ವಿಕ ಸುದ್ದಿಲೋಕ ಬೆಂಗಳೂರು
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಮಹಿಳೆಯೊಬ್ಬರು ಸ್ನೇಹಿತೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಹನುಮಂತನಗರದ ಶ್ರೀನಿವಾಸ ನಗರದಲ್ಲಿ ನಡೆದಿದೆ.
ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಶುಭ ಗೌಡ (30) ಗಾಯಗೊಂಡವರು. ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅವಲಹಳ್ಳಿ ನಿವಾಸಿ ಆಶಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಹನುಮಂತನಗರ ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಮೂಲದ ಶುಭ , ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಶ್ರೀನಿವಾಸ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಾರ್ಮೆಂಟ್ಸ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆಶಾ, ಶುಭಾಗೆ ಪರಿಚಯವಾಗಿದ್ದಳು. ಸ್ನೇಹಿತರಾದ ಕಾರಣ ಆಶಾ, ಆಗಾಗ ಶುಭ ಮನೆಗೆ ಬಂದು ಹೋಗುತ್ತಿದ್ದಳು.
ತನಗೆ ಹಣಕಾಸಿನ ಅಗತ್ಯವಿದ್ದು, 10 ಸಾವಿರ ರೂ. ನೀಡುವಂತೆ ಆಶಾ, ಶುಭಾಗೆ ಕೇಳಿದ್ದಳು. ಆದರೆ, ತನ್ನ ಬಳಿ ಹಣ ಇಲ್ಲವೆಂದು ಆಕೆ ತಿಳಿಸಿದ ಕಾರಣ ಆಶಾ ಕುಪಿತಗೊಂಡಿದ್ದಳು. ಈ ವಿಚಾರವಾಗಿ ಜಗಳವಾಗಿದ್ದು, ಬಾಟಲಿಯಲ್ಲಿ ಪೆಟ್ರೋಲ್ ತಂದಿದ್ದ ಆಶಾ, ಜ.5ರಂದು ಮಧ್ಯಾಹ್ನ 3.30ರ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಶುಭಾ ಮೇಲೆ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಳು. ಕೂಗಾಡುತ್ತಿದ್ದ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಮುಖ ಸೇರಿದಂತೆ ದೇಹದ ವಿವಿಧೆಡೆ ಸುಟ್ಟ ಗಾಯಗಳಾಗಿವೆ. ಆರಂಭದಲ್ಲಿ ಆ್ಯಸಿಡ್ ಎಂದು ಹೇಳಲಾಗಿತ್ತು. ನಂತರ ಅದು ಪೆಟ್ರೋಲ್ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಂತ್ರಸ್ತೆಯ ಪರಿಚಯಸ್ಥ ಶಶಿಕುಮಾರ್ ಎಂಬುವರು ನೀಡಿದ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಆಶಾಳನ್ನು ಬಂಧಿಸಿದ್ದಾರೆ.
''ಪತಿಯಿಂದ ದೂರವಾಗಿರುವ ಆಶಾ, ಸುಲಭವಾಗಿ ಹಣ ಸಂಪಾದಿಸಬಹುದೆಂದು ಪರಿಚಿತೆ ಶುಭಾಳನ್ನು ವೇಶ್ಯಾವಾಟಿಕೆಗೆ ನೂಕಲು ಯತ್ನಿಸಿದ್ದಳು. ಅದಕ್ಕೆ ಅವರು ಒಪ್ಪದ ಕಾರಣ ಹಣದ ವಿಷಯದಲ್ಲಿ ಜಗಳ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಮಹಿಳೆಯೊಬ್ಬರು ಸ್ನೇಹಿತೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಹನುಮಂತನಗರದ ಶ್ರೀನಿವಾಸ ನಗರದಲ್ಲಿ ನಡೆದಿದೆ.
ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಶುಭ ಗೌಡ (30) ಗಾಯಗೊಂಡವರು. ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅವಲಹಳ್ಳಿ ನಿವಾಸಿ ಆಶಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಹನುಮಂತನಗರ ಪೊಲೀಸರು ತಿಳಿಸಿದ್ದಾರೆ.
ಮಂಡ್ಯ ಮೂಲದ ಶುಭ , ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಶ್ರೀನಿವಾಸ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಾರ್ಮೆಂಟ್ಸ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆಶಾ, ಶುಭಾಗೆ ಪರಿಚಯವಾಗಿದ್ದಳು. ಸ್ನೇಹಿತರಾದ ಕಾರಣ ಆಶಾ, ಆಗಾಗ ಶುಭ ಮನೆಗೆ ಬಂದು ಹೋಗುತ್ತಿದ್ದಳು.
ತನಗೆ ಹಣಕಾಸಿನ ಅಗತ್ಯವಿದ್ದು, 10 ಸಾವಿರ ರೂ. ನೀಡುವಂತೆ ಆಶಾ, ಶುಭಾಗೆ ಕೇಳಿದ್ದಳು. ಆದರೆ, ತನ್ನ ಬಳಿ ಹಣ ಇಲ್ಲವೆಂದು ಆಕೆ ತಿಳಿಸಿದ ಕಾರಣ ಆಶಾ ಕುಪಿತಗೊಂಡಿದ್ದಳು. ಈ ವಿಚಾರವಾಗಿ ಜಗಳವಾಗಿದ್ದು, ಬಾಟಲಿಯಲ್ಲಿ ಪೆಟ್ರೋಲ್ ತಂದಿದ್ದ ಆಶಾ, ಜ.5ರಂದು ಮಧ್ಯಾಹ್ನ 3.30ರ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಶುಭಾ ಮೇಲೆ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಳು. ಕೂಗಾಡುತ್ತಿದ್ದ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಮುಖ ಸೇರಿದಂತೆ ದೇಹದ ವಿವಿಧೆಡೆ ಸುಟ್ಟ ಗಾಯಗಳಾಗಿವೆ. ಆರಂಭದಲ್ಲಿ ಆ್ಯಸಿಡ್ ಎಂದು ಹೇಳಲಾಗಿತ್ತು. ನಂತರ ಅದು ಪೆಟ್ರೋಲ್ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಂತ್ರಸ್ತೆಯ ಪರಿಚಯಸ್ಥ ಶಶಿಕುಮಾರ್ ಎಂಬುವರು ನೀಡಿದ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಆಶಾಳನ್ನು ಬಂಧಿಸಿದ್ದಾರೆ.
''ಪತಿಯಿಂದ ದೂರವಾಗಿರುವ ಆಶಾ, ಸುಲಭವಾಗಿ ಹಣ ಸಂಪಾದಿಸಬಹುದೆಂದು ಪರಿಚಿತೆ ಶುಭಾಳನ್ನು ವೇಶ್ಯಾವಾಟಿಕೆಗೆ ನೂಕಲು ಯತ್ನಿಸಿದ್ದಳು. ಅದಕ್ಕೆ ಅವರು ಒಪ್ಪದ ಕಾರಣ ಹಣದ ವಿಷಯದಲ್ಲಿ ಜಗಳ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.