ಆ್ಯಪ್ನಗರ

ರಾಜ್‌ ಕುಟುಂಬದ ಆಪ್ತ, ಉದ್ಯಮಿ ಕಪಾಲಿ ಮೋಹನ್‌ ಆತ್ಮಹತ್ಯೆ

ಇತ್ತೀಚೆಗೆ ಆರ್.ಜೆ. ರಾಯಲ್ಸ್ ಹೋಟೆಲ್ ಮತ್ತು ಕಪಾಲಿ ಮೋಹನ್‌ ಮನೆ ಮೇಲೆ ಸಿಟಿ ಕ್ರೈಂ ಬ್ರಾಂಚ್‌ (ಸಿಸಿಬಿ) ಪೊಲೀಸರು ರೇಡ್‌ ಮಾಡಿದ್ದರು. ಈ ನಡುವೆ ಅವರು ಸೋಮವಾರ ತಮ್ಮ ಸುಪ್ರೀಂ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Vijaya Karnataka Web 23 Mar 2020, 2:37 pm

ಬೆಂಗಳೂರು: ದಿವಂಗತ ಡಾ. ರಾಜ್‌ ಕುಮಾರ್‌ ಕುಟುಂಬಕ್ಕೆ ಆಪ್ತರಾಗಿದ್ದ ಉದ್ಯಮಿ ಕಪಾಲಿ ಮೋಹನ್‌ ಸೋಮವಾರ ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Vijaya Karnataka Web Kapali Mohan


ಬೆಂಗಳೂರಿನ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಸಮೀಪದಲ್ಲಿರುವ ಸುಪ್ರೀಂ ಹೋಟೆಲ್‌ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅವರದ್ದೇ ಒಡೆತನದ ಹೋಟೆಲ್ ಆಗಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಇತ್ತೀಚೆಗೆ ಆರ್.ಜೆ. ರಾಯಲ್ಸ್ ಹೋಟೆಲ್ ಮತ್ತು ಕಪಾಲಿ ಮೋಹನ್‌ ಮನೆ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ರೇಡ್‌ ಮಾಡಿದ್ದರು. ಈ ನಡುವೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯ ಬಳಿಕವಷ್ಟೆ ತಿಳಿದು ಬರಬೇಕಿದೆ.

ರಾಜ್ ಫ್ಯಾಮಿಲಿ ಐಟಿ ದಾಳಿ ಹಿಂದೆ 'ಕಪಾಲಿ' ಕರಿನೆರಳು

ಸ್ಥಳಕ್ಕೆ ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ