ಆ್ಯಪ್ನಗರ

ಗಟ್ಸ್‌ ಇದ್ದವರು ಹೈಕೋರ್ಟ್‌ಗೆ ಹೋಗಲಿ: ತೆರಿಗೆ ಆಯುಕ್ತ

ದಾಳಿ ತಪ್ಪಾಗಿ ‌ಮಾಡಲಾಗಿದೆ ಎನಿಸಿದವರು ಗಟ್ಸ್ ಇದ್ದರೆ ಹೈಕೋರ್ಟ್‌ಗೆ ಹೋಗಲಿ ಎಂದು ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ರಜನೀಶ್ ಕುಮಾರ್ ಹೇಳಿದ್ದಾರೆ.

Vijaya Karnataka 22 Mar 2018, 6:02 pm
ಬೆಂಗಳೂರು: ನಮ್ಮ ಇಲಾಖೆ ಶೋಧ ಕಾರ್ಯ ತಪ್ಪಾಗಿ ಮಾಡಿದೆ ಎಂದು ಎಸಿದರೆ ಹೈಕೋರ್ಟ್‌ಗೆ ಹೋಗಬಹುದು, ಆದರೆ ರಾಜ್ಯದಿಂದ ಯಾರೂ ಹೈಕೋರ್ಟ್‌ಗೆ ಹೋಗಿಲ್ಲ. ದಾಳಿ ತಪ್ಪಾಗಿ ‌ಮಾಡಲಾಗಿದೆ ಎನಿಸಿದವರು ಗಟ್ಸ್ ಇದ್ದರೆ ಹೈಕೋರ್ಟ್‌ಗೆ ಹೋಗಲಿ ಎಂದು ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ರಜನೀಶ್ ಕುಮಾರ್ ಹೇಳಿದ್ದಾರೆ.
Vijaya Karnataka Web ಗಟ್ಸ್‌ ಇದ್ದವರು ಹೈಕೋರ್ಟ್‌ಗೆ ಹೋಗಲಿ: ತೆರಿಗೆ ಆಯುಕ್ತ


ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಜನೀಶ್‌ ಕುಮಾರ್‌, ಆದಾಯ ತೆರಿಗೆ ವಂಚನೆ ಮಾಡದೇ ಇದ್ದರೂ ಆದಾಯ ತೆರಿಗೆ ಇಲಾಖೆ ಸುಮ್ಮನೇ ಟಾರ್ಗೆಟ್ ಮಾಡಿದೆ ಎಂದು ಯಾರಿಗಾದರೂ ಎನಿಸಿದರೆ ಹೈಕೋರ್ಟ್ ಗೆ ರಿಟ್ ಪಿಟಿಶನ್ ಹಾಕಬಹುದು. ಆದರೆ ಈ ವರೆಗೆ ಯಾರೂ ಅರ್ಜಿ ಸಲ್ಲಿಸಿಲ್ಲ. ದಾಳಿ ತಪ್ಪಾಗಿ ‌ಮಾಡಲಾಗಿದೆ ಎನಿಸಿದವರು ಗಟ್ಸ್ ಇದ್ದರೆ ಹೈಕೋರ್ಟ್‌ಗೆ ಹೋಗಲಿ ಎಂದು ಹೇಳಿದ್ದಾರೆ.

'ಈ ವರ್ಷದಲ್ಲಿ ಐದು ಸಾವಿರ ಕೋಟಿ ರೂ.ಗೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದ್ದು . ಪ್ರಸಕ್ತ ವರ್ಷದಲ್ಲಿ ಕರ್ನಾಟಕ-ಗೋವಾ ವಲಯದಲ್ಲಿ ತೆರಿಗೆ ಸಂಗ್ರಹ ಲಕ್ಷ ಕೋಟಿ ರೂ. ದಾಟಿದೆ. ಅಲ್ಲದೇ ಅಂಕಿ ಅಂಶಗಳ ಪ್ರಕಾರ ಮುಂಬಯಿ ಮತ್ತು ದಿಲ್ಲಿಯನ್ನು ಪರಿಗಣನೆಗೆ ಕಳೆದ ಏಪ್ರಿಲ್ 2017ರಿಂದ 2018 ಮಾ.22ರ ವರೆಗೆ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿದೆ ಎಂದು ರಜನೀಶ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ