ಆ್ಯಪ್ನಗರ

ವೈದ್ಯರ ಬಳಿ ಹಣಕ್ಕೆ ಡಿಮ್ಯಾಂಡ್‌ ಆರೋಪ : ಪತ್ರಕರ್ತನ ಬಂಧನ

ಹೆಸರಾಂತ ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಹಣಕ್ಕೆ ಡಿಮ್ಯಾಂಡ್‌ ಮಾಡಿದ ಆರೋಪದ ಮೇಲೆ ಸುದ್ದಿವಾಹಿನಿಯ ಪತ್ರಕರ್ತ ಹೇಮಂತ್‌ ಎಂಬುವವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 20 Mar 2019, 5:00 am
ಬೆಂಗಳೂರು : ಹೆಸರಾಂತ ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಹಣಕ್ಕೆ ಡಿಮ್ಯಾಂಡ್‌ ಮಾಡಿದ ಆರೋಪದ ಮೇಲೆ ಸುದ್ದಿವಾಹಿನಿಯ ಪತ್ರಕರ್ತ ಹೇಮಂತ್‌ ಎಂಬುವವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web journalist demands more money from the doctor arrest
ವೈದ್ಯರ ಬಳಿ ಹಣಕ್ಕೆ ಡಿಮ್ಯಾಂಡ್‌ ಆರೋಪ : ಪತ್ರಕರ್ತನ ಬಂಧನ


''ನಿಮ್ಮ ಸೆಕ್ಸ್‌ ಟೇಪ್‌ ಇದೆ ಎಂದು ವೈದ್ಯರಿಗೆ ಹೇಳಿದ ವಾಹಿನಿಯ ವರದಿಗಾರರೊಬ್ಬರು, ಪ್ರಸಾರ ಮಾಡದಿರಲು 5 ಲಕ್ಷ ರೂ. ಪಡೆದುಕೊಂಡಿದ್ದರು. ಅದಾದ ನಂತರ ಹೇಮಂತ್‌ ಕೂಡ ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದರು. ಈ ಸಂಬಂಧ ವೈದ್ಯರು ನೀಡಿದ ದೂರು ಆಧರಿಸಿ ಮಂಗಳವಾರ ಸಂಜೆ ಬಂಧಿಸಲಾಗಿದೆ'' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು. ''ಈಗಾಗಲೇ ಹಣ ಪಡೆದಿದ್ದಾರೆ ಎನ್ನಲಾದ ಮತ್ತೊಬ್ಬ ವರದಿಗಾರನ ವಿಚಾರಣೆ ನಡೆಸಬೇಕಿದೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ,'' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ