ಆ್ಯಪ್ನಗರ

ನೆರವಿಗೆ ಬಂದವನ ಸರ ಕದ್ದ ವೃದ್ಧೆ

ಸ್ಯಾಂಕಿ ಉದ್ಯಾನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ಮಾತನಾಡಿಸಿ, ರಸ್ತೆ ದಾಟಲು ನೆರವಾಗುವಂತೆ ಕೋರಿದ ವೃದ್ಧ ಮಹಿಳೆಯೊಬ್ಬಳು 40 ಗ್ರಾಂ ಚಿನ್ನದ ಸರ ದೋಚಿದ್ದಾಳೆ.

Vijaya Karnataka 1 Feb 2019, 5:00 am
ಬೆಂಗಳೂರು : ಸ್ಯಾಂಕಿ ಉದ್ಯಾನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ಮಾತನಾಡಿಸಿ, ರಸ್ತೆ ದಾಟಲು ನೆರವಾಗುವಂತೆ ಕೋರಿದ ವೃದ್ಧ ಮಹಿಳೆಯೊಬ್ಬಳು 40 ಗ್ರಾಂ ಚಿನ್ನದ ಸರ ದೋಚಿದ್ದಾಳೆ.
Vijaya Karnataka Web old lady requested for help and snatched the chain
ನೆರವಿಗೆ ಬಂದವನ ಸರ ಕದ್ದ ವೃದ್ಧೆ


ಜ.25ರಂದು ಸಂಜೆ 5.30ರ ವೇಳೆಗೆ ಘಟನೆ ನಡೆದಿದೆ. ಬಸವೇಶ್ವರ ನಗರ ನಿವಾಸಿ ರವಿ (55) ಸರ ಕಳೆದುಕೊಂಡವರು.

''ಸ್ನೇಹಿತನ ಜೊತೆ ಮಾತನಾಡುತ್ತ ಕುಳಿತಿದ್ದಾಗ ಪಕ್ಕದಲ್ಲೇ ಓರ್ವ 60 ವರ್ಷದ ವೃದ್ಧೆ ಬಂದು ಕುಳಿತು ಮಾತು ಕೇಳಿಸಿಕೊಳ್ಳುತ್ತಿದ್ದಳು. ಸ್ನೇಹಿತ ಹೋದ ತಕ್ಷಣ ನನ್ನ ಬಳಿ ಬಂದ ಮಹಿಳೆ, ಏಕೆ ಸ್ನೇಹಿತನ ಜೊತೆ ಜೋರಾಗಿ ಮಾತನಾಡುತ್ತಿದ್ದಿ ಎಂದು ಕೇಳಿದ್ದಳು. ಹಣ ಮರಳಿಸಬೇಕಿದ್ದ ಕಾರಣ ಜೋರಾಗಿ ಮಾತನಾಡುತ್ತಿದ್ದೆ ಎಂದು ತಿಳಿಸಿದೆ. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿ ನನ್ನ ಕುತ್ತಿಗೆ ಭಾಗದಲ್ಲಿ ಕೈ ತಟ್ಟಿ ಸಮಾಧಾನ ಮಾಡುವಂತೆ ಮಹಿಳೆ ವರ್ತಿಸಿದ್ದಳು. ಅದಾದ ಸ್ವಲ್ಪ ಹೊತ್ತಿನಲ್ಲೇ ನನ್ನ ಕಣ್ಣು ಮಂಜು ಆಗಿರುವ ಅನುಭವ ಆಯಿತು'' ಎಂದು ದೂರಿನಲ್ಲಿ ರವಿ ವಿವರಿಸಿದ್ದಾರೆ

''ಕಣ್ಣು ಒರೆಸಿಕೊಳ್ಳುತ್ತಿದ್ದಾಗ ಆ ಮಹಿಳೆ, ನನಗೆ ಗೇಟ್‌ವರೆಗೆ ಬಿಡು ಎಂದು ಕೇಳಿದಳು. ಮಾನವೀಯತೆ ದೃಷ್ಟಿಯಿಂದ ಗೇಟ್‌ವರೆಗೆ ಬಿಟ್ಟಾಗ, ಮತ್ತೆ ರಸ್ತೆ ದಾಟಿಸು ಎಂದಳು. ರಸ್ತೆ ದಾಟಿಸಿದಾಗ ಕನಿಕರ ಹುಟ್ಟಿ ಅಜ್ಜಿ ಎಂದು ಕರೆದು 200 ರೂ. ಕೊಟ್ಟು ಆಟೋದಲ್ಲಿ ಹೋಗಲು ಹೇಳಿದೆ. ನಂತರ ಮನೆಗೆ ಬಂದಾಗ ಕತ್ತಿನಲ್ಲಿದ್ದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ಮಾತನಾಡಿಸುವ ನೆಪದಲ್ಲಿ ಮಹಿಳೆಯ ನನ್ನ ಸರ ದೋಚಿರುವ ಸಾಧ್ಯತೆ ಇದೆ,'' ಎಂದು ಸದಾಶಿವನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ