ಆ್ಯಪ್ನಗರ

ಇಸ್ಪೀಟ್‌ ಹಣಕ್ಕಾಗಿ ಕೊಲೆ: ಆರು ಮಂದಿ ಬಂಧನ

ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್‌ ಹಣಕ್ಕಾಗಿ ನಡೆದ ಜಗಳದ ವೇಳೆ ಸಂಬಂಧವೇ ಇಲ್ಲದವರನ್ನು ಕೊಲೆ ಮಾಡಿ ಪರಾರಿ ಆಗಿದ್ದ ಆರು ಮಂದಿಯನ್ನು ರಾಜ ರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 12 Apr 2019, 5:00 am
ಬೆಂಗಳೂರು : ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್‌ ಹಣಕ್ಕಾಗಿ ನಡೆದ ಜಗಳದ ವೇಳೆ ಸಂಬಂಧವೇ ಇಲ್ಲದವರನ್ನು ಕೊಲೆ ಮಾಡಿ ಪರಾರಿ ಆಗಿದ್ದ ಆರು ಮಂದಿಯನ್ನು ರಾಜ ರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web murder six arrest
ಇಸ್ಪೀಟ್‌ ಹಣಕ್ಕಾಗಿ ಕೊಲೆ: ಆರು ಮಂದಿ ಬಂಧನ


ಬಂಗಾರಪ್ಪನಗರದ ನಿವಾಸಿಗಳಾದ ಎಸ್‌.ಸಂತೋಷ್‌, ಎನ್‌.ರಾಜು, ಎನ್‌.ಜೀವನ್‌, ಕೆ.ರಾಜು, ಕಿರಣ್‌ಕುಮಾರ್‌, ಜೈ ಕಿರಣ್‌ ಬಂಧಿತ ಆರೋಪಿಗಳು. ಇವರಿಗೆ ಕೊಲೆ ಮಾಡಲು ಕುಮ್ಮಕ್ಕು ನೀಡಿದ್ದ ಗುಡ್ಡೆ ಮಾದ, ಪಾಂಡು , ಹರೀಶ ಮೂವರೂ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗ್ಯಾಂಗ್‌ ಯುಗಾದಿ ಹಬ್ಬದ ದಿನ ರಾತ್ರಿ ಇಸ್ಪೀಟ್‌ ಆಡಲು ಹೋಗಿದ್ದ ರಮೇಶ್‌ ಎನ್ನುವ ಯುವಕನ ಬಳಿಯಿಂದ ಮೂವತ್ತೈದು ಸಾವಿರ ರೂ ಕಿತ್ತುಕೊಂಡು ಹೋಗಿತ್ತು. ಈ ವಿಚಾರವನ್ನು ರಮೇಶ ತನ್ನ ತಂದೆ ರಾಮು ಅವರಿಗೆ ಕರೆ ಮಾಡಿ ತಿಳಿಸಿದ್ದ. ಬಳಿಕ ರಾಮು, ತಮ್ಮ ಸ್ನೇಹಿತ ಕಾರ್ತಿಕ್‌ ಹಾಗೂ ರಮೇಶ್‌ ಜತೆ ಬಂಗಾರಪ್ಪ ನಗರಕ್ಕೆ ತೆರಳಿದ್ದರು. ಆಟೋದಲ್ಲಿ ಬರುತ್ತಿದ್ದ ನಾಲ್ವರನ್ನು ತೋರಿಸಿದ ರಮೇಶ್‌, ಇವರೇ ತನ್ನಿಂದ ಹಣ ಕಿತ್ತುಕೊಂಡವರು ಎಂದು ತಿಳಿಸಿದ್ದ. ಬಳಿಕ ಎಲ್ಲರೂ ಸೇರಿ ಆಟೋವನ್ನು ನಿಲ್ಲಿಸಿದ್ದರು. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಇನ್ನೂ ಐವರು ಆರೋಪಿಗಳು ಆಟೋ ತಡೆದು ನಿಲ್ಲಿಸಿದ್ದ ಮೂವರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ವೇಳೆ ರಮೇಶ್‌ ಅವರ ತಲೆ ಮತ್ತು ಎದೆಗೆ ಗಂಭೀರವಾದ ಒದೆ ಬಿದ್ದಿದ್ದು ತೀವ್ರ ರಕ್ತಸ್ರಾವ ಆಗಿತ್ತು. ನೆಲಕ್ಕೆ ಕುಸಿದು ಬಿದ್ದ ರಮೇಶ್‌ ಅವರನ್ನು ಎತ್ತಿ ಆಟೋಗೆ ಹಾಕಿಕೊಂಡ ಆರೋಪಿಗಳು ಹಲ್ಲೆಯ ವಿಷಯವನ್ನು ಬೇರೆ ಯಾರ ಬಳಿಯಾದರೂ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿ ಸ್ಥಳದಿಂದ ತೆರಳಿದ್ದರು. ಬಳಿಕ ರಾಮು ಮತ್ತು ಸ್ನೇಹಿತ ನಾನಾ ಕಡೆ ಹುಡುಕಾಡಿದರೂ ರಮೇಶ್‌ ಸಿಗಲಿಲ್ಲ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೃಷ್ಣಪ್ಪ ಲೇಔಟ್‌ ನಲ್ಲಿ ಯಾರನ್ನೋ ಕೊಲೆ ಮಾಡಿ ಹಾಕಿರುವುದಾಗಿ ಮಾಹಿತಿ ಸಿಕ್ಕಿತ್ತು. ತಕ್ಷಣ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದಾಗ ಅದು ರಮೇಶ್‌ ಮೃತದೇಹ ಎಂದು ಖಚಿತವಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ