ಆ್ಯಪ್ನಗರ

ಮೂವರ ದುರ್ಮರಣ : ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕೃಷ್ಣರಾಜಪುರ ಸಮೀಪದ ಸೀಗೆಹಳ್ಳಿಯಲ್ಲಿರುವ ಹೊಲಿಸೋಲ್‌ ಲಾಜಿಸ್ಟಿಕ್ಸ್‌ ಪ್ರೈ.ಲಿಗೆ ಸೇರಿದ ಗೋದಾಮಿನಲ್ಲಿ ಗುರುವಾರ ಮಧ್ಯಾಹ್ನ ನಡೆದ ದುರಂತ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Vijaya Karnataka 15 Dec 2018, 5:00 am
ಬೆಂಗಳೂರು/ಕೆ.ಆರ್‌ ಪುರ: ಕೃಷ್ಣರಾಜಪುರ ಸಮೀಪದ ಸೀಗೆಹಳ್ಳಿಯಲ್ಲಿರುವ ಹೊಲಿಸೋಲ್‌ ಲಾಜಿಸ್ಟಿಕ್ಸ್‌ ಪ್ರೈ.ಲಿಗೆ ಸೇರಿದ ಗೋದಾಮಿನಲ್ಲಿ ಗುರುವಾರ ಮಧ್ಯಾಹ್ನ ನಡೆದ ದುರಂತ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
Vijaya Karnataka Web judicial custody to sigehalli warehouse owner and manager
ಮೂವರ ದುರ್ಮರಣ : ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ


ಘಟನೆ ಸಂಬಂಧ ಕಂಪನಿಯ ವ್ಯವಹಾರಗಳ ಮುಖ್ಯಸ್ಥ ಅಜಯ್‌ ಮತ್ತು ಸೈಟ್‌ ಮೇಲ್ವಿಚಾರಕ ಅಮಾನುಲ್ಲಾ ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ರಾರ‍ಯಕ್‌ಗಳ ಸಾಮರ್ಥ್ಯಕ್ಕೆ ತಕ್ಕಂತೆ ವಸ್ತುಗಳನ್ನು ಜೋಡಿಸುವ ಬದಲು ಹೆಚ್ಚಿನ ವಸ್ತುಗಳ ಜೋಡಣೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದ ಗೋದಾಮಿನ ಮೇಲ್ವಿಚಾರಕ ಕುಲದೀಪ್‌, ತಿರುಮಲ ಶೆಟ್ಟಿ ಹಳ್ಳಿ ನಿವಾಸಿ ಜಾನಕಿರಾಮ್‌, ಚನ್ನಸಂದ್ರದ ನಾರಾಯಣಸ್ವಾಮಿ ಮತ್ತು ನೇಪಾಳ ಮೂಲದ ಬಾಹುಬಲಿ ಮತ್ತು ಓಡಿಶಾ ಮೂಲದ ರಮಾಕಾಂತ್‌ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ಮೃತಪಟ್ಟಿರುವ ಕೊರಳೂರು ನಿವಾಸಿ ಫಾರೂಕ್‌(22) ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಒಪ್ಪಿಸಲಾಗಿದೆ. ಒಡಿಶಾ ಮೂಲದ ಸುಭಾಷ್‌ (25) ಮತ್ತು ಜ್ಞಾನದರ್ಶನ್‌ ಅವರ ಪಾಲಕರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪಾಲಕರ ವಶಕ್ಕೆ ಒಪ್ಪಿಸುವುದಾಗಿ ಕಾಡುಗೋಡಿ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ