ಆ್ಯಪ್ನಗರ

ನಾಯಿ ರಕ್ಷಕನ ಸೋಗಿನಲ್ಲಿ ಮಹಿಳಾ ಉದ್ಯೋಗಿಗೆ ಪಂಗನಾಮ: ಸಾವಿರಾರು ರೂ. ವಂಚನೆ

ನಾಯಿ ರಕ್ಷಕನನ್ನು ಹುಡುಕಲು ಹೋಗಿ ಆನ್‌ಲೈನ್‌ನಲ್ಲಿ ಸಾವಿರಾರು ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ ಬೆಂಗಳೂರಿನ ಮಹಿಳೆ. ಈ ಸಂಬಂಧ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Vijaya Karnataka Web 8 Apr 2020, 3:12 pm
ಬೆಂಗಳೂರು: ಆಹಾರವಿಲ್ಲದೆ ನರಳಾಡುತ್ತಿದ್ದ ಬೀದಿ ನಾಯಿಯನ್ನು ರಕ್ಷಿಸಿ ಚಿಕಿತ್ಸೆ ಮತ್ತು ಆಹಾರ ಕೊಡಿಸಲು ಮುಂದಾದ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಗೆ ಆನ್‌ಲೈನ್‌ ಖದೀಮರು 5 ಸಾವಿರ ರೂ. ವಂಚಿಸಿದ್ದಾರೆ.
Vijaya Karnataka Web hackers


ಖಾಸಗಿ ಕಂಪನಿಯ ಟ್ಯಾಕ್ಸೇಷನ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 27 ವರ್ಷದ ಮಹಿಳೆ ರಾಜಾಜಿನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಇವರ ಮನೆಯ ಸಮೀಪ ನಾಯಿಯೊಂದು ಮೂರ್ನಾಲ್ಕು ದಿನಗಳಿಂದ ನೋವಿನಿಂದ ನರಳುತ್ತಿತ್ತು. ಅದನ್ನು ಗಮನಿಸಿದ್ದ ಮಹಿಳೆ ಭಾನುವಾರ (ಏ.5) ಮಧ್ಯಾಹ್ನ ಗೂಗಲ್‌ನಲ್ಲಿ ಪ್ರಾಣಿ ರಕ್ಷಣೆ ಮಾಡುವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಆರಂಭದಲ್ಲೇ ಸಿಕ್ಕ ಫೋನ್‌ ನಂಬರ್‌ವೊಂದಕ್ಕೆ ಕರೆ ಮಾಡಿ, ಆತ ಹೇಳಿದಂತೆ ಡಿಜಿಟಲ್‌ ವ್ಯಾಲೆಟ್‌ನ ಮಾಹಿತಿ ಕೊಟ್ಟು ಮೋಸ ಹೋಗಿದ್ದಾರೆ.

ನಾಯಿ ರಕ್ಷಣೆ ಮಾಡುತ್ತೇವೆ, ಆದರೆ, ಅದಕ್ಕಾಗಿ ಹತ್ತು ರೂ. ಶುಲ್ಕ ಕಟ್ಟಬೇಕು ಎಂದು ಅಪರಿಚಿತ ಹೇಳಿದ್ದ. ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್‌ ಕಳುಹಿಸುತ್ತಿದ್ದೇವೆ. ಅದರಲ್ಲಿನ ಲಿಂಕ್‌ ಕ್ಲಿಕ್‌ ಮಾಡಿ ವಿವರ ತುಂಬಿ ಎಂದು ಕೇಳಿದ್ದ. ಅದರಂತೆ ಯುಪಿಐ ನಂಬರ್‌, ನಾಲ್ಕು ಅಂಕಿಗಳ ಪಿನ್‌ ಹಾಗೂ ಇನ್ನೊಂದು ಮಾಹಿತಿಯನ್ನು ತುಂಬಿದ್ದೆ. ಒಂದೆರೆಡು ನಿಮಿಷದಲ್ಲೇ ಪಾಸ್‌ವರ್ಡ್‌ ರಿಸೆಟ್‌ ಮಾಡಿರುವಂತೆ ಒಂದು ಸಂದೇಶ ಬಂತು. ನಂತರ 5 ಸಾವಿರ ರೂ. ಕಡಿತದ ಸಂದೇಶ ಬಂತು. ಏನೋ ಅಪಾಯವಾಗಿದೆ ಎಂದು ಅರಿತು, ಕೂಡಲೇ ಬ್ಯಾಂಕ್‌ ಚಟುವಟಿಕೆಗಳನ್ನು ಬಂದ್‌ ಮಾಡಿದೆ. ನಂತರ ಬೇರೆ ಬೇರೆ ಬ್ಯಾಂಕ್‌ಗಳ ಸಂದೇಶಗಳು ಬಂದವು ಎಂದು ಮಹಿಳೆ ವಿವರಿಸಿದರು.

ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಸಿಸಿಬಿ ವಶಕ್ಕೆ: 100 ಬಾಟಲ್‌ ಸೀಜ್

ಬೀದಿ ನಾಯಿ ಕಷ್ಟ ನೋಡಲಾಗದೇ ನೆರವು ಕೋರಿದ್ದೆ. ಆದರೆ, ಈ ರೀತಿ ಆಗುತ್ತೆ ಎಂದು ಯೋಚಿಸಿರಲಿಲ್ಲ. ಸಾಮಾನ್ಯವಾಗಿ ನಾಯಿಗಳನ್ನು ರಕ್ಷಣೆ ಮಾಡುವವರು ಹಣ ಕೇಳುವುದಿಲ್ಲ. ಆದರೆ, ಆ ಕ್ಷಣದಲ್ಲಿ ನನಗೆ ಯೋಚನೆ ಬಾರದೆ ಕೇವಲ 10 ರೂ. ಮಾತ್ರವಲ್ಲವೇ ಎಂದು ಹಣ ಕಟ್ಟಲು ಮುಂದಾಗಿದ್ದೆ. ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ವಂಚಕನ ನಂಬರನ್ನು ಟ್ರೂ ಕಾಲರ್‌ಗೆ ಹಾಕಿದಾಗ ಫ್ರಾಡ್‌ ಎಂದು ನೂರಾರು ಜನ ರಿಪೋರ್ಟ್‌ ಮಾಡಿರುವುದು ಕಂಡು ಬಂತು ಎಂದು ವಿವರಿಸಿದರು.

ಫಸ್ಟ್‌ನೈಟ್‌ಗೂ ಮುನ್ನ ಪತ್ನಿಯ ಅಶ್ಲೀಲ ವಿಡಿಯೋ ಲೀಕ್‌! ಬೆಂಗಳೂರಲ್ಲಿ ಪತಿ ದೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ