ಆ್ಯಪ್ನಗರ

ಕಾಲೇಜು ಹಾಸ್ಟೆಲ್‌ನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ನಿಗೂಢ ಸಾವು

ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಸೋಫಿಯಾ, ಬುಧವಾರ ಬೆಳಿಗ್ಗೆ ಸಹಪಾಠಿಗಳ ಜತೆ ಮಾತನಾಡಿದ್ದಳು. 'ನೀವು ಕಾಲೇಜಿಗೆ ಹೋಗಿ, ನಾನು ಬರುವುದಿಲ್ಲ' ಎಂದಿದ್ದಳಂತೆ. ಸಂಜೆ ಸಹಪಾಠಿಗಳು ವಾಪಸ್ ಆದಾಗ ಹಾಸ್ಟೇಲ್‌ನಲ್ಲಿರುವ ತನ್ನ ಕೊಣೆಯ ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

Vijaya Karnataka Web 24 Jan 2019, 10:36 am
ಬೆಂಗಳೂರು: ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೊತ್ತನೂರಿನ ಕೆ.ನಾರಾಯಣಪುರ ಬಳಿಕ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ.
Vijaya Karnataka Web death


4ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಂಬೈ ಮೂಲದ ಸೋಫಿಯಾ ದಮನಿ ಮೃತ ವಿದ್ಯಾರ್ಥಿನಿ.

ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಸೋಫಿಯಾ, ಬುಧವಾರ ಬೆಳಿಗ್ಗೆ ಸಹಪಾಠಿಗಳ ಜತೆ ಮಾತನಾಡಿದ್ದಳು. 'ನೀವು ಕಾಲೇಜಿಗೆ ಹೋಗಿ, ನಾನು ಬರುವುದಿಲ್ಲ' ಎಂದಿದ್ದಳಂತೆ. ಸಂಜೆ ಸಹಪಾಠಿಗಳು ವಾಪಸ್ ಆದಾಗ ಹಾಸ್ಟೆಲ್‌ನಲ್ಲಿರುವ ತನ್ನ ಕೊಣೆಯ ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಅಂಬೇಡ್ಕರ್ ಅಸ್ಪತ್ರೆಗೆ ರವಾನಿಸಲಾಗಿದೆ.

ಮುಂಬೈಯಿಂದ ಸೋಫಿಯಾ ಪೋಷಕರು ಆಗಮನಕ್ಕೆ ಪೊಲೀಸರು ಕಾದು ಕುಳಿತಿದ್ದು, ವಿದ್ಯಾರ್ಥಿನಿ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ