲಿ ಮಹಿಳೆಯೊಬ್ಬರ ಚಿನ್ನಾಭರಣ ದೋಚಿದ್ದು, ಕೆಲವು ದಿನಗಳ ಹಿಂದೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವ್ಯಕ್ತಿಯೊಬ್ಬರು 1.5 ಲಕ್ಷ ಕಳೆದುಕೊಂಡಿದ್ದಾರೆ.

ಕೆಂಗೇರಿ ಸ್ಯಾಟ್‌ಲೈಟ್‌ ಟೌನ್‌ನಲ್ಲಿ ವೆಂಕಟೇಶ್‌ ಎಂಬವರು ಪತ್ನಿ ಜತೆ ದ್ವಿಚಕ್ರ ವಾಹನದಲ್ಲಿ ಕರ್ನಾಟಕ ಬ್ಯಾಂಕ್‌ನಿಂದ ಚಿನ್ನಾಭರಣ ಬಿಡಿಸಿ ತರುತ್ತಿದ್ದರು. ಆಗ ಪತ್ನಿಯ ಮೇಲೆ ತುರಿಕೆ ಪುಡಿ ಬಿದ್ದಿದೆ. ಆಕೆಗೆ ತುರಿಸಲಾರಂಭಿಸಿದಾಗ ಜ್ಯೂಸ್‌ ಸೆಂಟರ್‌ ಬಳಿ ವಾಹನ ನಿಲ್ಲಿಸಿದ ವೆಂಕಟೇಶ್‌ ತುರಿಕೆಯಾಗುತ್ತಿದ್ದ ಪತ್ನಿಯ ಬೆನ್ನಿನ ಭಾಗವನ್ನು ತೊಳೆದು ವಾಪಸ್‌ ವಾಹನದತ್ತ ಬರಬೇಕಾದರೆ ಆಭರಣಗಳಿದ್ದ ಬ್ಯಾಗ್‌ ನಾಪತ್ತೆಯಾಗಿದೆ.

ತಮಿಳುನಾಡು, ಹೈದರಾಬಾದ್‌, ಭದ್ರಾವತಿ, ಚಿತ್ರದುರ್ಗ, ಕೋಲಾರ, ಬೆಂಗಳೂರು ನಗರಗಳಲ್ಲಿ ಈ ಗುಂಪು ಸಕ್ರಿಯವಾಗಿದೆ. ಕಲಾಸಿಪಾಳ್ಯ, ಉಪ್ಪಾರಪೇಟೆ, ವಿಜಯನಗರ ಸೇರಿದಂತೆ ಈವರೆಗೆ ಪೊಲೀಸರು ಐದು ಗುಂಪುಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ವೆಸ್ಟ್‌ ಡಿಸಿಪಿ ರವಿ ಚನ್ನಣ್ಣನವರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ