ಆ್ಯಪ್ನಗರ

ಕನ್ನಯ್ಯಲಾಲ್‌ ಹತ್ಯೆ ಯತ್ನ: ಇನ್ನಿಬ್ಬರ ಬಂಧನ

ಕನ್ನಯ್ಯಲಾಲ್‌ ಆ್ಯಂಡ್‌ ಕೋ ಕಂಪನಿ ಮಾಲೀಕ ಕನ್ನಯ್ಯಲಾಲ್‌ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದ ಮತ್ತಿಬ್ಬರು ಬಿಹಾರ ಮೂಲದ ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಭೂತಿಕುಮಾರ್‌ ಸಿಂಗ್‌ (58) ಮತ್ತು ಸುಜುಕಿ ಸಿಂಗ್‌ (28) ಬಂಧಿತ ಆರೋಪಿಗಳು. ಕೃತ್ಯದಲ್ಲಿ ಭಾಗಿಯಾಗಿದ್ದ ಸೂರಜ್‌ ಸಿಂಗ್‌ ಸೇರಿ ಇಬ್ಬರನ್ನು ಈ ಮೊದಲೇ ಬಂಧಿಸಿದ್ದ ಪೊಲೀಸರು ತಲೆಮರೆಸಿಕೊಂಡಿರುವರಿಗೆ ತೀವ್ರ ಶೋಧ ನಡೆಸಿದ್ದರು. ಬಿಹಾರದಲ್ಲೇ ತಲೆಮರೆಸಿಕೊಂಡಿದ್ದ ಇಬ್ಬರನ್ನು ಇದೀಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Vijaya Karnataka 17 Jul 2018, 5:00 am
ಬೆಂಗಳೂರು: ಕನ್ನಯ್ಯಲಾಲ್‌ ಆ್ಯಂಡ್‌ ಕೋ ಕಂಪನಿ ಮಾಲೀಕ ಕನ್ನಯ್ಯಲಾಲ್‌ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದ ಮತ್ತಿಬ್ಬರು ಬಿಹಾರ ಮೂಲದ ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಭೂತಿಕುಮಾರ್‌ ಸಿಂಗ್‌ (58) ಮತ್ತು ಸುಜುಕಿ ಸಿಂಗ್‌ (28) ಬಂಧಿತ ಆರೋಪಿಗಳು. ಕೃತ್ಯದಲ್ಲಿ ಭಾಗಿಯಾಗಿದ್ದ ಸೂರಜ್‌ ಸಿಂಗ್‌ ಸೇರಿ ಇಬ್ಬರನ್ನು ಈ ಮೊದಲೇ ಬಂಧಿಸಿದ್ದ ಪೊಲೀಸರು ತಲೆಮರೆಸಿಕೊಂಡಿರುವರಿಗೆ ತೀವ್ರ ಶೋಧ ನಡೆಸಿದ್ದರು. ಬಿಹಾರದಲ್ಲೇ ತಲೆಮರೆಸಿಕೊಂಡಿದ್ದ ಇಬ್ಬರನ್ನು ಇದೀಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Vijaya Karnataka Web kill


ಜೂ.2ರಂದು ಕೋರಮಂಗಲದ ರಹೇಜಾ ಆರ್ಕೆಡ್‌ನ ಕಚೇರಿಯಲ್ಲಿ ಮೀಟಿಂಗ್‌ ನಡೆಸುತ್ತಿದ್ದ ಕನ್ನಯ್ಯಲಾಲ್‌ ಅವರ ಮೇಲೆ ಹಾಡ ಹಗಲೇ ಶೂಟೌಟ್‌ ನಡೆದಿತ್ತು. ಹೆಲ್ಮೆಟ್‌ ಧರಿಸಿದ್ದ ಇಬ್ಬರು ಏಕಾ ಏಕಿ ಕಚೇರಿಯೊಳಗೆ ನುಗ್ಗಿ ಕನ್ನಯ್ಯಲಾಲ್‌ ಅವರ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದರು. ಅದರಲ್ಲಿ ಎರಡು ಗುಂಡು ಮಾತ್ರ ತಗುಲಿದ್ದು, ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಮೇಲೆ ಶೂಟೌಟ್‌ ನಡೆಯುವಾಗ ಮತ್ತಿಬ್ಬರು ಹೆಲ್ಮೆಟ್‌ ಧರಿಸಿ ಕಚೇರಿಯ ಕೆಳಭಾಗದಲ್ಲಿ ನಿಂತಿದ್ದರು ಎನ್ನುವ ಸಂಗತಿ ಕೂಡ ಸ್ಥಳೀಯರಿಂದ ಪೊಲೀಸರಿಗೆ ಸಿಕ್ಕಿತ್ತು. ಆ ನಂತರ ಘಟನಾ ಸ್ಥಳದ ಸುತ್ತ ಮುತ್ತ ಇರುವ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಹರೆಯ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಚಹರೆ ಆಧಾರದಲ್ಲಿ ಆರೋಪಿಗಳು ಉತ್ತರ ಭಾರತದ ಬಿಹಾರ ಮೂಲದವರು ಇರಬಹುದು ಎನ್ನುವ ಅನುಮಾನ ಪೊಲೀಸರಿಗೆ ಬಂದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

30 ಲಕ್ಷ ಸುಪಾರಿ: ಕನ್ನಯ್ಯಲಾಲ್‌ ಉತ್ತರ ಭಾರತದ ರಾಜ್ಯಗಳಲ್ಲಿ ಜೋಳ ಮತ್ತು ಪಾಪ್‌ಕಾರ್ನ್‌ ವ್ಯವಹಾರ ನಡೆಸುತ್ತಿದ್ದಾರೆ. ಬಿಹಾರದಲ್ಲಿ ಇವರ ಜತೆಗೆ ರಾಜೇಂದ್ರ ಅಗರವಾಲ್‌ ಎನ್ನುವ ಮತ್ತೊಬ್ಬ ಉದ್ಯಮಿ ಕೆಲ ಕಾಲ ಪಾಲುದಾರನಾಗಿದ್ದ. ಈಗ್ಗೆ ಕೆಲ ತಿಂಗಳುಗಳ ಹಿಂದೆ ಇಬ್ಬರಿಗೂ ವ್ಯಾವಹಾರಿಕ ಸಂಬಂಧ ಮುರಿದು ಬಿದ್ದಿತ್ತು. ಮೇ ಕೊನೆವಾರದಲ್ಲಿ ಬೆಂಗಳೂರಿಗೆ ಬಂದಿದ್ದ ರಾಜೇಂದ್ರ ಅಗರವಾಲ್‌ ಬಿಹಾರದಲ್ಲಿನ ಪಾಪ್‌ಕಾರ್ನ್‌ ವ್ಯವಹಾರವನ್ನು ತನಗೆ ಬಿಟ್ಟುಕೊಡುವಂತೆ ಕನ್ನಯ್ಯಲಾಲ್‌ ಜತೆ ಮಾತುಕತೆ ನಡೆಸಿದ್ದ. ಈ ಮಾತುಕತೆ ಫಲಪ್ರದವಾಗದ ಕಾರಣ ಎಚ್ಚರಿಕೆ ನೀಡಿ ಆತ ಬಿಹಾರಕ್ಕೆ ವಾಪಸ್ಸಾಗಿದ್ದ. ಜೂ. 2 ರಂದು ಬಂದಿದ್ದ ಶೂಟರ್‌ಗಳು ಗುಂಡು ಹಾರಿಸಿದ್ದರು. ಬಂಧಿತ ಆರೋಪಿಗಳಿಬ್ಬರೂ ತಾವು 30 ಲಕ್ಷ ರೂ.ಗೆ ಸುಪಾರಿ ಪಡೆದು ಕೊಲೆಗೆ ಯತ್ನಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಸದ್ಯ ರಾಜೇಂದ್ರ ಅಗರವಾಲ್‌ ದಿಲ್ಲಿಯಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ