ಆ್ಯಪ್ನಗರ

ರೌಡಿ ಮುನಿಕೃಷ್ಣನ ಕಾಲಿಗೆ ಗುಂಡು ಹಾರಿಸಿ ಬಂಧನ

ಬುಧವಾರ ಬೆಳಗ್ಗೆ ಬಾಗಲೂರು ಸಮೀಪದ ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿ ಬಳಿ ಆರೋಪಿ ಮುನಿಕೃಷ್ಣ ಮತ್ತು ಸಹಚರರು ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪಾಳು ಮನೆ ಬಳಿ ಹುಡುಕುತ್ತಿದ್ದಾಗ ಒಬ್ಬ ಆರೋಪಿ ಓಡಿ ಹೋಗಿದ್ದಾನೆ.

Vijaya Karnataka Web 3 Jun 2020, 8:43 pm
ಬೆಂಗಳೂರು: ಬಡವರಿಗೆ ಆಹಾರದ ಕಿಟ್‌ ವಿತರಿಸುತ್ತಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ರೌಡಿ ಮುನಿಕೃಷ್ಣ ಅಲಿಯಾಸ್‌ ಕಪ್ಪೆ ಎಂಬಾತನ ಕಾಲಿಗೆ ಅಮೃತಹಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Vijaya Karnataka Web ರೌಡಿ ಮುನಿಕೃಷ್ಣ
ರೌಡಿ ಮುನಿಕೃಷ್ಣ


ಕೊಲೆ ಯತ್ನ, ಹಲ್ಲೆ, ಸೇರಿದಂತೆ ಎಂಟು ಕ್ರಿಮಿನಲ್‌ ಕೇಸ್‌ಗಳಲ್ಲಿ ಭಾಗಿಯಾಗಿರುವ ರೌಡಿ ಮುನಿಕೃಷ್ಣ ಮೇ 4ರಂದು ಸಂಜೆ ಅಮೃತಹಳ್ಳಿಯ ಹೊಯ್ಸಳ ಲೇಔಟ್‌ನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಯಶವಂತ್‌ ಮತ್ತು ದರ್ಶನ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದ. ಕಲ್ಲಿನಿಂದ ಹಲ್ಲೆ ಮಾಡಿದ್ದರಿಂದ ಯಶವಂತ್‌ ತಲೆಗೆ ಹೊಲಿಗೆ ಹಾಕಲಾಗಿತ್ತು. ನಂತರ ಆಸ್ಪತ್ರೆಗೆ ದಾಖಲಾಗಿ ಯಶವಂತ್‌ ಚಿಕಿತ್ಸೆ ಪಡೆದಿದ್ದ. ಈ ಸಂಬಂಧ ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮುನಿಕೃಷ್ಣನ ಬಂಧನಕ್ಕೆ ಬಲೆ ಬೀಸಿದ್ದರು.

ಬುಧವಾರ ಬೆಳಗ್ಗೆ ಬಾಗಲೂರು ಸಮೀಪದ ಮಿಟ್ಟಗಾನಹಳ್ಳಿ ಕಲ್ಲುಕ್ವಾರಿ ಬಳಿ ಆರೋಪಿ ಮುನಿಕೃಷ್ಣ ಮತ್ತು ಸಹಚರರು ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪಾಳು ಮನೆ ಬಳಿ ಹುಡುಕುತ್ತಿದ್ದಾಗ ಒಬ್ಬ ಆರೋಪಿ ಓಡಿ ಹೋಗಿದ್ದಾನೆ. ಮತ್ತೊಬ್ಬ ಆರೋಪಿ ಮುನಿಕೃಷ್ಣನನ್ನು ಪೊಲೀಸ್‌ ಹೆಡ್‌ ಕಾನ್ಸ್‌ಟೆಬಲ್‌ ನಂದೀಶ್‌ ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಡ್ಯಾಗರ್‌ನಿಂದ ನಂದೀಶ್‌ ಕೈಗೆ ಇರಿದ ಆರೋಪಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಅರುಣ್‌ಕುಮಾರ್‌ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ, ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಮುನಿಕೃಷ್ಣ ಅಮಾಯಕ ಯುವಕರ ಮೇಲೆ ಹಲ್ಲೆಮಾಡಿ ತಾನು ರೌಡಿ ಎಂದು ಏರಿಯಾದಲ್ಲಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದ. ತನ್ನ ತಂಡಕ್ಕೆ ಅಮಾಯಕ ಬಡ ಹುಡುಗರನ್ನು ಸೇರಿಸಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಎಂದು ಅಮೃತಹಳ್ಳಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ