ಆ್ಯಪ್ನಗರ

ವೃದ್ದೆ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಅಪಾರ್ಟ್‌ಮೆಂಟೊಂದರಲ್ಲಿ ನೆಲಸಿದ್ದ ವೃದ್ದೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Vijaya Karnataka 6 Feb 2019, 5:00 am
ಬೆಂಗಳೂರು : ಅಪಾರ್ಟ್‌ಮೆಂಟೊಂದರಲ್ಲಿ ನೆಲಸಿದ್ದ ವೃದ್ದೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
Vijaya Karnataka Web old lady found dead murder suspect
ವೃದ್ದೆ ಅನುಮಾನಾಸ್ಪದ ಸಾವು: ಕೊಲೆ ಶಂಕೆ


ಕೆ.ಎಸ್‌.ಗಾರ್ಡನ್‌ ನಿವಾಸಿ ಸಂತೋಷಿ ದೇವಿ ಸುಲ್ತಾನಿಯಾ (70) ಮೃತಪಟ್ಟವರು. ಮಂಗಳವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು 6 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.

ರಾಜಸ್ತಾನ ಮೂಲದ ಸಂತೋಷಿ ದೇವಿ ಪತಿ ನವರಂಗ್‌ ಸುಲ್ತಾನಿಯಾ ಮತ್ತು ಪುತ್ರನೊಂದಿಗೆ ಲೀಸಾ ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿ ನೆಲೆಸಿದ್ದರು. ನವರಂಗ್‌ ಸುಲ್ತಾನಿಯಾ ಜೆ.ಸಿ.ರೋಡ್‌ನಲ್ಲಿ ಕಂಪ್ಯೂಟರ್‌ ಬಿಡಿ ಭಾಗಗಳ ಅಂಗಡಿ ಇಟ್ಟುಕೊಂಡಿದ್ದಾರೆ. ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೇ ಅಂಗಡಿ ನೋಡಿಕೊಳ್ಳುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಮೂವರೂ ಒಟ್ಟಿಗೇ ಕುಳಿತು ಊಟ ಮಾಡಿದ್ದರು. 3.15ರ ಸುಮಾರಿಗೆ ತಂದೆ ಮತ್ತು ಮಗ ಅಂಗಡಿಗೆ ವಾಪಸಾಗಿದ್ದರು. ಸಂಜೆ 4 ಗಂಟೆ ವೇಳೆಗೆ ರಾಜಸ್ತಾನದಲ್ಲಿರುವ ಪುತ್ರಿ ಪದೇ ಪದೇ ಕರೆ ಮಾಡಿದರೂ ಸಂತೋಷಿ ದೇವಿ ಅವರು ಕರೆ ಸ್ವೀಕರಿಸಿರಲಿಲ್ಲ. ಈ ಕಾರಣಕ್ಕೇ ಅಂಗಡಿಯಲ್ಲಿದ್ದ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸಂಜೆ ಐದು ಗಂಟೆ ಸುಮಾರಿಗೆ ತಂದೆ, ಮಗ ಇಬ್ಬರೂ ಮನೆಗೆ ಬಂದು ಹೊರಗಿನಿಂದ ಕಾಲಿಂಗ್‌ ಬೆಲ್‌ ಒತ್ತಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಸಂತೋಷಿ ದೇವಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕುತ್ತಿಗೆಯಲ್ಲಿ ಚಾಕುವಿನಿಂದ ಇರಿದ ಗಾಯವಿದೆ. ತಲೆಯ ಹಿಂಬಾಗಕ್ಕೆ ಹೊಡೆತ ಬಿದ್ದಿದೆ. ಆದರೆ, ಮನೆಯ ಬಾಗಿಲು ಮಾತ್ರ ಒಳಗಿನಿಂದಲೇ ಲಾಕ್‌ ಆಗಿತ್ತು. ಒಳಗಿನಿಂದಲೇ ಚಿಲಕ ಕೂಡ ಹಾಕಿಕೊಂಡಿದ್ದರು. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ.

ದೇವಿ ಅವರು ತಾವಾಗೇ ಚಾಕು ಇರಿದುಕೊಂಡು ಆತ್ಮಹತ್ಯಗೆ ಪ್ರಯತ್ನಿಸಿದರೇ? ಆಕಸ್ಮಿಕವೇ ? ಅಥವಾ ಮನೆಯವರೇ ಕೊಲೆ ಮಾಡಿದ್ದಾರಾ ? ಎನ್ನುವ ಮೂರೂ ಕೋನಗಳಲ್ಲಿ ತನಿಖೆ ಮುಂದುವರಿದಿದೆ. ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ