ಆ್ಯಪ್ನಗರ

ಸಾಂಗ್ಲಿಯಲ್ಲಿ ಅಪಘಾತ: ರಾಜ್ಯದ 11 ಕಾರ್ಮಿಕರು ಬಲಿ

ಸಾಂಗ್ಲಿ ಜಿಲ್ಲೆಯ ತಸ್ಗಾಂವ್‌ನ ಕವತೆ ಮಹಂಕಲ್‌ ಸಮೀಪ ನಡೆದ ಅಪಘಾತದಲ್ಲಿ ಕರ್ನಾಟಕದ ಹನ್ನೊಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.

Vijaya Karnataka Web 21 Oct 2017, 12:07 pm
ಬೆಂಗಳೂರು: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಸ್ಗಾಂವ್‌ ತಾಲೂಕಿನ ಯೋಗೆವಾಡಿ ಸಮೀಪ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕದ ಹನ್ನೊಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರು ವಿಜಾಪುರ ಜಿಲ್ಲೆಯ ಸಿಂದಗಿ , ತಾಳಿಕೋಟೆ, ಯಾದಗಿರಿ ಜಿಲ್ಲೆ ಶಹಾಪುರ ಹಾಗೂ ಕಲಬುರಗಿ ಮೂಲದವರು.
Vijaya Karnataka Web karnataka people died in sangli by road accident
ಸಾಂಗ್ಲಿಯಲ್ಲಿ ಅಪಘಾತ: ರಾಜ್ಯದ 11 ಕಾರ್ಮಿಕರು ಬಲಿ


ಘಟನೆಯಲ್ಲಿ ಹನ್ನೆರಡು ಮಂದಿ ಗಾಯಗೊಂಡಿದ್ದಾರೆ. ಹೊಟ್ಟೆಪಾಡಿಗಾಗಿ ರಾಜ್ಯದ ಕೂಲಿ ಕಾರ್ಮಿಕರು ಟ್ರಕ್‌ನಲ್ಲಿ ಕರಾಡ್‌ಗೆ ಪ್ರಯಾಣಿಸುತ್ತಿರುವಾಗ ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಟ್ರಕ್‌ನಲ್ಲಿ ಮಾರ್ಬಲ್‌ ತುಂಬಿಡಲಾಗಿತ್ತು, ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಅಪಘಾತ ನಡೆದಿದೆ.

ಮಹಾರಾಷ್ಟ್ರ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಕೂಲಿ ಕಾರ್ಮಿಕರು ಬಸ್‌ ದೊರೆಯದೆ ಟ್ರಕ್‌ನಲ್ಲೇ ಪ್ರಯಾಣಿಸಿದ್ದರು ಎನ್ನಲಾಗಿದೆ. ಮೃತರು ಮತ್ತು ಗಾಯಾಳುಗಳ ಗುರುತು ಮಾಹಿತಿ ಇನ್ನಷ್ಟೇ ಖಚಿತವಾಗಬೇಕಿದೆ. ಗಾಯಾಳುಗಳನ್ನು ಮೀರಜ್‌ ಆಸ್ಪತ್ರೆಗೆ ದಾಖಲಿಲಸಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ