ಆ್ಯಪ್ನಗರ

ಮಕ್ಕಳ ಕಳ್ಳನೆಂದು ತಪ್ಪು ತಿಳಿದು ಹಲ್ಲೆ

ಗಾಂಜಾ ವ್ಯಸನಿಯೊಬ್ಬನನ್ನು ಮಕ್ಕಳ ಕಳ್ಳ ಎಂದು ತಪ್ಪಾಗಿ ಗ್ರಹಿಸಿ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 2 Jul 2018, 5:00 am
ಬೆಂಗಳೂರು: ಗಾಂಜಾ ವ್ಯಸನಿಯೊಬ್ಬನನ್ನು ಮಕ್ಕಳ ಕಳ್ಳ ಎಂದು ತಪ್ಪಾಗಿ ಗ್ರಹಿಸಿ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web misunderstood ganja addict thrashed
ಮಕ್ಕಳ ಕಳ್ಳನೆಂದು ತಪ್ಪು ತಿಳಿದು ಹಲ್ಲೆ


ಅಸ್ಸಾಂ ಮೂಲದ ಚಂದ್ರ ಪ್ರಸಾದ್‌ (45) ಹಲ್ಲೆಗೊಳಗಾದವರು. ಕೆಲಸ ಹುಡುಕಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಬಂದಿರುವ ಚಂದ್ರಪ್ರಸಾದ್‌ ಕೈಕೊಂಡನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೊದಲಿಗೆ ತಳ್ಳುಗಾಡಿಯಲ್ಲಿ ಮನೆ ಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಚಂದ್ರ ಪ್ರಸಾದ್‌, ಬಳಿಕ ಅಪಾರ್ಟ್‌ಮೆಂಟ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ಮಧ್ಯೆ ಹಣದಾಸೆ ಬಿದ್ದ ಚಂದ್ರಪ್ರಸಾದ್‌ ಗಾಂಜಾ ಮಾರಾಟಕ್ಕೆ ಇಳಿದಿದ್ದ. ನೆರೆ ರಾಜ್ಯಗಳಿಂದ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದದ್ದಲ್ಲದೆ, ತಾನೂ ಗಾಂಜಾ ವ್ಯಸನಿಯಾಗಿದ್ದ.

ಶನಿವಾರ ಸಂಜೆ ಚಂದ್ರಪ್ರಸಾದ್‌, ಎಚ್‌ಎಎಲ್‌ನ ದೊಡ್ಡನೆಕ್ಕುಂದಿ ಸರಕಾರಿ ಶಾಲೆಯ ಬಳಿ ಗಾಂಜಾ ಸೇದಿ ಓಡಾಡುತ್ತಿದ್ದ. ಮತ್ತಿನಲ್ಲಿದ್ದ ಆತನನ್ನು ನೋಡಿದ ಸಾರ್ವಜನಿಕರು ಮಕ್ಕಳ ಕಳ್ಳನೆಂದು ಭಾವಿಸಿ ಹಿಡಿದು ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ನಂತರ ಆರೋಪಿ ಮಕ್ಕಳ ಕಳ್ಳ ಅಲ್ಲ ಎನ್ನುವುದು ಖಚಿತವಾಗಿದೆ. ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಬೇಕು. ಹಲ್ಲೆ ನಡೆಸಲು ಮುಂದಾಗಬಾರದು. ಜೀವಕ್ಕೆ ತೊಂದರೆ ಆದರೆ ಥಳಿಸಿದವರೇ ಕೊಲೆ ಪ್ರಕರಣದಲ್ಲಿ ಜೈಲು ಸೇರಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ