ವಿಕ ಸುದ್ದಿಲೋಕ ಬೆಂಗಳೂರು
ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಮೋಹನ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ನಂದಿನಿ ಲೇಔಟ್ ವಿಜಯಾನಂದನಗರದ ಮೋಹನ್, ಪತ್ನಿ ಸುನಿತಾ ಎಂಬುವರನ್ನು ಕೊಲೆ ಮಾಡಿದ್ದ. 2013 ಮೇ 3ರಂದು ಮನೆಯಲ್ಲಿ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ಅಕ್ರಮ ಸಂಬಂಧವಿದೆ ಎಂದು ಸುನಿತಾ ಜೊತೆ ಜಗಳ ಮಾಡಿದ ಮೋಹನ್, ಕತ್ತು ಹಿಸುಕಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆದು ಆರೋಪ ಸಾಬೀತಾಗಿ ಮೋಹನ್ಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಕೆ.ಬಿ ಗೀತಾ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾಗಿ ಕೆ.ಎಸ್. ರೇವಣ್ಣ ಸಿದ್ದಪ್ಪ ವಾದ ಮಂಡಿಸಿದ್ದಾರೆ.
ಕೊಲೆಗೆ ಯತ್ನಿಸಿದವನಿಗೆ ಐದು ವರ್ಷ ಜೈಲು
ಮದುವೆಯಾಗುವಂತೆ ಪೀಡಿಸಿ ಯುವತಿಯ ಕೊಲೆಗೆ ಯತ್ನಿಸಿದ ಸ್ವಾಮಿ ನಾಯಕ್ ಎಂಬಾತನಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
2013ರ ಏ.8ರಂದು ಮತ್ತಿಕೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯೊಬ್ಬರಿಗೆ ಸ್ವಾಮಿ ನಾಯಕ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಶವಂತಪುರ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಹತ್ತನೇ ತರಗತಿ ಓದುತ್ತಿದ್ದ ಯುವತಿಯನ್ನು ಅಪಹರಿಸಿದ್ದ ಸ್ವಾಮಿ ನಾಯಕ್ ವಿರುದ್ಧ ಯುವತಿಯ ಪಾಲಕರು ಠಾಣೆಗೆ ದೂರು ನೀಡಿದ್ದರು. ಸ್ವಾಮಿ ನಾಯಕ್ನನ್ನು ಬಂಧಿಸಿದ್ದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಿಡುಗಡೆಯಾಗಿ ಬಂದ ಆತ ಕೆಲ ವರ್ಷಗಳ ಬಳಿಕ ಮತ್ತೆ ಆಕೆಯ ಬೆನ್ನು ಬಿದ್ದಿದ್ದ. ಅದಕ್ಕೆ ಯುವತಿ ಒಪ್ಪದೇ ಇದ್ದಾಗ ಆಕೆಗೆ ಚಾಕುವಿನಿಂದ ಇರಿದು ತಾನೂ ವಿಷ ಸೇವಿಸಿದ್ದ.
ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕೆ.ನಾರಾಯಣ ಪ್ರಸಾದ್ ಅವರು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಮೋಹನ್ ಕುಮಾರ್ ವಾದ ಮಂಡಿಸಿದ್ದಾರೆ.
ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಮೋಹನ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ನಂದಿನಿ ಲೇಔಟ್ ವಿಜಯಾನಂದನಗರದ ಮೋಹನ್, ಪತ್ನಿ ಸುನಿತಾ ಎಂಬುವರನ್ನು ಕೊಲೆ ಮಾಡಿದ್ದ. 2013 ಮೇ 3ರಂದು ಮನೆಯಲ್ಲಿ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ಅಕ್ರಮ ಸಂಬಂಧವಿದೆ ಎಂದು ಸುನಿತಾ ಜೊತೆ ಜಗಳ ಮಾಡಿದ ಮೋಹನ್, ಕತ್ತು ಹಿಸುಕಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆದು ಆರೋಪ ಸಾಬೀತಾಗಿ ಮೋಹನ್ಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಕೆ.ಬಿ ಗೀತಾ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾಗಿ ಕೆ.ಎಸ್. ರೇವಣ್ಣ ಸಿದ್ದಪ್ಪ ವಾದ ಮಂಡಿಸಿದ್ದಾರೆ.
ಕೊಲೆಗೆ ಯತ್ನಿಸಿದವನಿಗೆ ಐದು ವರ್ಷ ಜೈಲು
ಮದುವೆಯಾಗುವಂತೆ ಪೀಡಿಸಿ ಯುವತಿಯ ಕೊಲೆಗೆ ಯತ್ನಿಸಿದ ಸ್ವಾಮಿ ನಾಯಕ್ ಎಂಬಾತನಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
2013ರ ಏ.8ರಂದು ಮತ್ತಿಕೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯೊಬ್ಬರಿಗೆ ಸ್ವಾಮಿ ನಾಯಕ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಶವಂತಪುರ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಹತ್ತನೇ ತರಗತಿ ಓದುತ್ತಿದ್ದ ಯುವತಿಯನ್ನು ಅಪಹರಿಸಿದ್ದ ಸ್ವಾಮಿ ನಾಯಕ್ ವಿರುದ್ಧ ಯುವತಿಯ ಪಾಲಕರು ಠಾಣೆಗೆ ದೂರು ನೀಡಿದ್ದರು. ಸ್ವಾಮಿ ನಾಯಕ್ನನ್ನು ಬಂಧಿಸಿದ್ದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಿಡುಗಡೆಯಾಗಿ ಬಂದ ಆತ ಕೆಲ ವರ್ಷಗಳ ಬಳಿಕ ಮತ್ತೆ ಆಕೆಯ ಬೆನ್ನು ಬಿದ್ದಿದ್ದ. ಅದಕ್ಕೆ ಯುವತಿ ಒಪ್ಪದೇ ಇದ್ದಾಗ ಆಕೆಗೆ ಚಾಕುವಿನಿಂದ ಇರಿದು ತಾನೂ ವಿಷ ಸೇವಿಸಿದ್ದ.
ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕೆ.ನಾರಾಯಣ ಪ್ರಸಾದ್ ಅವರು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಮೋಹನ್ ಕುಮಾರ್ ವಾದ ಮಂಡಿಸಿದ್ದಾರೆ.