ಆ್ಯಪ್ನಗರ

ಗುತ್ತಿಗೆದಾರನ ಗಮನ ಬೇರೆಡೆ ಸೆಳೆದು 3 ಲಕ್ಷ ದೋಚಿದ್ದ ಒಜಿಕುಪ್ಪಂ ಗ್ಯಾಂಗ್‌

ವಂಚನೆ ಪ್ರಕರಣದಲ್ಲಿ ಇತ್ತೀಚೆಗೆ ಕೋಣನಕುಂಟೆ ಪೊಲೀಸರು ಬಂಧಿಸಿದ್ದ ಆಂಧ್ರಪ್ರದೇಶದ ಓಜಿಕುಪ್ಪಂ ಗ್ಯಾಂಗ್‌, ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯಲ್ಲೂ ಗುತ್ತಿಗೆದಾರರೊಬ್ಬರ ಗಮನ ಬೇರೆಡೆ ಸೆಳೆದು 3 ಲಕ್ಷ ರೂ. ದೋಚಿದ್ದ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ.

Vijaya Karnataka 23 Dec 2018, 5:00 am
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಇತ್ತೀಚೆಗೆ ಕೋಣನಕುಂಟೆ ಪೊಲೀಸರು ಬಂಧಿಸಿದ್ದ ಆಂಧ್ರಪ್ರದೇಶದ ಓಜಿಕುಪ್ಪಂ ಗ್ಯಾಂಗ್‌, ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯಲ್ಲೂ ಗುತ್ತಿಗೆದಾರರೊಬ್ಬರ ಗಮನ ಬೇರೆಡೆ ಸೆಳೆದು 3 ಲಕ್ಷ ರೂ. ದೋಚಿದ್ದ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ.
Vijaya Karnataka Web robbery2


ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಗ್ಯಾಂಗ್‌ನ ಪ್ರವೀಣ್‌ (27), ರಮೇಶ್‌ ಮೋಜಸ್‌ (34), ರಾಜು (21), ಕಾರ್ತಿಕ್‌ (29) ಹಾಗೂ ಅಂಕಯ್ಯನನ್ನು (19) ಚಂದ್ರ ಲೇಔಟ್‌ ಪೊಲೀಸರು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ನಂತರ ಪ್ರವೀಣ್‌ನನ್ನು ಓಜಿಕುಪ್ಪಂಗೆ ಕರೆದೊಯ್ದು ದೋಚಿದ ಹಣ ಜಪ್ತಿ ಮಾಡಲಾಯಿತು.

ವಿಜಯನಗರದ ಎ.ಡಿ.ಪುರುಷೋತ್ತಮ್‌ ಎಂಬುವರು, ಸೆ.28ರ ಮಧ್ಯಾಹ್ನ 3.45ರ ಸುಮಾರಿಗೆ ಕೆನರಾ ಬ್ಯಾಂಕ್‌ನ ಚಂದ್ರ ಲೇಔಟ್‌ ಶಾಖೆಯಲ್ಲಿ 3 ಲಕ್ಷ ರೂ. ಡ್ರಾ ಮಾಡಿದ್ದರು. ಗ್ರಾಹಕರ ಸೋಗಿನಲ್ಲಿ ಬ್ಯಾಂಕ್‌ನಲ್ಲೇ ಇದ್ದ ಆರೋಪಿಗಳು, ಹಣ ತೆಗೆದುಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪುರುಷೋತ್ತಮ್‌ ಅವರನ್ನು ತಮ್ಮ ಬೈಕ್‌ಗಳಲ್ಲಿ ಹಿಂಬಾಲಿಸಿದ್ದರು.

ಬ್ಯಾಂಕ್‌ನಿಂದ ಹೊರಟು ಬಾಪೂಜಿ ಲೇಔಟ್‌ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಾಗ ಟಯರ್‌ ಪಂಕ್ಚರ್‌ ಆಗಿದೆ ಎಂದು ಅವರಿಗೆ ಅನಿಸಿತ್ತು. ಹೀಗಾಗಿ ಪುರುಷೋತ್ತಮ್‌ ಸ್ಕೂಟರ ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರು. ಆ ವೇಳೆ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು, ನಿಮ್ಮ ಹಣ ಬಿದ್ದಿದೆ ಎಂದು ಎರಡು ನೋಟುಗಳನ್ನು ಎತ್ತಿಕೊಟ್ಟಿದ್ದರು. ಈ ವೇಳೆ ಸ್ಕೂಟರ್‌ ಬಳಿ ಬಂದಿದ್ದ ಮತ್ತಿಬ್ಬರು, ಡಿಕ್ಕಿ ತೆಗೆದು 3 ಲಕ್ಷ ರೂ. ದೋಚಿದ್ದರು. ಪುರುಷೋತ್ತಮ್‌ ಅವರು ಮತ್ತೆ ಸ್ಕೂಟರ್‌ ಬಳಿ ಬರುವಷ್ಟರಲ್ಲಿ ಹಣ ಕಾಣೆಯಾಗಿತ್ತು. ಬಳಿಕ ಪುರುಷೋತ್ತಮ ಅವರು ಚಂದ್ರ ಲೇಔಟ್‌ ಠಾಣೆಗೆ ದೂರು ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ