ಆ್ಯಪ್ನಗರ

ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆ ಸೇರಿ ಇಬ್ಬರ ಕೊಲೆ

ಬಾಣಸವಾಡಿ ಹಾಗೂ ಚಾಮರಾಜಪೇಟೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಇಬ್ಬರ ಕೊಲೆ ನಡೆದಂತಾಗಿದೆ. ಇದರಲ್ಲಿ ಒಬ್ಬ ನೈಜೀರಿಯಾ ಪ್ರಜೆಯಾಗಿದ್ದಾನೆ.

Vijaya Karnataka Web 10 May 2020, 3:28 pm
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನೈಜೀರಿಯಾ ಪ್ರಜೆ ಸೇರಿ ಇಬ್ಬರ ಕೊಲೆಯಾಗಿದೆ.
Vijaya Karnataka Web bengaluru


ಮಾದಕವಸ್ತು ಪ್ರಕರಣದಲ್ಲಿಈ ಹಿಂದೆ ಪೊಲೀಸರಿಂದ ಬಂಧಿತನಾಗಿದ್ದ ನೈಜೀರಿಯಾ ಪ್ರಜೆಯನ್ನು ಪರಿಚಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕಾಚರಕನಹಳ್ಳಿಯಲ್ಲಿ ವಾಸವಿದ್ದ ಜಾನ್‌ ಸಂಡೆ(30) ಕೊಲೆಯಾದ ವ್ಯಕ್ತಿ. ಆರೋಪಿ ಮನೋಜ್‌ ಎಂಬಾತನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಆರೋಪಿ ಕಾರ್ತಿಕ್‌ ತಲೆಮರೆಸಿಕೊಂಡಿದ್ದಾನೆ.

ಶುಕ್ರವಾರ ತಡರಾತ್ರಿ ಜಾನ್‌ ಸಂಡೆ, ಮನೋಜ್‌ ಹಾಗೂ ಕಾರ್ತಿಕ್‌ ಕಾಚರಕನಹಳ್ಳಿಯಲ್ಲಿಸೇರಿದ್ದರು. ಈ ವೇಳೆ ವೈಯಕ್ತಿಕ ವಿಚಾರಗಳಿಗೆ ಜಗಳವಾಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಮನೋಜ್‌ ಮತ್ತು ಕಾರ್ತಿಕ್‌, ಜಾನ್‌ ಸಂಡೆ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದಿದ್ದಾರೆ. ತೀವ್ರ ಇರಿತದಿಂದ ರಕ್ತ ಸ್ರಾವವಾಗಿ ಜಾನ್‌ಸಂಡೆ ಮೃತಪಟ್ಟಿದ್ದಾನೆ. ಹಲ್ಲೆಯಿಂದ ಗಾಯಗೊಂಡಿದ್ದ ಮನೋಜ್‌ ಕೂಡ ಸ್ಥಳದಲ್ಲೇ ಬಿದ್ದಿದ್ದು, ಕಾರ್ತಿಕ್‌ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಗಾಯಾಳು ಮನೋಜ್‌ನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೃತ ಜಾನ್‌ ಸಂಡೆ ಈ ಹಿಂದೆ ಮಾದಕವಸ್ತು ಮಾರಾಟ ಪ್ರಕರಣದಲ್ಲಿಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿಯ ಪಾಸ್‌ಪೋರ್ಟ್‌, ವೀಸಾ ದಾಖಲೆಗಳನ್ನು ಪರಿಶೀಲಿಸಿ ಕುಟುಂಬ ಸದಸ್ಯರ ಸಂಪರ್ಕಕ್ಕೆ ಯತ್ನಿಸಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ತಿಳಿಸಿದರು.

ಕೊಚ್ಚಿ ಬಂದರಿಗೆ 698 ಭಾರತೀಯರನ್ನು ವಿದೇಶದಿಂದ ಹೊತ್ತು ತಂದ ಜಲಾಶ್ವ..!

ಆಟೋ ಚಾಲಕನ ಕೊಲೆ
ಚಾಮರಾಜಪೇಟೆಯ ಬಂಡೆ ಗುಡಿಸಲು ಪ್ರದೇಶದಲ್ಲಿಆಟೋ ಚಾಲಕ ಅರುಣ್‌ (23) ಎಂಬಾತನನ್ನು ಮೂವರು ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಹೊಸ ಮಸೀದಿಗಾಗಿ ಹಿಂದೂ ಬಾಲಕನ ಬಲಿ: ದೂರು ಕೊಟ್ಟ ಕುಟುಂಬವನ್ನೇ ಬಡಿದ ಪೊಲೀಸರು!

ಬೇಗೂರಿನಲ್ಲಿ ವಾಸವಿದ್ದ ಅರುಣ್‌, ಶುಕ್ರವಾರ ರಾತ್ರಿ ತಾನು ಈ ಮೊದಲು ವಾಸವಿದ್ದ ಬಂಡೆ ಗುಡಿಸಲು ಪ್ರದೇಶಕ್ಕೆ ಬಂದಿದ್ದ. ರಾತ್ರಿ 8ರ ಸುಮಾರಿಗೆ ಸ್ನೇಹಿತರ ಜೊತೆ ಇದ್ದಾಗ ಜಗಳವಾಗಿದೆ. ಈ ವೇಳೆ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಚಾಮರಾಜಪೇಟೆ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ