ಆ್ಯಪ್ನಗರ

ಕಾಟನ್‌ಪೇಟೆಯಲ್ಲಿ ಸಿಕ್ಕ ಸಿಕ್ಕವರಿಗೆ ಇರಿತ ಪ್ರಕರಣ: ಮತ್ತೊಬ್ಬ ಗಾಯಾಳು ಸಾವು..!

ಭಾನುವಾರ (ಅ.18) ಬೆಳಗ್ಗೆ ಮಟನ್‌ ಖರೀದಿಗೆಂದು ಬಾಳೇಕಾಯಿ ಮಂಡಿ ಬಳಿಯ ಮಟನ್‌ ಶಾಪ್‌ಗೆ ತೆರಳಿದ್ದ ಗಣೇಶ್‌, ಅಲ್ಲಿದ್ದ ಚಾಕು ತೆಗೆದುಕೊಂಡು ಛಲವಾದಿ ಪಾಳ್ಯ, ಭಕ್ಷಿ ಗಾರ್ಡನ್‌ ಪ್ರದೇಶದಲ್ಲಿಓಡಾಡಿಕೊಂಡು ಎದುರಿಗೆ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ.

Vijaya Karnataka Web 27 Oct 2020, 9:27 am
ಬೆಂಗಳೂರು: ಕಾಟನ್‌ಪೇಟೆ ಪ್ರದೇಶದಲ್ಲಿ ಗಣೇಶ್‌ ಎಂಬಾತನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ರಾಜೇಶ್‌ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಿಕ್ಕ ಸಿಕ್ಕವರ ಮೇಲೆ ಚಾಕು ಇರಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ.
Vijaya Karnataka Web police
Representative image.


ಬೆಂಗಳೂರು ಗ್ಯಾಂಗ್‌ರೇಪ್‌ ಪ್ರಕರಣದ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಘಟನೆ ನಡೆದ ದಿನ ಭಾನುವಾರ ಬೆಳಗ್ಗೆ ಮಾರಿ ಎಂಬುವರು ಮೃತಪಟ್ಟಿದ್ದರು. ಆರೋಪಿ ಗಣೇಶನನ್ನು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ನಿಮ್ಹಾನ್ಸ್‌ನಲ್ಲೂ ತಪಾಸಣೆಗೆ ಒಳಪಡಿಸಲು ಅನುಮತಿ ಪಡೆಯಲಾಗಿದೆ ಎಂದು ಕಾಟನ್‌ಪೇಟೆ ಪೊಲೀಸರು ತಿಳಿಸಿದ್ದಾರೆ.
ಗೆಳೆಯನಿಗೆ ಮದ್ಯ ಕುಡಿಸಿ ಕೊಲೆ ಮಾಡಿ ಜಮೀನಿನಲ್ಲಿ ಶವ ಹೂತು ಹಾಕಿದ್ದ ಕಿರಾತಕರು..!

ಸಾಮಾನ್ಯವಾಗಿರುವ ವ್ಯಕ್ತಿ ಕೆಲವೊಮ್ಮೆ ಮಾನಸಿಕವಾಗಿ ಬದಲಾಗಬಹುದು. ಆ ಸ್ಥಿತಿ ಕೆಲ ಕಾಲ ಇರಬಹುದು. ಹೀಗಾಗಿ, ಇಂತಹ ಅಸಹಜ ಮಾನಸಿಕ ಪರಿಸ್ಥಿತಿಯನ್ನು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಿಮ್ಹಾನ್ಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲಿನ ವರದಿ ಬಂದ ಬಳಿಕವೇ ಆರೋಪಿ ಗಣೇಶನ ಆರೋಗ್ಯ ಸ್ಥಿತಿಯ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಟ ಮಟ ಮಧ್ಯಾಹ್ನವೇ ಶೂಟೌಟ್‌ ಮಾಡಿದ ಕಿರಾತಕರು; ಹರ್ಯಾಣದ ರಸ್ತೆಯಲ್ಲಿ ಬಿತ್ತು 21ರ ಯುವತಿಯ ಹೆಣ..!

ಭಾನುವಾರ (ಅ.18) ಬೆಳಗ್ಗೆ ಮಟನ್‌ ಖರೀದಿಗೆಂದು ಬಾಳೇಕಾಯಿ ಮಂಡಿ ಬಳಿಯ ಮಟನ್‌ ಶಾಪ್‌ಗೆ ತೆರಳಿದ್ದ ಗಣೇಶ್‌, ಅಲ್ಲಿದ್ದ ಚಾಕು ತೆಗೆದುಕೊಂಡು ಛಲವಾದಿ ಪಾಳ್ಯ, ಭಕ್ಷಿ ಗಾರ್ಡನ್‌ ಪ್ರದೇಶದಲ್ಲಿಓಡಾಡಿಕೊಂಡು ಎದುರಿಗೆ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಒಟ್ಟು ಆರು ಜನರು ಗಾಯಗೊಂಡಿದ್ದರು. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ