ಆ್ಯಪ್ನಗರ

ವೃದ್ಧ ದಂಪತಿ ಹತ್ಯೆ

ಮಂಡ್ಯ ಜಿಲ್ಲೆಕೆ.ಆರ್‌.ಪೇಟೆ ತಾಲೂಕು ಮೂಲದ ಚಂದ್ರೇಗೌಡ(63) ಹಾಗೂ ಲಕ್ಷ್ಮಮ್ಮ(55) ಕೊಲೆಯಾದವರು. ಖಾಸಗಿ ಸಂಸ್ಥೆಯಲ್ಲಿಉದ್ಯೋಗ ಮಾಡಿ, ನಿವೃತ್ತರಾಗಿದ್ದ ಚಂದ್ರೇಗೌಡ ಸ್ವಂತ ಮನೆ ಕಟ್ಟಿಕೊಂಡಿದ್ದರು. ಕೆಳಮಹಡಿಯಲ್ಲಿವಾಸವಿದ್ದು, ಮಹಡಿ ಮೇಲಿನ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿದಂಪತಿ ಸೀರೆ ವ್ಯಾಪಾರ ಆರಂಭಿಸಿದ್ದರು.

Vijaya Karnataka 18 Oct 2019, 5:00 am
ಕೃಷ್ಣರಾಜಪುರ: ಮನೆಯೊಳಗೆ ನುಗ್ಗಿ ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹದೇವಪುರ ಠಾಣೆ ವ್ಯಾಪ್ತಿಯ ಗರುಡಾಚಾರ್‌ ಪಾಳ್ಯದಲ್ಲಿನಡೆದಿದೆ.
Vijaya Karnataka Web murder of an elderly couple
ವೃದ್ಧ ದಂಪತಿ ಹತ್ಯೆ


ಮಂಡ್ಯ ಜಿಲ್ಲೆಕೆ.ಆರ್‌.ಪೇಟೆ ತಾಲೂಕು ಮೂಲದ ಚಂದ್ರೇಗೌಡ(63) ಹಾಗೂ ಲಕ್ಷ್ಮಮ್ಮ(55) ಕೊಲೆಯಾದವರು. ಖಾಸಗಿ ಸಂಸ್ಥೆಯಲ್ಲಿಉದ್ಯೋಗ ಮಾಡಿ, ನಿವೃತ್ತರಾಗಿದ್ದ ಚಂದ್ರೇಗೌಡ ಸ್ವಂತ ಮನೆ ಕಟ್ಟಿಕೊಂಡಿದ್ದರು. ಕೆಳಮಹಡಿಯಲ್ಲಿವಾಸವಿದ್ದು, ಮಹಡಿ ಮೇಲಿನ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿದಂಪತಿ ಸೀರೆ ವ್ಯಾಪಾರ ಆರಂಭಿಸಿದ್ದರು.

ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಪು ತುಂಬಿ ನೀರು ಹರಿದು ಹೋಗುತ್ತಿದ್ದರೂ ಗಮನಹರಿಸದ ಕಾರಣ ಅನುಮಾನಗೊಂಡ ಬಾಡಿಗೆ ಮನೆಯವರು ಕಿಟಕಿಯಿಂದ ನೋಡಿದಾಗ ಮನೆಯೊಳಗೆ ರಕ್ತ ಕಾಣಿಸಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿದಂಪತಿಯ ಮೃತದೇಹ ಪತ್ತೆಯಾಗಿದೆ.

''ಬುಧವಾರ ರಾತ್ರಿ ದಂಪತಿ ಮನೆಗೆ ನೆಂಟರು ಬಂದಿದ್ದರು. ಇದೇ ನೆಂಟರು ದಸರಾ ಹಬ್ಬದ ಸಂದರ್ಭದಲ್ಲೂಮನೆಗೆ ಬಂದು ದಂಪತಿಗೆ ಸ್ವೀಟ್ಸ್‌ ಕೊಟ್ಟು ಹೋಗಿದ್ದರು'' ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚಂದ್ರೇಗೌಡ ಮತ್ತು ಲಕ್ಷ್ಮಮ್ಮ ದಂಪತಿಗೆ ಮಕ್ಕಳಿರಲ್ಲ. ಹೆಣ್ಣುಮಗುವೊಂದನ್ನು ದತ್ತು ಪಡೆದು ಸಲಹಿ ಮದುವೆ ಮಾಡಿಕೊಟ್ಟಿದ್ದರು. ಚಂದ್ರೇಗೌಡ ಅವರ ಹೆಸರಿನಲ್ಲಿಹುಟ್ಟೂರಲ್ಲಿಆಸ್ತಿಪಾಸ್ತಿಯಿದೆ. ಗರುಡಾಚಾರ್‌ ಪಾಳ್ಯದ ನಾಗಪ್ಪ ಬಡಾವಣೆಯಲ್ಲೂಮನೆ ಬಾಡಿಗೆ ಕೊಟ್ಟಿರುವುದರಿಂದಲೂ ಆದಾಯ ಬರುತ್ತಿತ್ತು. ದಂಪತಿಯ ಆಸ್ತಿ ದತ್ತು ಮಗಳಿಗೆ ಹೋಗುವ ಭಯದಲ್ಲಿಸಂಬಂಧಿಗಳು ಅಥವಾ ಪರಿಚಿತರು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ದಾಖಲೆಗಾಗಿ ಹುಡುಕಾಟ

''ರಿಶೀಲನೆ ವೇಳೆ ಕೊಲೆ ನಡೆದಿರುವುದು ಹಣಕ್ಕಾಗಿ ಅಲ್ಲಅನ್ನೋದು ಖಚಿತವಾಗಿದೆ. ಕೊಲೆಯಾದವರ ಮೈಮೇಲಿನ ಆಭರಣಗಳನ್ನು ಹಂತಕರು ಕೊಂಡೊಯ್ದಿಲ್ಲ. ಆದರೆ ಮನೆಯೊಳಗಿನ ಬೀರು, ಲಾಕರುಗಳೆಲ್ಲಚೆಲ್ಲಾಪಿಲ್ಲಿಯಾಗಿದ್ದು, ದಾಖಲೆಗಳಿಗಾಗಿ ಹುಡುಕಾಡಿರುವ ಸಾಧ್ಯತೆಯಿದೆ,'' ು ನಗರ ಪೋಲಿಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದರು.

ಹಂತಕರ ಪತ್ತೆ ಮೂರು ತಂಡ

''ಘಟನಾ ಸ್ಥಳದಲ್ಲಿಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ತಜ್ಞರ ತಂಡದಿಂದಲೂ ತನಿಖೆ ನಡೆಸಲಾಗುತ್ತಿದೆ. ಹಂತಕರ ಪತ್ತೆಗಾಗಿ ಮೂರು ಪೊಲೀಸ್‌ ತಂಡಗಳ ರಚನೆ ಮಾಡಲಾಗಿದೆ,'' ಎಂದು ವೈಟ್‌ ಫೀಲ್ಡ್‌ ವಿಭಾಗದ ಡಿಸಿಪಿ ಎಂ ಎನ್‌ ಅನುಚೇತ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ