ಆ್ಯಪ್ನಗರ

ಕಮ್ಮನಹಳ್ಳಿ ಪ್ರಕರಣ: ತನಿಖೆಗೆ ಸಹಕರಿಸದ ಯುವತಿ

ಹೊಸ ವರ್ಷದ ರಾತ್ರಿಯಂದು ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ದೊಡ್ಡ ತಲೆನೋವಿನ ಕೆಲಸವಾಗಿದೆ. ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್‌ಗಾಗಿ ಯುವತಿ ಮಂಗಳವಾರವೂ ಬಂದಿಲ್ಲ.

ವಿಕ ಸುದ್ದಿಲೋಕ 28 Feb 2017, 1:03 pm
ಬೆಂಗಳೂರು: ಹೊಸ ವರ್ಷದ ರಾತ್ರಿಯಂದು ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ದೊಡ್ಡ ತಲೆನೋವಿನ ಕೆಲಸವಾಗಿದೆ. ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್‌ಗಾಗಿ ಯುವತಿ ಮಂಗಳವಾರವೂ ಬಂದಿಲ್ಲ.
Vijaya Karnataka Web kammanahalli casevictim woman non cooperation
ಕಮ್ಮನಹಳ್ಳಿ ಪ್ರಕರಣ: ತನಿಖೆಗೆ ಸಹಕರಿಸದ ಯುವತಿ


ಸೋಮವಾರವೂ ಗುರುತುಪತ್ತೆಗೆ ಸಹಕರಿಸುವಂತೆ ಒಪ್ಪಿಸಲು ಆಕೆಯ ಮನೆಗೆ ತೆರಳಿದ ಅಧಿಕಾರಿಗಳು ಮನೆಗೆ ಬೀಗ ಹಾಕಿರುವುದನ್ನು ಕಂಡು ವಾಪಸಾಗಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಈ ಪ್ರಕರಣದ ತನಿಖೆಗೆ ಇಳಿದ ಅಧಿಕಾರಿಗಳಿಗೆ ಯುವತಿಯ ಅಸಹಕಾರ ಸಮಸ್ಯೆಯಾಗಿದೆ. ಇದುವರೆಗೂ ಮೂರು ಬಾರಿ ಆರೋಪಿಗಳ ಗುರುತು ಪತ್ತೆ ಪರೇಡ್‌ಗೆ ದಿನಾಂಕ ನಿಗದಿ ಮಾಡಿದ್ದರೂ ಯುವತಿ ಹಾಜರಾಗದ ಕಾರಣ ತನಿಖೆಗೆ ಹಿನ್ನಡೆಯಾಗಿದೆ.

ಯುವತಿಗೆ ಫೋನ್‌ ಮಾಡಿದರೂ ಆಕೆ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಯುವತಿಯ ಮನವೊಲಿಸುವ ಸಲುವಾಗಿ ಸೋಮವಾರ ಬೆಳಗ್ಗೆ ಅಧಿಕಾರಿಗಳ ತಂಡ ಆಕೆಯ ನಿವಾಸಕ್ಕೆ ತೆರಳಿತ್ತು. ಆದರೆ ಪೊಲೀಸರ ಗಮನಕ್ಕೇ ತರದಂತೆ ಆಕೆ ಮನೆ ಖಾಲಿ ಮಾಡಿದ್ದಾರೆ. ಹೊಸ ಮನೆಯ ವಿಳಾಸವನ್ನೂ ಪೊಲೀಸರಿಗೆ ನೀಡಿಲ್ಲ. ಅಕ್ಕ ಪಕ್ಕದವರಿಗೂ ವಿಷಯ ಗೊತ್ತಿಲ್ಲ. ಹೀಗಾಗಿ ಅಧಿಕಾರಿಗಳ ತಂಡ ಬರಿಗೈಯಲ್ಲಿ ವಾಪಸಾಗಿದೆ.

'ಪ್ರಕರಣ ದಾಖಲಿಸಿಕೊಂಡ ಮೇಲೆ ಆರೋಪಿಗಳಿಗೆ ಶಿಕ್ಷೆ ಆಗುವವರೆಗೂ ನಿಗಾ ವಹಿಸುವುದು ನಮಗೆ ಮುಖ್ಯ. ಹೀಗಾಗಿ ಎಲ್ಲ ಪ್ರಯತ್ನಗಳನ್ನು ಮುಂದುವರಿಸಿದ್ದೇವೆ,'ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ