ಆ್ಯಪ್ನಗರ

ಮದುವೆಯಾಗುವುದಾಗಿ ನಂಬಿಸಿ ಗೆಳೆಯ ಮತ್ತು ಸ್ನೇಹಿತನಿಂದ ಪ್ರಜ್ಞೆ ತಪ್ಪಿಸಿ ಮಾಡೆಲಿಂಗ್‌ ಯುವತಿಯ ರೇಪ್!

ಆರಂಭದಲ್ಲಿ ನನ್ನನ್ನು ಪ್ರೀತಿಸುತ್ತಿದ್ದ ಪ್ರಮೋದ್‌, ಅತ್ಯಾಚಾರ ನಡೆಸಿದ ಬಳಿಕ ನನ್ನನ್ನು ತಿರಸ್ಕರಿಸಲು ಆರಂಭಿಸಿದ. ನೀನು ಮಾಡೆಲಿಂಗ್‌ ಕ್ಷೇತ್ರದಲ್ಲಿರುವ ಕಾರಣ ನಿನ್ನನ್ನು ಮದುವೆ ಆಗುವುದಿಲ್ಲ ಎಂದು ತಿರಸ್ಕರಿಸಿ ಹಲ್ಲೆ ಮಾಡಿದ್ದಾನೆ. ಅದಕ್ಕೆ ಧನಂಜಯ ಕುಮ್ಮಕ್ಕು ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Vijaya Karnataka Web 11 Apr 2021, 7:19 am
ಬೆಂಗಳೂರು: ಪ್ರಜ್ಞೆ ತಪ್ಪಿಸುವ ಔಷಧಿ ಹಾಕಿದ್ದ ಜ್ಯೂಸ್‌ ಕುಡಿಸಿ ಗೆಳೆಯ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಯಶವಂತಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
Vijaya Karnataka Web police arrest


ಪ್ರಮೋದ್‌ ಎಂಬಾತ ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ನನಗೆ ಪರಿಚಯವಾಗಿದ್ದ. ಏ.15ರಂದು ಪ್ರೀತಿಸುತ್ತಿದ್ದೇನೆ ಎಂದು ಪ್ರೇಮ ನಿವೇದನೆ ಮಾಡಿದ್ದ. ಅದಕ್ಕೆ ನಾನು ಒಪ್ಪಿದ್ದೆ. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು. ಒಂದು ಬಾರಿ ಮಾತನಾಡಬೇಕು ಎಂದು ಹೇಳಿ ಯಶವಂತಪುರದಲ್ಲಿರುವ ಲಾಡ್ಜ್‌ವೊಂದಕ್ಕೆ ನನ್ನನ್ನು ಕರೆಸಿ ಜ್ಯೂಸ್‌ ಕೊಟ್ಟಿದ್ದ. ಪ್ರಜ್ಞೆ ತಪ್ಪಿದ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಕೃತ್ಯದ ಫೋಟೊ ಮತ್ತು ವಿಡಿಯೊ ಮಾಡಿಕೊಂಡು, ಬೆದರಿಸಿ ಮತ್ತೆ ಮತ್ತೆ ಕರೆದು ಹತ್ತಕ್ಕೂ ಹೆಚ್ಚು ಬಾರಿ ಅತ್ಯಾಚಾರ ಎಸಗಿದ್ದಾನೆ. ಪ್ರಮೋದ್‌ ಸ್ನೇಹಿತ ಧನಂಜಯ ಎಂಬಾತ ಕೂಡ ಅತ್ಯಾಚಾರ ಎಸಗಿದ್ದಾನೆಂದು ಯುವತಿ ಆರೋಪಿಸಿದ್ದಾರೆ.
ಕೊಳ್ಳೇಗಾಲ: ಯುಗಾದಿಗೆ ಹೊಸ ಬಟ್ಟೆ ಕೊಡಿಸಿಲ್ಲವೆಂದು 12 ವರ್ಷದ ಬಾಲಕಿ ಆತ್ಮಹತ್ಯೆ!
ಆರಂಭದಲ್ಲಿ ನನ್ನನ್ನು ಪ್ರೀತಿಸುತ್ತಿದ್ದ ಪ್ರಮೋದ್‌, ನಂತರ ತಿರಸ್ಕರಿಸಲು ಆರಂಭಿಸಿದ. ನೀನು ಮಾಡೆಲಿಂಗ್‌ ಕ್ಷೇತ್ರದಲ್ಲಿರುವ ಕಾರಣ ನಿನ್ನನ್ನು ಮದುವೆ ಆಗುವುದಿಲ್ಲ ಎಂದು ತಿರಸ್ಕರಿಸಿ ಹಲ್ಲೆ ಮಾಡಿದ್ದಾನೆ. ಅದಕ್ಕೆ ಧನಂಜಯ ಕುಮ್ಮಕ್ಕು ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ