ಆ್ಯಪ್ನಗರ

ಅಂಧ ದಂಪತಿಯ ಕಾಣೆಯಾಗಿದ್ದ ಮಗು ಪತ್ತೆ

ಅಂಧ ದಂಪತಿಯ 8 ತಿಂಗಳ ಮಗು ಕಾಣೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಲಕ್ಷ್ಮೇದೇವಿ ಎನ್ನುವವರು ಮಗುವನ್ನು ಉಪ್ಪಾರಪೇಟೆ ಠಾಣೆಗೆ ತಂದು ಒಪ್ಪಿಸಿದ್ದಾರೆ.

Vijaya Karnataka 1 May 2019, 5:00 am
ಬೆಂಗಳೂರು: ಅಂಧ ದಂಪತಿಯ 8 ತಿಂಗಳ ಮಗು ಕಾಣೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಲಕ್ಷ್ಮೇದೇವಿ ಎನ್ನುವವರು ಮಗುವನ್ನು ಉಪ್ಪಾರಪೇಟೆ ಠಾಣೆಗೆ ತಂದು ಒಪ್ಪಿಸಿದ್ದಾರೆ.
Vijaya Karnataka Web kidnapped baby found
ಅಂಧ ದಂಪತಿಯ ಕಾಣೆಯಾಗಿದ್ದ ಮಗು ಪತ್ತೆ


ರಾಯಚೂರು ಮೂಲದ ಬಸವರಾಜು ಹಾಗೂ ಬಿ.ಕೆ ಚಿನ್ನು ಅವರ 8 ತಿಂಗಳ ಗಂಡು ಮಗು ಸಾಗರ್‌ ಅಪಹರಣಕ್ಕೆ ಒಳಗಾಗಿತ್ತು. ಅಪರಿಚಿತ ಮಹಿಳೆಯೊಬ್ಬಳು ಮೆಜೆಸ್ಟಿಕ್‌ನಲ್ಲಿ ಮಗುವನ್ನು ತನ್ನ ಅಕ್ಕ ಪಾರ್ವತಮ್ಮನ ಕೈಗೆ ಕೊಟ್ಟು ನಾಪತ್ತೆಯಾಗಿದ್ದು, ಮಾಧ್ಯಮಗಳಲ್ಲಿನ ವರದಿ ಗಮನಿಸಿ ಮಗುವನ್ನು ತಂದು ಒಪ್ಪಿಸಿರುವುದಾಗಿ ಲಕ್ಷ್ಮೇದೇವಿ ಹೇಳಿಕೆ ನೀಡಿದ್ದಾರೆ.

ನಡೆದಿದ್ದೇನು ?: ಪಾರ್ವತಮ್ಮ ಅವರು ಚಿತ್ರದುರ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿದ್ದಾರೆ. ಸಹೋದರಿ ಲಕ್ಷ್ಮೇದೇವಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ವಾಪಸ್‌ ಚಿತ್ರದುರ್ಗಕ್ಕೆ ತೆರಳಲು ಏ.27 ರಂದು ಮೆಜೆಸ್ಟಿಕ್‌ನ ಪ್ಲಾಟ್‌ಫಾರಂ ನಂಬರ್‌ 19 ರಲ್ಲಿ ನಿಂತಿದ್ದಾಗ ಮಹಿಳೆಯೊಬ್ಬರು ಮಗುವನ್ನು ಪಾರ್ವತಮ್ಮ ಅವರ ಕೈಗೆ ಕೊಟ್ಟು ಶೌಚಾಲಯಕ್ಕೆ ಹೋಗಿ ಬರುವವರೆಗೂ ನೋಡಿಕೊಂಡಿರಿ ಎಂದು ಹೇಳಿದ್ದರು. ಅದರಂತೆ ಪಾರ್ವತಮ್ಮ ಮಗುವನ್ನು ಸ್ವಲ್ಪ ಸಮಯ ಎತ್ತಿಕೊಂಡಿದ್ದರು. ಆದರೆ ಆ ಮಹಿಳೆ ಬಹಳ ಹೊತ್ತಾದರೂ ವಾಪಸ್‌ ಬರಲಿಲ್ಲ. ಬಳಿಕ ಶೌಚಾಲಯದೊಳಗೆ ಹೋಗಿ ನೋಡಿದರೆ ಅಲ್ಲೂ ಆಕೆ ಇರಲಿಲ್ಲ. ಕೆಲ ಕಾಲ ಮಗುವನ್ನು ಎತ್ತಿಕೊಂಡು ಸುತ್ತ ಮುತ್ತ ಹುಡುಕಾಡಿದ ಪಾರ್ವತಮ್ಮ ಬಳಿಕ ಬೇರೆ ದಾರಿ ತೋಚದೆ ಆ ಮಗುವನ್ನು ವಾಪಸ್‌ ತಂದು ಲಕ್ಷ್ಮೇದೇವಿ ಮನೆಯಲ್ಲಿ ಬಿಟ್ಟು ತೆರಳಿದ್ದರು. ಮರುದಿನದ ಪತ್ರಿಕೆಗಳಲ್ಲಿ ಮಗು ನಾಪತ್ತೆ ಆಗಿರುವುದು ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ಗಮನಿಸಿದ ಲಕ್ಷ್ಮೇದೇವಿ ಮಗುವನ್ನು ತಂದು ಠಾಣೆಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಮಗುವನ್ನು ಪೋಷಕರಿಗೆ ಒಪ್ಪಿಸಿರುವ ಪೊಲೀಸರು ಪಾರ್ವತಮ್ಮ ಕೈಗೆ ಮಗು ಕೊಟ್ಟ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜತೆಗೆ ಲಕ್ಷ್ಮೇದೇವಿ ಅವರ ಹೇಳಿಕೆ ಸಂಪೂರ್ಣ ಸತ್ಯವೇ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದು, ಪಾರ್ವತಮ್ಮ ಅವರನ್ನೂ ಈ ಬಗ್ಗೆ ಪ್ರಶ್ನಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ