ಆ್ಯಪ್ನಗರ

ಎಫ್‌ಡಿಎ ಮಂಜುನಾಥ್‌ ವಿರುದ್ಧ ಮತ್ತೊಂದು ಕೇಸ್‌ ದಾಖಲು

ಪ್ರಮುಖ ರಾಜಕಾರಣಿಗಳು, ಗಣ್ಯರ ಜೊತೆಗಿನ ಫೋಟೋ ತೋರಿಸಿ ಕೆಲಸ ಕೊಡಿಸುವುದಾಗಿ ಹಲವರನ್ನು ವಂಚಿಸಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಪಶು ಸಂಗೋಪನೆ ಇಲಾಖೆಯ ಎಫ್‌ಡಿಎ ಮಂಜುನಾಥನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

Vijaya Karnataka 30 Dec 2018, 5:00 am
ಬೆಂಗಳೂರು: ಪ್ರಮುಖ ರಾಜಕಾರಣಿಗಳು, ಗಣ್ಯರ ಜೊತೆಗಿನ ಫೋಟೋ ತೋರಿಸಿ ಕೆಲಸ ಕೊಡಿಸುವುದಾಗಿ ಹಲವರನ್ನು ವಂಚಿಸಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಪಶು ಸಂಗೋಪನೆ ಇಲಾಖೆಯ ಎಫ್‌ಡಿಎ ಮಂಜುನಾಥನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
Vijaya Karnataka Web one more case against fda
ಎಫ್‌ಡಿಎ ಮಂಜುನಾಥ್‌ ವಿರುದ್ಧ ಮತ್ತೊಂದು ಕೇಸ್‌ ದಾಖಲು


ಈತನ ವಿರುದ್ಧ ವಿಜಯಪುರ ಮೂಲದ ಹನುಮಂತ ದೇಸಾಯಿ ಎಂಬುವರು ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದಾರೆ. ''2017ರ ಜನವರಿಯಲ್ಲಿ ಪಿಡಿಒ ಲಿಖಿತ ಪರೀಕ್ಷೆ ಬರೆದಿದ್ದೆ. ನನಗೆ ಕರೆ ಮಾಡಿದ್ದ ಮಂಜುನಾಥ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂದು ಪರಿಚಯಿಸಿಕೊಂಡಿದ್ದ. ಪಿಡಿಒ ಕೆಲಸ ಕೊಡಿಸುತ್ತೇನೆ ಎಂದಿದ್ದ. ಈ ಬಗ್ಗೆ ಮಾತನಾಡಲು ಬೆಂಗಳೂರಿನ ಲೀ ಮೆರಿಡಿಯನ್‌ ಹೊಟೇಲ್‌ಗೆ ಬರಲು ಹೇಳಿದ್ದ. ಅದರಂತೆ 2017ರ ಜ.27ರಂದು ನನ್ನ ಮಾವ ಲಕ್ಷ್ಮಣ್‌ ಜೊತೆ ಹೋಗಿದ್ದೆ. ರಾಜ್ಯ ಸರಕಾರಿ ನೌಕರರ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಎಂದೂ ಆತ ಹೇಳಿಕೊಂಡಿದ್ದ. ಕೆಲಸ ಕೊಡಿಸಲು 20 ಲಕ್ಷ ರೂ. ಡಿಮ್ಯಾಂಡ್‌ ಮಾಡಿದ್ದ'' ಎಂದು ದೂರಿನಲ್ಲಿ ಹನುಮಂತ ಆರೋಪಿಸಿದ್ದಾರೆ.

''5 ಲಕ್ಷ ರೂ. ಮಾತ್ರ ಕೊಡಲು ಸಾಧ್ಯ ಎಂದು ಹೇಳಿದ್ದೆ. ಆಗ 6 ಲಕ್ಷ ರೂ. ಕೊಡಲು ಹೇಳಿ, ತುರ್ತಾಗಿ 4 ಲಕ್ಷ ರೂ. ಕೊಡು ಎಂದು ತನ್ನ ಬ್ಯಾಂಕ್‌ ಖಾತೆ ವಿವರ ನೀಡಿದ್ದ. ಆತನ ಮಾತನ್ನು ನಂಬಿ ಜ.30ರಿಂದ ಏ.4ರ ನಡುವೆ ಒಟ್ಟು 3.50 ಲಕ್ಷ ರೂ. ಜಮಾ ಮಾಡಿದ್ದೆ. ಕೆಲಸ ಸಿಗದ ಕಾರಣ, ಹಣ ಮರಳಿಸು ಎಂದು ಒತ್ತಾಯಿಸಿದಾಗ 75 ಸಾವಿರ ರೂ. ಮಾತ್ರ ಕೊಟ್ಟಿದ್ದಾನೆ. ಬಾಕಿ ಹಣ ಮರಳಿಸಿಲ್ಲ,'' ಎಂದು ಹನುಮಂತ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆಲಸ ಕೊಡಿಸುವುದು, ವರ್ಗಾವಣೆ ಮಾಡಿಸುವುದಾಗಿ ಮಂಜುನಾಥ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ