ಆ್ಯಪ್ನಗರ

ಮಂಗಳೂರಿನಲ್ಲಿ ಪ್ರೇಮಿಗಳ ಆತ್ಮಹತ್ಯೆ, ಅನುಮಾನಾಸ್ಪದವಾಗಿ ಶವ ಪತ್ತೆ, ವ್ಯಕ್ತಿಯ ಹತ್ಯೆ

ಕಾಲೇಜು ವಿದ್ಯಾರ್ಥಿಗಳಿಬ್ಬರು ಜ್ಯೂಸ್ ನಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಕಲಹ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.

Vijaya Karnataka Web 14 Oct 2019, 12:38 pm
ಮಂಗಳೂರು: ನಗರದ ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಬ್ಬರು ಅತ್ತಾವರ ರೈಲ್ವೆ ನಿಲ್ದಾಣ ಬಳಿಯ ಲಾಡ್ಜ್ ವೊಂದರಲ್ಲಿ ವಿಷಸೇವನೆ ಮಾಡಿ ಆತ್ಮಹತ್ಯೆ ಯತ್ನಿಸಿದ್ದು, ಬಳಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯ ಪೆರುಂಬಳ ಕೊಳಿಯಡುಕ್ಕಂ ನಿವಾಸಿ ವಿಷ್ಣು (22) ಮತ್ತು ಕಾಸರಗೋಡು ನಿವಾಸಿ ಗ್ರೀಷ್ಮ (21) ಆತ್ಮಹತ್ಯೆ ಮಾಡಿಕೊಂಡವರು.
Vijaya Karnataka Web suicide ednf


ಗಾಂಧಿ ಆತ್ಮಹತ್ಯೆ ಮಾಡಿಕೊಂಡದ್ದು ಹೇಗೆ?: ಗುಜರಾತ್ ಶಾಲಾ ಪರೀಕ್ಷೆಯಲ್ಲಿ ಪ್ರಶ್ನೆ

ಇಬ್ಬರು ಮೂಲತಃ ಕೇರಳದವರಾಗಿದ್ದು ಗ್ರೀಷ್ಮ ನಗರದ ಖಾಸಗಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಓದುತ್ತಿದ್ದರೆ, ವಿಷ್ಣು ಮೂಡುಬಿದಿರೆ ಖಾಸಗಿ ಕಾಲೇಜಿನಲ್ಲಿ ಎಂಸ್ಸಿ ಓದುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಪರಸ್ಪರ ಪರಿಚಯವಾಗಿ ಇವರಿಬ್ಬರು ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಯನ್ನು ಮನೆಯವರು ಒಪ್ಪದ ಕಾರಣಕ್ಕೆ ಪ್ರೇಮಿಗಳು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

ಪ್ರೇಮಿಗಳಿಬ್ಬರು ಅ.10ರಂದು ಅತ್ತಾವರ ರೈಲ್ವೆಸ್ಟೇಷನ್ ಸಮೀಪದ ಡಿಲಕ್ಸ್ ಲಾಡ್ಜ್ ನಲ್ಲಿ ರೂಮ್ ಮಾಡಿದ್ದರು. ಬಳಿಕ ಮನೆಯವರು ತಮ್ಮ ಮದುವೆ ಮಾಡಿಕೊಡಲು ನಿರಾಕರಿಸುತ್ತಾರೆಂದು ನಿರ್ಧರಿಸಿ, ಜ್ಯೂಸ್ ನಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ತಿಳಿದ ಲಾಡ್ಜ್ ಸಿಬ್ಬಂದಿ ಕೂಡಲೇ ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ಶಿಫ್ಟ್:ಘಟನೆಯಿಂದ ಶಾಕ್‌ಗೊಳಗಾದ ವಿಷ್ಣುವಿನ ತಂದೆ ಕೂಡಲೇ ನಗರಕ್ಕೆ ಧಾವಿಸಿ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅ.13ನೇ ತಾರೀಕು ಬೆಳಗ್ಗಿನ ಜಾವ 1 ಗಂಟೆಗೆ ವಿಷ್ಣು ಮೃತಪಟ್ಟರೆ, ಮಧ್ಯಾಹ್ನ 3.15ಕ್ಕೆ ಯುವತಿ ಮೃತಪಟ್ಟಿದ್ದಾಳೆ. ನಗರದ ಆಸ್ಪತ್ರೆಯಲ್ಲಿ ವಿಷ್ಣು ಮೃತದೇಹದ ಶವಮಹಜರು ನಡೆಸಿ ಕುಟುಂಬಕ್ಕೆ ಹಸ್ತಾಾಂತರಿಸಲಾಗಿದ್ದು, ಗ್ರೀಷ್ಮ ಮೃತದೇಹ ಸೋಮವಾರ ಮಹಜರು ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಂಗಪಟ್ಟಣ ಡಿವೈಎಸ್ಪಿ ಆತ್ಮಹತ್ಯೆ ಯತ್ನ

ಲಾರಿ ಡಿಕ್ಕಿ ಮಹಿಳೆ ಸಾವು:
ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತಳನ್ನು ತಾಲೂಕಿನ ಕಾಡ್ಲೂರು ಗ್ರಾಮದ ಸುಧಾ ಗೋಪಿನಾಥ(33)ಎಂದು ಗುರುತಿಸಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಬ್ಬಿಕೊಂಡು ಕೆರೆಗೆ ಹಾರಿದ್ರು-ಮದುವೆ ವಿರೋಧಿಸಿದಕ್ಕೆ ಪ್ರೇಮಿಗಳ ಆತ್ಮಹತ್ಯೆ

ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆ:
ಕೋಲಾರ: ಇಲ್ಲಿನ ಕೆಜಿಎಫ್ ತಾಲೂಕಿನ ನಾಗಶೆಟ್ಟಿಹಳ್ಳಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಶವಪತ್ತೆಯಾಗಿದೆ. ಬೇತಮಂಗಲ ಹೋಬಳಿ ವ್ಯಾಪ್ತಿಯ ಚಿಗುರಾಪುರ ಗ್ರಾಮದ ರಾಜಮ್ಮ (40) ಮೃತ ಮಹಿಳೆ ಎಂದು ಗುರುತಿಲಾಗಿದೆ. ಈಕೆ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು 6 ಗಂಟೆಗೆ ಮನೆಗೆಂದು ಹಿಂದಿರುಗಿದ್ದಾರೆ. ಆದರೆ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಬೇತಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಹೋದರಿಗೆ ಕಿರಕುಳ ನೀಡಿದ ಯುವಕ ಹತ್ಯೆ

ಹಡಲಗೇರಿಯಲ್ಲಿ ವ್ಯಕ್ತಿಯ ಹತ್ಯೆ:
ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಕಲಹ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮ ದೇವಸ್ಥಾನದ ಬಳಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಸಂಗಪ್ಪ ಮೊರ್ಕೆ (50) ಕೊಲೆಯಾದವರು. ಕೊಲೆಗೀಡಾದ ಸಂಗಪ್ಪ ಮೊರ್ಕೆ ಹಾಗೂ ಗ್ರಾಮದ ಗಂಗನಗೌಡ ಗೌಡರ ಕುಟುಂಬದ ಮಧ್ಯೆ ಕಲಹವಿತ್ತು. ಅದೇ ಕಾರಣಕ್ಕೆ ಇಬ್ಬರ ಮಧ್ಯೆ ಹೊಡೆದಾಟ ಆರಂಭವಾಯಿತು. ಆದು ಮಾತಿಗೆ ಮಾತು ಬೆಳೆದಿದ್ದರಿಂದಾಗಿ ಕೊನೆಗೆ ಗೌಡರ ಎಂಬಾತ ಸಂಗಪ್ಪನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ‌ ಮಾಡಿ ಪರಾರಿಯಾಗಿದ್ದಾನೆ. ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ