ಆ್ಯಪ್ನಗರ

ಹೆಂಡತಿ ಕಿರುಕುಳ ಆರೋಪ, ಗಂಡ ಆತ್ಮಹತ್ಯೆ

ಪತ್ನಿಯೊಂದಿಗಿನ ಮನಸ್ತಾಪದಿಂದ ಬೇಸತ್ತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 30 Jan 2019, 9:52 am
ಬೆಂಗಳೂರು: ಪತ್ನಿಯೊಂದಿಗಿನ ಮನಸ್ತಾಪದಿಂದ ಬೇಸತ್ತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web SUICIDE


ಕಾಡುಗೋಡಿ ಹುಣಸೆ ತೋಪಿನಲ್ಲಿ ಘಟನೆ ನಡೆದಿದ್ದು, ಅವಲಹಳ್ಳಿ ನಿವಾಸಿ ದಾಮೋಧರ್‌ (36) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಮೃತನ ಸಹೋದರ ಶಿವಶಂಕರ್‌ ದೂರು ನೀಡಿದ್ದಾರೆ.

ಸಾವಿಗೆ ಮುನ್ನ ನಾಲ್ಕು ಪುಟಗಳ ಡೆತ್‌ನೋಟ್‌ ಬರೆದಿದ್ದು, ತನ್ನ ಅಳಿಯ ಸತೀಶ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ಕಾರಣ ಆತ್ಮಹತ್ಯೆ
ಮಾಡಿಕೊಳ್ಳುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಇದರ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆನ್ನಾಗನಹಳ್ಳಿಯಲ್ಲಿರುವ ಡವಲಪರ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದಾಮೋಧರ್‌, ವೀಣಾ ಎಂಬುವರನ್ನು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ, 2 ವರ್ಷಗಳಿಂದ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಕುಟುಂಬ ಸದಸ್ಯರು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಮನೆಯರು ಸೇರಿಕೊಂಡು ಹಲವಾರು ಬಾರಿ ಸಮಸ್ಯೆ ಪರಿಹರಿಸಲು ನೋಡಿದ್ದರು. ಆದರೆ, ಮನಸ್ತಾಪ ಬಗೆಹರಿದಿರಲಿಲ್ಲ.

''ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಸತೀಶನನ್ನು ಬಂಧಿಸಲಾಗಿದೆ. ವೀಣಾಗಾಗಿ ಶೋಧ ನಡೆದಿದೆ. ದಾಮೋಧರ್‌, ಮದ್ಯವ್ಯಸನಿಯಾಗಿದ್ದು, ಮನೆಯಲ್ಲಿ ಜಗಳ ಮಾಡುತ್ತಿದ್ದ. ಅಲ್ಲದೆ, ಪತ್ನಿಯೇ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸುತ್ತಿದ್ದ ಎಂದು ಅವರು ಭಾವಿಸಿದ್ದರು,'' ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ