ಆ್ಯಪ್ನಗರ

ಉಡುಪಿ: ಒಟಿಪಿ ಶೇರ್ ಮಾಡಿ 1.79 ಲಕ್ಷ ಖೋತಾ!

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವಿಜಯ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ವ್ಯಕ್ತಿಯೊಬ್ಬರು ಆನ್‌ಲೈನ್ ವಂಸನೆ ಮೂಲಕ 1 ಲಕ್ಷದ 79 ಸಾವಿರಕ್ಕೂ ಹೆಚ್ಚು ಹಣ ಕಳೆದು ಕೊಂಡಿರುವ ಘಟನೆ ನಡೆದಿದೆ.

Vijaya Karnataka Web 24 Apr 2020, 2:02 pm
ಉಡುಪಿ: ಕಾರ್ಕಳ ವಿಜಯ ಬ್ಯಾಂಕಿನಲ್ಲಿ ಕೆ. ಧರ್ಮರಾಜ ಕಂಬಳಿ ಅವರು ಹೊಂದಿದ್ದ ಎಸ್‌ಬಿ ಖಾತೆಯಿಂದ 1,79,493ರೂ. ಹಣವನ್ನು ಅಪರಿಚಿತರು ಆನ್‌ಲೈನ್‌ ಮೂಲಕ ಲಪಟಾಯಿಸಿದ್ದಾರೆ. ವಿಜಯ ಬ್ಯಾಂಕಿನಿಂದ ದೂರವಾಣಿ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ ಅಪರಿಚಿತರು ನಿಮ್ಮ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿದ್ದು ಕ್ರಿಯಾಶೀಲಗೊಳಿಸಲು ಮೊಬೈಲಿಗೆ ಬಂದ ಒಟಿಪಿ ಕೊಡಬೇಕು ಎಂದು ಕೇಳಿ ಪಡೆದು ಮೋಸ ವೆಸಗಿದ್ದಾರೆ. ಘಟನೆ ಸಂಬಂಧ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web online


ಲಾರಿ ಚಾಲಕ, ಕ್ಲೀನರ್‌ ವಿರುದ್ಧ ಪ್ರಕರಣ:
ಸರಕು ಸಾಗಾಟ ಲಾರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರನ್ನು ಕರೆದೊಯ್ಯುತ್ತಿದ್ದ ಲಾರಿ ಚಾಲಕ ಮತ್ತು ಕ್ಲೀನರ್‌ ಹಾವೇರಿಯ ಶ್ರೀಕಾಂತ ಗಾಣಿಗೇರ, ಬೆಳಗಾವಿಯ ಅಭಿಮನ್ಯು ಎಸ್‌. ಲಮಾಣಿ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೆಕಟ್ಟೆಯಲ್ಲಿ ಕೋವಿಡ್‌ 19 ಹರಡುವುದನ್ನು ತಡೆಗಟ್ಟಲು ಮುಂಜಾಗರೂಕತಾ ಕ್ರಮವಾಗಿ ನಿರ್ಮಿಸಿದ ಚೆಕ್‌ಪೋಸ್ಟ್‌ ಬಳಿ ಸಿಬ್ಬಂದಿಯೊಂದಿಗೆ ಸಹಾಯಕ ಪೊಲೀಸ್‌ ಉಪ ನಿರೀಕ್ಷಕಿ ಪುಷ್ಪಾ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ